ಕನ್ನಡಪ್ರಭ ವಾರ್ತೆ ಮಂಗಳೂರು
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2024ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ಭಾನುವಾರ ರಾಜ್ಯ ಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್ ನಡೆಯಿತು.ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಕುದ್ರೋಳಿ ಕ್ಷೇತ್ರದ ಪರಿಸರದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ‘ಒನ್ ಸಿಟಿ ಒನ್ ಸ್ಪಿರಿಟ್’ ಧ್ಯೇಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ವ್ಯಸನ ಮುಕ್ತವಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಚಿಣ್ಣರಿಂದ ವೃದ್ಧರವರೆದೆ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಮ್ಯಾರಥಾನ್ನಲ್ಲಿ ಪಾಲ್ಗೊಂಡರು.
ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. 21 ಕಿ.ಮೀ, 10 ಕಿ.ಮೀ. ಸ್ಪರ್ಧೆ ಮತ್ತು 5 ಕಿ.ಮೀ. ಫನ್ ರನ್ ನಡೆಯಿತು.ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. 21 ಕಿ.ಮೀ. ಪ್ರಥಮ ಸ್ಥಾನ ವಿಜೇತರಿಗೆ 25 ಸಾವಿರ ರು., ದ್ವಿತೀಯ ಬಹುಮಾನ 15 ಸಾವಿರ ರು. ಹಾಗೂ ತೃತೀಯ 10 ಸಾವಿರ ರು., 10 ಕಿ.ಮೀ. ಹಾಫ್ ಮ್ಯಾರಥಾನ್ಗೆ ಪ್ರಥಮ 15 ಸಾವಿರ ರು., ದ್ವಿತೀಯ 10 ಸಾವಿರ ರು., ತೃತೀಯ 5 ಸಾವಿರ ರು. ಬಹುಮಾನ ನೀಡಲಾಯಿತು.
ಉದ್ಘಾಟನೆ: ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿ ಹಾಗೂ ಜನಾರ್ದನ ಪೂಜಾರಿ ಪುತ್ರ ಸಂತೋಷ್ ಜೆ. ಪೂಜಾರಿ, ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ದ.ಕ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಜೂಯಿಸ್ ಫಿಟ್ನೆಸ್ ಕ್ಲಬ್ನ ರಾಜೇಶ್ ಪಾಟಾಲಿ, ಕಬಡ್ಡಿಪಟು ರವಿ ಉರ್ವ, ಗೋಕರ್ಣನಾಥ ಸೇವಾದಳ ಸದಸ್ಯರು ಇದ್ದರು. ಆರ್.ಜೆ. ಅನುರಾಗ್ ನಿರೂಪಿಸಿದರು.............ಬಹುಮಾನ ವಿಜೇತರು
10 ಕೆ ಪುರುಷರ ವಿಭಾಗ: ಪ್ರಥಮ- ಮಂಗಳೂರಿನ ರಂಗಣ್ಣ ನಾಯ್ಕರ (33 ನಿಮಿಷ 53 ಸೆಕೆಂಡ್), ದ್ವಿತೀಯ- ಬೆಂಗಳೂರಿನ ಶ್ರೀಧರ ಎಸ್.ಎನ್. (33.55) ತೃತೀಯ- ಬೆಂಗಳೂರಿನ ಗೋವಿಂದರಾಜ ಎಚ್. (35.15).10ಕೆ ಮಹಿಳಾ ವಿಭಾಗ: ಪ್ರಥಮ- ಬೆಂಗಳೂರಿನ ಸ್ಮಿತಾ ಡಿ.ಆರ್. (41.09), ದ್ವಿತೀಯ- ಮೈಸೂರಿನ ಉಷಾ ಆರ್. (42.01), ತೃತೀಯ- ಮೈಸೂರಿನ ಪ್ರೀಯಾಂಕಾ ಮಾರುತಿ (44.48).
22ಕೆ ಪುರುಷರ ವಿಭಾಗ: ಪ್ರಥಮ- ಬೆಳಗಾವಿಯ ಶಿವಾನಂದ ಚಿಗರಿ (1ಗಂಟೆ 12 ನಿಮಿಷ 07 ಸೆಕೆಂಡ್), ದ್ವಿತೀಯ- ಹಾವೇರಿಯ ಪುರುಷೋತ್ತಮ ಆರ್. (1.13.28), ತೃತೀಯ- ಮೈಸೂರಿನ ಸಚಿನ್ ನಂದು (1.14.13).22ಕೆ ಮಹಿಳಾ ವಿಭಾಗ: ಪ್ರಥಮ- ಕೇರಳದ ಆಶಾ ಟಿ.ಪಿ. (1.30.20), ದ್ವಿತೀಯ- ಬೆಂಗಳೂರಿನ ಪ್ರಿಯಾಂಕಾ ಸಿ. (1.35.18), ತೃತೀಯ- ಮೈಸೂರಿನ ಅರ್ಚನಾ ಕೆ.ಎಂ. (1.36.14).