ಕನ್ನಡಪ್ರಭ ವಾರ್ತೆ ಮಂಗಳೂರು
ನೀರಿನ ಸಮಸ್ಯೆ ಇತ್ಯರ್ಥ:
ಕೊಡಿಯಾಲ್ಬೈಲ್ನಲ್ಲಿ ಯುಜಿಡಿ ಕಾಮಗಾರಿ ವೇಳೆ ನೀರಿನ ಪೈಪ್ಲೈನ್ ಒಡೆದು ಹೋದ ಕಾರಣ ನಗರದ ಆರೇಳು ವಾರ್ಡ್ಗಳಲ್ಲಿ ನೀರಿಗೆ ಸಮಸ್ಯೆಯಾಗಿತ್ತು. ಇದೀಗ ಪೈಪ್ಲೈನ್ ಸರಿಪಡಿಸಲಾಗಿದೆ. ಉಳಿದಂತೆ ನೀರು ಪೂರೈಕೆ ಆಗದ ಎತ್ತರದ ಪ್ರದೇಶ ಹಾಗೂ ಎಂಡ್ಪಾಯಿಂಟ್ಗಳಿಗೆ ಪಾಲಿಕೆಯ ಒಟ್ಟು ಆರು ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮೇಯರ್ ಹೇಳಿದರು.ಉಪ್ಪಿನಂಗಡಿ- ಎಎಂಆರ್ ಡ್ಯಾಂ ನಡುವೆ ಇರುವ ಬಿಳಿಯೂರು ಸರಳಿಕಟ್ಟೆ ಡ್ಯಾಂನಲ್ಲಿ ಎಎಂಆರ್ ಡ್ಯಾಂನ ಶೇ. 25ರಷ್ಟು ನೀರು ಶೇಖರಣೆ ಇದೆ. ಇತ್ತ ಹರೇಕಳ ಅಣೆಕಟ್ಟಿನಲ್ಲೂ ಸಾಕಷ್ಟು ನೀರಿದೆ. ತುಂಬೆ ಡ್ಯಾಂಗೆ ಒಳ ಹರಿವು ನಿಂತ ತಕ್ಷಣ ಡ್ಯಾಂನ ಕೆಳ ಭಾಗದಿಂದ ನೀರು ಹಾಯಿಸಿ ಡ್ಯಾಂ ನೀರಿನ ಮಟ್ಟವನ್ನುಕಾಯ್ದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಕೈಗಾರಿಕೆಗಳಿಗೆ ರೇಶನಿಂಗ್:ಒಳಹರಿವು ನಿಂತ ಕೂಡಲೆ ಕೈಗಾರಿಕೆಗಳಿಗೆ ನೀರಿನ ರೇಶನಿಂಗ್ ಮಾಡಲು ಹಾಗೂ ಕೃಷಿ ಬಳಕೆಗೂ ನೀರಿನ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದರು.ನೀರಿನ ಅಕ್ರಮ ಸಂಪರ್ಕದಾರರ ಮೇಲೆ ಎಫ್ಐಆರ್: ತುಂಬೆ ಡ್ಯಾಂನಿಂದ ನಗರಕ್ಕೆ ನೀರು ಪೂರೈಸುವ ಮುಖ್ಯ ಪೈಪ್ಲೈನ್ನಿಂದ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವ ಅನೇಕ ಸಂಪರ್ಕಗಳನ್ನು ಈಗಾಗಲೇ ಕಡಿತ ಮಾಡಲಾಗಿದೆ. ಕುಡಿಯುವ ನೀರಿಗೆ ಮಾನವೀಯತೆ ನೆಲೆಯಲ್ಲಿ ನೀರು ನೀಡಬಹುದು. ಆದರೆ ವಾಣಿಜ್ಯ ಉದ್ದೇಶ ಹಾಗೂ ಕೃಷಿಗೆ ಅಕ್ರಮ ಸಂಪರ್ಕ ಹೊಂದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಎಚ್ಚರಿಸಿದರು.