- ಶೃಂಗೇರಿ ಕೆರೆಕಟ್ಟೆಯಲ್ಲಿ ಸೋಮವಾರದಿಂದ ಕಾರ್ಯಾಚರಣೆ ಶುರು.
ಶೃಂಗೇರಿ: ಕೆರೆಕಟ್ಟೆ ಸಮೀಪ ಕೆರೆಗೆದ್ದೆಯಲ್ಲಿ ಇಬ್ಬರನ್ನು ಬಲಿಪಡೆದಿದ್ದ ಕಾಡಾನೆಯನ್ನು ಭಾನುವಾರ ಸಂಜೆ ವೇಳೆಗೆ ಸೆರೆ ಹಿಡಿದು ಮೊದಲ ದಿನದ ಕಾರ್ಯಾಚರಣೆಯಲ್ಲೆ ಯಶಸ್ವಿಯಾಗಿದೆ.ಸಮೀಪದ ಭಗವತಿ ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಆನೆಯನ್ನು ಸಂಜೆಯ ವೇಳೆ ದುಬಾರೆ ಆನೆ ಶಿಬಿರದ 3 ಕುಮ್ಕಿ ಆನೆಗಳನ್ನು ಬಳಸಿ ಸೆರೆ ಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ. ಭಾನುವಾರ ಬೆಳಿಗ್ಗೆಯಷ್ಟೇ ದುಬಾರೆ ಆನೆ ಶಿಬಿರ ಹಾಗೂ ಹಾರಂಗಿ ಆನೆ ಶಿಬಿರಗಳಿಂದ ಐದು ಕುಮ್ಕಿ ಆನೆಗಳನ್ನು ಕೆರೆಕಟ್ಟೆಗೆ ಕರೆತರಲಾಗಿತ್ತು.
ಕೆರೆಕಟ್ಟೆಯಲ್ಲಿ ಆನೆಗಳಿಗೆ ವಿಶ್ರಾಂತಿ ನೀಡಲಾಗಿತ್ತು, ಕಾಡಾನೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಸೋಮವಾರ ಕಾರ್ಯಾಚರಣೆ ಎಂದು ಹೇಳಲಾಗಿತ್ತಾದರೂ ಕಾಡಾನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀಡು ಬಿಟ್ಟು ಶೀರ್ಲು ಬಳಿ ರೈತರ ಜಮೀನಿನ ಮೇಲೆ ದಾಳಿ ಮಾಡಿ ಬೆಳೆ, ತೋಟ ನಾಶಗೊಳಿಸಿತ್ತು.ಇದನ್ನು ಗಮನಿಸಿದ್ದ ಅರಣ್ಯ ಇಲಾಖೆ ಭಾನುವಾರ ಸಂಜೆಯ ವೇಳೆ ಆನೆ ಶಿಬಿರದ ಮೂರು ಆನೆಗಳನ್ನು ಬಳಸಿ ಸೆರೆ ಹಿಡಿಯಲಾಗಿದೆ. ಒಂದೇ ದಿನದಲ್ಲಿ ಆನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಬ್ಬರನ್ನು ಬಲಿ ಪಡೆದು, ಸುತ್ತಮುತ್ತಲ ಪ್ರದೇಶಗಳಲ್ಲಿ ಭಯ ಭೀತಿ ಹುಟ್ಟಿಸಿದ್ದ ಆನೆ ಸೇರೆಯಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ತಾಲೂಕಿನ ಕೆರೆ ಪಂಚಾಯಿತಿ ಕೆರೆಕಟ್ಟೆ ಬಳಿ ಕೆರೆಗೆದ್ದೆಯಲ್ಲಿ ಶುಕ್ರವಾರ ಇಬ್ಬರನ್ನು ಬಲಿಪಡೆದ ನರಹಂತಕ ಕಾಡಾನೆ ಸೆರೆಹಿಡಿಯಲು ಕೊಡಗಿನ ದುಬಾರೆ ಆನೆ ಬಿಡಾರದಿಂದ ಐದು ಆನೆಗಳು ಭಾನುವಾರ ಮಧ್ಯಾಹ್ನ ಕೆರೆಕಟ್ಟೆಗೆ ಬಂದವು
ಕಾರ್ಯಾಚರಣೆ ಹಿನ್ನಲೆಯಲ್ಲಿ ದುಬಾರೆ ಆನೆ ಬಿಡಾರದ ಪ್ರಶಾಂತ, ಧನಂಜಯ, ಅಜಯ, ಹರ್ಷ, ಏಕಲವ್ಯ ಎಂಬ ಐದು ಆನೆಗಳ ತಂಡ ಕೆರೆಕಟ್ಟೆಯಲ್ಲಿ ಬೀಡು ಬಿಟ್ಟಿದ್ದವು. ಇಟಿಎಫ್ ಸಿಬ್ಬಂದಿ, ಅರವಳಿಕೆ ತಜ್ಞರ ತಂಡವೂ ಜತೆಗೂಡಿದೆ.
ಅರಣ್ಯ ಇಲಾಖೆಯಿಂದ ಮೃತರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ಚೆಕ್ ನೀಡಿ. ಆನೆ ಸೆರೆ ಹಿಡಿದು ಸ್ಥಳಾಂತರಿಸುವ ಭರವಸೆ ನೀಡಲಾಗಿತ್ತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅನೇಕ ಕುಟುಂಬಗಳು ತಲೆ ತಲಾಂತರದಿಂದ ವಾಸಿಸುತ್ತಿವೆ. ಬಹುತೇಕ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಬಡತನ ರೇಖೆಗಿಂದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳೇ ಆಗಿವೆ. ಅನುಕೂಲಸ್ಥ ಕುಟುಂಬಗಳು ಪರಿಹಾರ ಪಡೆದು ಹೊರಹೋದರೆ ಬಡ ಕುಟುಂಬಗಳು ಮಾತ್ರ ಉಳಿದಿವೆ. ಇತ್ತ ಪರಿಹಾರವೂ ಸಿಗುತ್ತಿಲ್ಲ. ಅತ್ತ ಪುನರ್ ವಸತಿಯೂ ಇಲ್ಲ. ಬದುಕು ಮೂರಾಬಟ್ಟೆಯಾಗಿದೆ.ಕಾಡು ಪ್ರಾಣಿಗಳ ಭಯದ ನೆರಳಲ್ಲಿ ಬದುಕುವಂತಾಗಿದೆ.
ಶೃಂಗೇರಿ ಕೆರೆಕಟ್ಟೆಯಲ್ಲಿ ಇಬ್ಬರ ಬಲಿ ಬಡಿದ ಕಾಡಾನೆ ಸೆರೆಗಾಗಿ ಕೊಡಗಿನ ದುಬಾರೆ ಆನೆ ಬಿಡರಾದಿಂದ ಲಾರಿಗಳನ್ನು ಕೆರೆಕಟ್ಟೆಗೆ ತರುತ್ತಿರುವುದು.
ಶೃಂಗೇರಿ ಕೆರೆಕಟ್ಟೆಯಲ್ಲಿ ಆನೆಗಳು ಲಾರಿಯಲ್ಲಿ ಬಂದಿಳಿಯುವಾಗ ಜನರು ಗಂಪುಗೂಡಿ ನೋಡುತ್ತಿರುವುದು.
ಶೃಂಗೇರಿ ಕೆರೆಪಂಚಾಯಿತಿ ಶೀರ್ಲು ಗ್ರಾಮದಲ್ಲಿ ಶನಿವಾರ ಕಾಡಾನೆ ಮತ್ತೆ ದಾಳಿ ನಡೆಸಿ ಜಮೀನು ಹಾನಿಗೊಳಿಸಿರುವುದು.