ಕನ್ನಡಪ್ರಭ ವಾರ್ತೆ ಸೊರಬ
ಬಾದಾಮಿ ಬನಶಂಕರಿ ಕ್ಷೇತ್ರದಲ್ಲಿ ಮೇ ೮ ಮತ್ತು ೯ ರಂದು ನಡೆಯುವ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶ ಹಾಗೂ ದೇವಾಂಗ ದಯಾನಂದಪುರಿ ಸ್ವಾಮೀಜಿ ಅವರ ೩೬ನೇ ಪಟ್ಟಾಭಿಷೇಕ ವಾರ್ಷಿಕೋತ್ಸವ ಮತ್ತು ತುಲಾಭಾರ ಸಮಾರಂಭದ ಅಂಗವಾಗಿ ಪಟ್ಟಣದ ಸೊಪ್ಪಿನಕೇರಿಯ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮೇ ೮ ಮತ್ತು ೯ರಂದು ನಡೆಯಲಿರುವ ಸಮಾರಂಭದಲ್ಲಿ ೧ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಟ್ರಸ್ಟ್ ಸ್ಥಾಪಿಸಿ ಮಠದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಜವಾಬ್ದಾರಿ ನೀಡಲಾಗಿದೆ. ಟ್ರಸ್ಟ್ ವತಿಯಿಂದ ಕೆಂಪಲಿಣಗನಹಳ್ಳಿ ಶಾಖಾಮಠದ ಆವರಣದಲ್ಲಿ ಒಂದು ಶಾಲಾ ಕಟ್ಟಡ ಮತ್ತು ಬೃಹತ್ತಾದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಸಮಾಜ ಬಾಂಧವರಿಗೆ ಅನುಕೂಲ ಮಾಡಲಾಗಿದೆ. ಕಳೆದ ೨೦ ವರ್ಷಗಳಿಂದ ರಾಜ್ಯ ದೇವಾಂಗ ಸಂಘವನ್ನು ಸ್ಥಾಪಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಸಹ ಮಾಡಲಾಗುತ್ತಿದೆ ಎಂದರು.ರಾಜ್ಯ ಮತ್ತು ದೇಶದ ವಿವಿಧಡೆ ನೆಲೆಸಿರುವ ದೇವಾಂಗ ಸಮಾಜದವರನ್ನು ಒಂದೆಡೆ ಸೇರಿಸಿ ಸಂಘಟನೆಯ ಶಕ್ತಿ ಪ್ರದರ್ಶನದ ಸದುದ್ದೇಶದ ಜೊತೆಗೆ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಇನ್ನೂ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ನೇಕಾರಿಕೆ ವೃತ್ತಿಯನ್ನೇ ಅವಲಂಭಿಸಿ ಬದುಕು ಕಟ್ಟಿಕೊಂಡವರಿಗೆ ಆಧುನಿಕ ತಂತ್ರಜ್ಞಾನದಿAದ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಮಾಡುವ ಉದ್ದೇಶದಿಂದ ಸಮಾವೇಶ ನಡೆಯಲಿದೆ ಎಂದರು.
ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ಆರ್. ಗಿರಿಯಪ್ಪ, ಕಾರ್ಯಕ್ರಮದ ಸ್ವಾಗತ ಸಮಿತಿ ಮಹಾ ಕಾರ್ಯದರ್ಶಿ ಟಿ. ರಾಜೇಶ್, ಕಾರ್ಯದರ್ಶಿ ಕೆ.ಸಿ.ತಿಮ್ಮಶೆಟ್ಟಿ, ದೇವಾಂಗ ಸಮಾಜದ ತಾಲೂಕು ಉಪಾಧ್ಯಕ್ಷ ಸುರೇಶ್ ಪಿ.ಅಂಗಡಿ, ಖಜಾಂಚಿ ಬಸವಂತಪ್ಪ ಮಾಸ್ತರ್, ನಿರ್ದೇಶಕ ಎಂ.ಎಸ್.ಸತೀಶ್, ಪ್ರಮುಖರಾದ ಅರುಣ್ ಆಟೋ, ಎ.ಪಿ.ರಂಗನಾಥ್, ಮಲ್ಲಿಕಾರ್ಜುನ, ಎ.ರಂಗನಾಥ್, ಎ.ಪಿ.ಕೃಷ್ಣಮೂರ್ತಿ, ಪರಸಪ್ಪ, ಹೇಮಪ್ಪ ಶಾಂತಗೇರಿ, ಶಶಿಧರ ಉರುಗನಹಳ್ಳಿ, ಓಂಕಾರಪ್ಪ, ಬಸವರಾಜ್, ಸಂತೋಷ್ ಸೊಪ್ಪಿನಕೇರಿ, ಇ.ವಿನೋಧ, ಎಂ.ಎಸ್. ಗೀತಾ, ಎಂ.ಸೀತಮ್ಮ, ಶಾರದಮ್ಮ, ದೇವಾಂಗ ಸಮಾಜದವರು ಹಾಜರಿದ್ದರು.