ಮಹಾಲಿಂಗಪುರ: ರೈತರಿಗಾಗಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೋಸ್ಕರ ಹಗಲಿರುಳು ಸೇವೆ ಮಾಡಲು ಸದಾ ಸಿದ್ಧವಾಗಿವೆ. ಇದರಿಂದ ರೈತರ ಹಣಕಾಸಿನ ಸ್ಥಿತಿ ಸುಧಾರಣೆ ಮಾಡಿಕೊಳ್ಳಲು ಸಹಕಾರಿಯಾಗಿವೆ ಎಂದು ನೂತನ ಅಧ್ಯಕ್ಷ ಮಹಾದೇವ ಮಾರಪುರ ಹೇಳಿದರು.
ಸಾಮಾನ್ಯ ವರ್ಗದಿಂದ ಸತ್ಯಪ್ಪ ಮಾರುತಿ ಧರ್ಮಟ್ಟಿ, ಪ್ರಭು ಹಣಮಂತ ತಂಬುರಿ, ಸಿದ್ದಪ್ಪಾ ಬಸವಣ್ಣೆಪ್ಪ ಮೇಟಿ,ಸಾಲಗಾರ ಹಿಂದುಳಿದ ಅ ವರ್ಗದಿಂದ ಬದಷಾ ಅಪ್ಪಸಾಬ ನದಾಫ್, ಮಹಾದೇವ ನಾಗಪ್ಪ ಜಮಖಂಡಿ, ಸಾಲಗಾರ ಮಹಿಳಾ ವರ್ಗದಿಂದ ಶ್ರೀಮತಿ ಶಾಂತಾ ವೆಂಕಪ್ಪ ಕೆದಾರಿ, ಶ್ರೀಮತಿ ಪ್ರಭಾವತಿ ಮಹಾದೇವ ಮಾರಾಪುರ, ಸಾಲಗಾರ ಪರಿಶಿಷ್ಟ ಜಾತಿ ವರ್ಗದಿಂದ ಲಕ್ಷ್ಮಣ ಬಸಪ್ಪ ಮೇತ್ರಿ, ಸಾಲಗಾರ ಪರಿಶಿಷ್ಟ ಪಂಗಡ ಈ ವರ್ಗದಿಂದ ಯಾವುದೇ ಅರ್ಜಿ ಸ್ವಿಕೃತವಾಗಿಲ್ಲ (ಬರದೇ) ಆದ್ದರಿಂದ ಖಾಲಿ ಉಳಿದಿದ್ದು. ಬಿನ್ ಸಾಲಗಾರ ವರ್ಗದಿಂದ ಸಿದ್ದಪ್ಪಾ ರಾಮಪ್ಪ ಕೊಣ್ಣೂರ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.