ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ

KannadaprabhaNewsNetwork |  
Published : May 11, 2026, 02:15 AM IST
ಹುಬ್ಬಳ್ಳಿಯ ಗೋಕುಲ್ ರಸ್ತೆಯ ಅಕ್ಷಯ್ ಪಾರ್ಕ್ ಸಂತೆ ಮೈದಾನದಲ್ಲಿ ಸಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ನೂತನ ವಧುಗಳು ಹೊಸ ಮನೆ ಪ್ರವೇಶಿಸಿದ ಬಳಿಕ ಅತ್ತೆ-ಮಾವನನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು. ಹಾಗೆಯೇ ಮನೆಗೆ ಸೊಸೆಯಾಗಿ ಬರುವ ವಧುವನ್ನು ಪತಿ, ಅತ್ತೆ, ಮಾವ ಮನೆಯ ಮಗಳಂತೆ ನೋಡಿಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಿವಿಮಾತು ಹೇಳಿದರು.

ಹುಬ್ಬಳ್ಳಿ:

ದುಂದು ವೆಚ್ಚದ ಕಡಿವಾಣಕ್ಕೆ ಸಾಮೂಹಿಕ ವಿವಾಹಗಳು ಸಹಕಾರಿಯಾಗಿದೆ. ಸಾಮೂಹಿಕ ವಿವಾಹದೊಂದಿಗೆ ಸರ್ವ-ಧರ್ಮ ಉಪನಯನ ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಭಾನುವಾರ ಇಲ್ಲಿನ ಗೋಕುಲ್ ರಸ್ತೆಯ ಅಕ್ಷಯ್ ಪಾರ್ಕ್ ಸಂತೆ ಮೈದಾನದಲ್ಲಿ ಸಮತಾ ಸೇವಾ ಸಂಸ್ಥೆ ಹಾಗೂ ನವಯುಗ ಸಂಘಟನೆ ವತಿಯಿಂದ 24ನೇ ವರ್ಷದ ಸರ್ವಧರ್ಮ ಉಪನಯನ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೃಷ್ಣ ಗಂಡಗಾಳೆಕರ್ ನೇತೃತ್ವದಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಎಲ್ಲರ ಬಾಳಲ್ಲಿ ಬೆಳಕು ಚೆಲ್ಲಿದ್ದಾರೆ. ನೂತನ ವಧುಗಳು ಹೊಸ ಮನೆ ಪ್ರವೇಶಿಸಿದ ಬಳಿಕ ಅತ್ತೆ-ಮಾವನನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು. ಹಾಗೆಯೇ ಮನೆಗೆ ಸೊಸೆಯಾಗಿ ಬರುವ ವಧುವನ್ನು ಪತಿ, ಅತ್ತೆ, ಮಾವ ಮನೆಯ ಮಗಳಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್‌ ಮಾತನಾಡಿ, ನವಯುಗ ಸಂಘಟನೆಯ ಮುಂದಾಳತ್ವದಲ್ಲಿ ಜನಪರ ಕೆಲಸ ಹಮ್ಮಿಕೊಂಡಿರುವುದು ಅಭಿನಂದನಾರ್ಹ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಾದರೆ ಬಡವರಿಗೆ, ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದರು,

ಹುಬ್ಬಳ್ಳಿಯ ಎರಡತ್ತಿನ ಮಠದ ಬಸವಲಿಂಗ ಶ್ರೀಗಳ ಸಮ್ಮುಖದಲ್ಲಿ ಬೆಳಗ್ಗೆ 36 ಮಕ್ಕಳಿಗೆ ಉಪನಯನ ಹಾಗೂ 17 ಜೋಡಿ ಸಾಮೂಹಿಕ ವಿವಾಹ ಅದ್ಧೂರಿಯಾಗಿ ನೆರವೇರಿದವು.

ಈ ವೇಳೆ ಮುಖಂಡ ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಸಿದ್ದು ಮೊಗಲಿಶೆಟ್ಟರ್, ಸುಭಾಸಸಿಂಗ್ ಜಮಾದಾರ, ಆನಂದ ಗುರುಸ್ವಾಮಿ, ಸುಬ್ರಮಣ್ಯಂ ಶಿರಕೋಳ, ಪ್ರಕಾಶ ಬಾಫನಾ, ತೋಟಪ್ಪ ನಿಡಗುಂದಿ, ರವಿ ನಾಯಕ, ಸೀಮಾ ಲದವಾ, ರಮೇಶ ಮಾದಪ್ಪನವರ, ರಾಜು ಕಾಳಿ, ಸಂತೋಷ ವರ್ಣೇಕರ, ನಾಗರಾಜ ಕಲಾಲ್, ಮುಕುಂದ ಗುಗ್ಗರಿ, ರವಿ ಬಂಕಾಪುರ, ನಾರಾಯಣ ಗಂಡಗಾಳೆಕರ, ರವೀಂದ್ರ ಎಲಕಾನ, ಭೀಮಣ್ಣ ಗಂಡಗಾಳೆಕರ, ಸಂಗೀತ ಬದ್ದಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛತೆ ಒಂದು ದಿನದ ಆಲೋಚನೆಯಾಗದಿರಲಿ
ಆಧ್ಯಾತ್ಮದ ರತ್ನ ಶಿವಶರಣೆ ಹೇಮರಡ್ಡಿ ಮಲ್ಲಮ್ಮ