ಗಾಯತ್ರಿ ಶಾಲೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

KannadaprabhaNewsNetwork |  
Published : May 31, 2025, 01:03 AM IST
ಫೋಟೊ ೩೦ ಇಳಕಲ್ಲ ೧ ರಲ್ಲಿ ಇದೆ. | Kannada Prabha

ಸಾರಾಂಶ

ಇಳಕಲ್ಲ ನಗರದ ಗಾಯತ್ರಿ ಮಹಿಳಾ ಸಂಘದ ಗಾಯತ್ರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕಿಯರು ಸಿಹಿ ಹಾಗೂ ಗುಲಾಬಿ ಹೂವು ಕೊಟ್ಟು ಹಣೆಗೆ ತಿಲಕ ಇಟ್ಟು ಆರತಿ ಮಾಡಿ ಸ್ವಾಗತಿಸಿಕೊಂಡರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದ ಗಾಯತ್ರಿ ಮಹಿಳಾ ಸಂಘದ ಗಾಯತ್ರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕಿಯರು ಸಿಹಿ ಹಾಗೂ ಗುಲಾಬಿ ಹೂವು ಕೊಟ್ಟು ಹಣೆಗೆ ತಿಲಕ ಇಟ್ಟು ಆರತಿ ಮಾಡಿ ಸ್ವಾಗತಿಸಿಕೊಂಡರು. ನಂತರ ಶಾಲೆಯವರು, ಮಕ್ಕಳ ಪಾಲಕರು ಸಾಮೂಹಿಕ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ವೀರೇಶ ಸ್ವಾಮಿ ದೇವಾಂಗಮಠ ಪೂಜೆ ನೆರವೇರಿಸಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.

ಜಯಶ್ರೀ ರಾಮದರ್ಗ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ವೀಣಾ ದೇವಾಂಗಮಠ ಮಾತನಾಡಿ ಪ್ರಾರಂಭದಲ್ಲಿರುವ ಉತ್ಸಾಹ ಇದೇ ರೀತಿ ವರ್ಷಪೂರ್ತಿ ಇರಲಿ ಹಾಗೂ ತಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಜಯಶ್ರೀ ರಾಮದರ್ಗ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಬೇಕೆಂದರು. ಶಿಕ್ಷಕರ ಹಾಗೂ ಪಾಲಕರ ಮಾತನ್ನು ಪಾಳಿಸಿ ವಿದ್ಯಾವಂತರಾಗಿ ಎಂದು ಮಕ್ಕಳಿಗೆ ತಿಳಿ ಹೇಳಿದರು. ಇದೇ ವೇಳೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ನಂತರ ಮಕ್ಕಳಿಗೆ ಸಿಹಿ ನೀಡಲಾಯಿತು.

ಅಲಂಕೃತಗೊಂಡ ಅಕ್ಷರ ಗೋಡೆ ಎಲ್ಲರ ಗಮನ ಸೆಳೆಯಿತು.

ಮುಖ್ಯಗುರು ಮಲ್ಲಿಕರ್ಜುನ ಇಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಿ ಪುರೋಹಿತ ಸ್ವಾಗತಿಸಿದರು. ಎಂ.ಎಸ್. ಕನ್ನೂರ ವಂದಿಸಿದರು. ವೇದಾವತಿ ದಟ್ಟಿ ನಿರೂಪಿಸಿದರು. ಶಾಲಾ ಮಾತಾಜಿ ಪ್ರಾರ್ಥಿಸಿದರು.

ಆಡಳಿತಾಧಿಕಾರಿ ಟಿ.ಎಂ. ರಾಮರ್ಗು, ಶಿಕ್ಷಕರಾದ ಅಂಬಣ್ಣ ಯರಗೇರಿ, ಮಾಲಾ ಕೊಳದೂರ, ಸುನಿತಾ ಮಸ್ಕಿ, ಶಿವಲೀಲಾ ಪಾಟೀಲ, ಕಾಮಾಕ್ಷಿ ಹೂಲಗೇರಿ, ಚೌಡಮ್ಮ ಮೆದಿಕೇರಿ, ಸಿದ್ದಮ್ಮ ಜೋಗಿನ, ಶ್ರುತಿ ಪರದೇಸಿ, ಜಮುನಾ ಜಲದರ್ಗಂ ಹಾಗೂ ಮಾತೃಭಾರತಿ ಸಮಿತಿಯ ತಾಯಂದಿರು,ಪಾಲಕರು ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ