ಕನ್ನಡಪ್ರಭ ವಾರ್ತೆ ಲೋಕಾಪುರಲೋಕಸಭೆ ಚುನಾವಣೆ ಪ್ರಚಾರ ನಿಮಿತ್ತ ಪೆಟ್ಲೂರ, ತಿಮ್ಮಾಪುರ, ಮುದ್ದಾಪುರ, ಹೆಬ್ಬಾಳ ಚಿತ್ರಭಾನುಕೋಟಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸಿದರು.
ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಕಳೆದ ೧೦ ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ನೀಡುವ ಅನುದಾನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ೨೦೦೪ ರಿಂದ ೨೦೧೪ ರ ವರೆಗಿನ ಕಾಂಗ್ರೆಸ್ ಅವಧಿಗೆ ಹೋಲಿಸಿದರೆ, ಕರ್ನಾಟಕಕ್ಕೆ ನೀಡುತ್ತಿರುವ ಅನುದಾನ ಪ್ರಮಾಣ ಶೇ.೨೭೩ ರಷ್ಟು ಏರಿಕೆಯಾಗಿದೆ, ಜನರಿಗೆ ಕಾಂಗ್ರೆಸ್ ಬರೀ ಸುಳ್ಳುಗಳನ್ನು ಹೇಳುತ್ತ ಬಂದಿದೆ, ಜನರಿಗೆ ಮೋದಿ ಮಾಡಿರುವ ಕೆಲಸಗಳ ಬಗ್ಗೆ ಜ್ಞಾನವಿದೆ. ದೇಶದ ಹಿತ ಬಿಜೆಪಿ ಕೈಯಲ್ಲಿದೆ. ಎಲ್ಲರೂ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು.
ಬಿಜೆಪಿ ಮುಖಂಡರಾದ ಎಂ.ಎಂ. ವಿರಕ್ತಮಠ, ವ್ಹಿ.ಎಂ. ತೆಗ್ಗಿ, ಕಲ್ಲಪ್ಪಣ್ಣ ಸಬರದ, ಶಿವಾನಂದ ಹುದ್ದಾರ, ಮಾರುತಿ ಕರೆನ್ನವರ, ಶ್ರೀಶೈಲಗೌಡ ಪಾಟೀಲ, ನಾಗಪ್ಪ ಅಂಬಿ, ಶ್ರೀಶೈಲ ಚಿನ್ನಣ್ಣವರ, ಬಿ.ಎಲ್. ಬಬಲಾದಿ, ಗಡ್ಡೆಪ್ಪ ಬಾರಕೇರ, ರಾಜುಗೌಡ ಪಾಟೀಲ, ಜೆಡಿಎಸ್ ತಾಲೂಕಾಧ್ಯಕ್ಷ ರಂಗನಾಥ ಮಾಯಪ್ಪಗೋಳ, ಸಿ.ಕೆ. ಪಾಟೀಲ, ಸಿದ್ದು ಪೂಜಾರ, ಸದಾಶಿವ ಪೂಜಾರಿ, ಗೋಪಾಲ ಲಮಾಣಿ, ಶಿವನಗೌಡ ಪಾಟೀಲ, ಹೊಳಬಸು ಕಾಜಗಾರ, ರಮೇಶ ದೇವರಡ್ಡಿ, ಲೋಕಣ್ಣ ಮುದ್ದಾಪುರ, ಶ್ರೀಶೈಲ ಮುದ್ದಾಪುರ, ಗೋಪಾಲಗೌಡ ಪಾಟೀಲ, ತಿಮ್ಮಾಪುರ, ಮುದ್ದಾಪುರ, ಹೆಬ್ಬಾಳ ಚಿತ್ರಭಾನುಕೋಟಿ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.