ಕನ್ನಡಪ್ರಭ ವಾರ್ತೆ ವಿಜಯಪುರ
ಯುವ ಧುರೀಣ ರಾಘವ ಅಣ್ಣಿಗೇರಿ ಮಾತನಾಡಿ, ಬಸನಗೌಡರ ಆಸ್ತಿಯೇ ಹಿಂದುತ್ವ. ಅವರ ಶಕ್ತಿಯೇ ಹಿಂದೂಗಳು. ಪಕ್ಷ ಏನಾದರಾಗಲಿ ಕುಟುಂಬದ ಹಿತವೇ ಮುಖ್ಯ ಎನ್ನುವ ಅಪ್ಪ ಮಕ್ಕಳ ಕುಮ್ಮಕ್ಕಿನಿಂದ ಯತ್ನಾಳರನ್ನು ಹೊರಗೆ ಹಾಕಿಲ್ಲ. ಬದಲಾಗಿ ಇಡೀ ಹಿಂದುತ್ವವನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುತ್ವದ ನಾಯಕ ಯಾರು ಅಂತ ಕೇಳಿದರೆ ಮೊದಲಿಗೆ ಬರುವ ಹೆಸರೇ ಬಸನಗೌಡ ಪಾಟೀಲ ಯತ್ನಾಳ. ರಾಜ್ಯದಲ್ಲಿ ಎಲ್ಲೇ ಹಿಂದು ಕಾರ್ಯಕರ್ತರ ಕೊಲೆಯಾದರೆ, ಅವರ ಮೇಲೆ ದೌರ್ಜನ್ಯ ನಡೆದರೆ ಮೊದಲು ಅವರನ್ನು ಭೇಟಿಯಾಗಿ ಸಾಂತ್ವನದ ಜೊತೆಗೆ ಪರಿಹಾರ ನೀಡುವವರೇ ಯತ್ನಾಳರು. ರೈತರ ಆಸ್ತಿಗಳನ್ನು ಕಬಳಿಸುವ ಹುನ್ನಾರ ತಡೆಯಲು ಮೊದಲು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದವರೇ ಬಸನಗೌಡರು. ಗಟ್ಟಿಯಾಗಿ ನಿಂತು ದಿಟ್ಟತನದಿಂದ ಹೋರಾಟ ಮಾಡಿ ಆಸ್ತಿ ಮರಳಿ ಸಿಗುವಂತೆ ಮಾಡಿದ ನಾಯಕರು ನಮ್ಮ ಬಸನಗೌಡರು. ಫಕೀರ ಬಸ್ತಿ ಆಗಿದ್ದ ವಿಜಯಪುರ ಹಿಂದುತ್ವ, ಶಾಂತಿಯ ಬಿಡು ಮಾಡಿದ್ದಾರೆ ಎಂದು ಸ್ಮರಿಸಿದರು.ದಯಾಸಾಗರ ಪಾಟೀಲ, ಪ್ರತಾಪ ಸಿಕ್ಕಲಕಿ ಉಚ್ಛಾಟನೆ ಮಾಡಿದ್ದು ಹುಚ್ಚಾಟ. ಈ ಮೂಲಕ ಹಿಂದೂ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.ಮುಖಂಡರಾದ ಎಂ.ಎಸ್.ರುದ್ರಗೌಡರು, ಬಿ.ಎಸ್.ಪಾಟೀಲ ನಾಗರಾಳ ಹುಲಿ, ಗುರು ಗಚ್ಚಿನಮಠ ಸೇರಿದಂತೆ ಹಿಂದೂ ಅಭಿಮಾನಿಗಳು, ನಿಷ್ಠಾವಂತ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.