ಕನ್ನಡಪ್ರಭ ವಾರ್ತೆ ಮಣಿಪಾಲ
ಅವರು ಪ್ರೇಕ್ಷಕರ ಜತೆ ಹಲವು ಚಟುವಟಿಕೆಗಳ ಹಾಗೂ ಸಂವಾದಾತ್ಮಕ ಕ್ರಿಯೆಗಳ ಮೂಲಕ ಸಂವಾದವನ್ನೂ ನಡೆಸಿದರು. ಗಮನಹರಿಸಿದಾಗ ಶಕ್ತಿ ಪ್ರವಹಿಸುವುದು, ಶಕ್ತಿ ಪ್ರವಹಿಸಿದಾಗ ಜೀವನ ವೃದ್ಧಿಸುವುದು, ಮಾತಿನಲ್ಲಿ ಬಂದಾಗ ಕೇವಲ ಕನಸಾಗುವುದು, ಕಲ್ಪನೆಯಲ್ಲಿ ಬಂದಾಗ ಅದು ಸಾಧ್ಯ ಎನ್ನಿಸುವುದು. ನಿಗದಿಪಡಿಸಿದಾಗ ಅದು ನಿಜ ಆಗಿಬಿಡುವುದು ಎಂದು ಅವರು ಅನೇಕ ಉದಾಹರಣೆಗಳೊಂದಿಗೆ ವಿಷಯವನ್ನು ಪ್ರಸ್ತುತ ಪಡಿಸಿದರು. ನಂತರ ಪ್ರಶ್ನೋತ್ತರ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.
ಸಮಾವೇಶದಲ್ಲಿ ಭಾಗವಹಿಸಿದವರಿಗೆ ತಿರುಹೊತ್ತಗೆ, ಬ್ಲೆಸ್ಸಿಂಗ್ ಕಾರ್ಡ್ ಮುಂತಾದುವನ್ನು ನೀಡಲಾಯಿತು. ನಂತರ ಜ.10ರಿಂದ 12ರ ವರೆಗೆ ಸಂಸ್ಥೆಯಲ್ಲಿ ನಡೆಯುವ ಮೂರು ದಿನದ ಉಚಿತ ರಾಜಯೋಗ ಶಿಬಿರದ ಭಾಗವಹಿಸಲು ಸಭಿಕರನ್ನು ಆಹ್ವಾನಿಸಲಾಯಿತು.ಪ್ರಕಾಶ್ ಚುಗಾನಿ ಆಗಿಂದಾಗ್ಗೆ ಮಣಿಪಾಲಕ್ಕೆಆಗಮಿಸಿ ತಮ್ಮಲ್ಲಿರುವ ಅಪಾರ ಜ್ಞಾನದ ಖಜಾನೆಯನ್ನು ಎಲ್ಲ ಸಾರ್ವಜನಿಕರಿಗೆ ಹಂಚಲು ಮಣಿಪಾಲ್ ಶಾಖೆಯ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸೌರಭ ಇವರು ಮನವಿ ಮಾಡಿ, ಧನ್ಯವಾದಗಳನ್ನು ಅರ್ಪಿಸಿದರು. ಸಾತ್ವಿಕ ಭೋಜನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.