ಕನ್ನಡಪ್ರಭ ವಾರ್ತೆ ಉಡುಪಿ
ಅವರು ಇಲ್ಲಿನ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆದ ವಿದುಷಿ ಪ್ರವಿತಾ ಅಶೋಕ್ ದಂಪತಿ ಮಕ್ಕಳಾದ ಪೂರ್ವಿ ಮತ್ತು ಗಾರ್ಗಿದೇವಿಯವರ ರಂಗಪ್ರವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾವಿದರನ್ನು ಒಗ್ಗೂಡಿಸುವ ಆಶಯ: ಕಲೆ ಮತ್ತು ಸಂಸ್ಕೃತಿಗಳ ಸಮ್ಮಿಲನದಂತೆ, ಗುರುಗಳ ಪರಿಶ್ರಮ, ಆಶಯದಂತೆ ಭರತನಾಟ್ಯದ ಶಾಸ್ತ್ರೀಯತೆಗೆ ತಕ್ಕಂತೆ ರಂಗಪ್ರವೇಶ ಮೂಡಿಬಂದಿದೆ ಎಂದರಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಭರತನಾಟ್ಯ ಕಲಾವಿದೆಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಮಾಡುವ ಆಶಯ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಚಿತ್ಕಲಾ ನೃತ್ಯ ಶಾಲೆಯ ಭರತನಾಟ್ಯ ಕಲಾವಿದ ಪಿ. ಪ್ರವೀಣ್ ಕುಮಾರ್ ಮಾತನಾಡಿ ಕಲಾವಿದೆಯರು ನೀಡಿದ ಒಂದೊಂದು ನೃತ್ಯ ಪ್ರದರ್ಶನದಲ್ಲಿಯೂ ಅವರದ್ದೇ ಆದ ಅನನ್ಯತೆ ಮತ್ತು ಸ್ವಂತದ್ದಾದ ಶೈಲಿ ಎದ್ದು ಕಾಣುತ್ತಿತ್ತು. ಇಬ್ಬರೂ ಕಲಾವಿದರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಡಾ.ಕರುಣಾ ವಿಜಯೇಂದ್ರ ಮಾತನಾಡಿ ಕಲಾವಿದೆಯರು ಮನಸಿಗೆ ಮುಟ್ಟುವಷ್ಟು ನೃತ್ಯದ ರಸದೌತಣ ಉಣಬಡಿಸಿದ್ದಾರೆ. ಗುರುಗಳ ಸರಿಯಾದ ಮಾರ್ಗದರ್ಶನ ಮತ್ತು ಕಲಾವಿದೆಯರ ಪರಿಶ್ರಮ ನೃತ್ಯದುದ್ದಕ್ಕೂ ಎದ್ದು ಕಾಣುತ್ತಿತ್ತು. ಇವರು ಭರವಸೆಯ ಕಲಾವಿದೆಯರಾಗುವುದು ಖಂಡಿತ ಎಂದು ಹೇಳಿದರು. ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇದರ ನೃತ್ಯ ಗುರು ವಿದುಷಿ ಪ್ರವಿತಾ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಲತಾ ಸಂಗ್ರಾಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.