ಅತಿರುದ್ರ ಮಹಾಯಜ್ಞದಿಂದ ಎಲ್ಲರಿಗೂ ಪುಣ್ಯ ಪ್ರಾಪ್ತಿ: ಮಹಾಂತ ಸಹದೇವಾನಂದ ಗಿರಿಜೀ ಮಹಾರಾಜರು

KannadaprabhaNewsNetwork |  
Published : Oct 19, 2025, 01:00 AM IST
ಸಭೆಯಲ್ಲಿ ಮಹಾಂತ ಸಹದೇವಾನಂದ ಗಿರಿಜೀ ಮಹಾರಾಜರು ಮಾತನಾಡಿದರು. | Kannada Prabha

ಸಾರಾಂಶ

ಗದಗ ನಗರದಲ್ಲಿ ನವಂಬರ್‌ ತಿಂಗಳಲ್ಲಿ ಅತಿರುದ್ರ ಮಹಾಯಜ್ಞ ನಡೆಯಲಿರುವ ಹಿನ್ನೆಲೆಯಲ್ಲಿ ಶ್ರೀ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಗದಗ: ನಗರದಲ್ಲಿ ನವಂಬರ್‌ ತಿಂಗಳಲ್ಲಿ ನಡೆಯುವ ಅತಿರುದ್ರ ಮಹಾಯಜ್ಞ ಎಲ್ಲರ ಕಲ್ಲಾಣಕ್ಕಾಗಿ ಜರುಗಲಿದೆ. ಇದರಿಂದ ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ, ಸಮೃದ್ಧಿ ದೊರಕಲಿದೆ ಎಂದು ಮಹಾಂತ ಸಹದೇವಾನಂದ ಗಿರಿಜೀ ಮಹಾರಾಜರು ಹೇಳಿದರು.

ನಗರದ ಶ್ರೀ ವಿಠ್ಠಲಾರೂಢ ಸಮುದಾಯ ಭವನದಲ್ಲಿ ಅತಿರುದ್ರ ಮಹಾಯಜ್ಞ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮಹಾನ್‌ ಸಾಧುಗಳು ಹಿಮಾಯಲದಲ್ಲಿ ತಪಸ್ಸು ಮಾಡುವುದು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಅವರು ವಿಶ್ವಕಲ್ಯಾಣಕ್ಕಾಗಿ, ಮಾನವ ಧರ್ಮಕ್ಕಾಗಿ ಮತ್ತು ಎಲ್ಲ ಸಮಸ್ತ ಜನರ ಕಲ್ಯಾಣಕ್ಕಾಗಿ ಮಾಡುತ್ತಾರೆ. ಅದರಂತೆ ಗದಗ ನಗರದಲ್ಲಿ ಸಂಘಟಕರು ಅಯೋಜಿಸಿರುವ ಮಹಾಯಜ್ಞದಲ್ಲಿ ಎಲ್ಲ ಧರ್ಮದವರಿಗೆ, ಎಲ್ಲ ವರ್ಗದವರಿಗೆ ಕಲ್ಯಾಣವಾಗಲಿದೆ. ನಮ್ಮ ಸಂಕಲ್ಪವು ಮಾನವ ಕಲ್ಯಾಣಕ್ಕಾಗಿ ಇರುವದರಿಂದ ಈ ಮಹಾಯಜ್ಞದಲ್ಲಿ ಎಲ್ಲರೂ ತನು-ಮನ-ಧನ, ಸಮಯ ದಾನ ಮತ್ತು ಶ್ರದ್ಧಾ-ಭಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.

2025ನೇ ಸಾಲಿನಲ್ಲಿ ಜರುಗಿದ ಮಹಾ ಕುಂಭಮೇಳದಲ್ಲಿ ಅಧುನಿಕ ಪ್ರಚಾರದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಅಲ್ಲದೆ, ಕರ್ನಾಟಕದಿಂದ ಅತಿ ಹೆಚ್ಚು ಜನರು ಪಾಲ್ಗೊಂಡಿರುವುದು ವಿಶೇಷ. ಅದೇ ರೀತಿ ನಗರದಲ್ಲಿ ನಡೆಯುವ ಮಹಾಯಜ್ಞದಿಂದ ಗದಗ ನಗರ ಪಾವನಗೊಳ್ಳಲಿದೆ. ಈ ಮಹಾಯಜ್ಞದಲ್ಲಿ ಭಾಗವಹಿಸುವ ಸಾಧುಗಳು ಶ್ರೀಮಂತರಲ್ಲ, ಸ್ಥಿತಿವಂತರಲ್ಲ. ಆದರೆ, ಅವರು ಮಹಾನ್‌ ಸಾಧಕರಾಗಿದ್ದಾರೆ. ಅವರ ಆಶೀರ್ವಾದಿಂದ ಎಲ್ಲರ ಜೀವನ ಪಾವನವಾಗಲಿದೆ ಎಂದರು.

ಅತಿರುದ್ರ ಮಹಾಯಜ್ಞ ಸಮಿತಿಯ ಗೌರವಾಧ್ಯಕ್ಷ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹಿಮಾಲಯದಲ್ಲಿ ಜೀವಮಾನ ತಪಸ್ಸು ಮಾಡಿ, ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ನಗರಕ್ಕೆ ನಾಗಾಸಾಧುಗಳು ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ಸೌಭಾಗ್ಯವು ಆಗಿದೆ. ಈ ಯಜ್ಞವನ್ನು ನಾವೆಲ್ಲರೂ ಅದ್ಧೂರಿಯ ಜತೆಗೆ ಅರ್ಥಪೂರ್ಣವಾಗಿ ಮಾಡಬೇಕಿದೆ. ಜಿಲ್ಲೆಯ ಎಲ್ಲ ತಾಲೂಕಿನ ಜನರು ಭಕ್ತಿ-ಭಾವದಿಂದ ಭಾಗವಹಿಸುವಂತೆ ನೋಡಿಕೊಳ್ಳಬೇಕು ಮತ್ತು ಇದು ಗದಗ ಜಿಲ್ಲೆಯ ಜನತೆಯ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಯಜ್ಞವಾಗಿರುವುದರಿಂದ ನಾವೆಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಅತಿರುದ್ರ ಮಹಾಯಜ್ಞ ಸಮಿತಿ ಅಧ್ಯಕ್ಷ ಕಿರಣ ಭೂಮಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ರವಿ ದಂಡಿನ, ಸಚಿನ ಡಿ. ಪಾಟೀಲ, ರಾಜು ಕುರಡಗಿ, ಬಸವರಾಜ ಬಿಂಗಿ, ಪ್ರಕಾಶ ಬೊಮ್ಮನಹಳ್ಳಿ, ವಿನೋದ ಶಿದ್ಲಿಂಗ್‌, ರುದ್ರಣ್ಣ ಗುಳಗುಳಿ, ಆರ್.ಡಿ. ಕಡ್ಲಿಕೊಪ್ಪ, ಸಂತೋಷ ಚನ್ನಪ್ಪನವರ, ರಾಘು ಭಾರಡ, ಎಂ.ಸಿ. ಐಲಿ, ಶ್ರೀನಿವಾಸ ಬಾಂಡಗೆ, ವಿಜಯಲಕ್ಷ್ಮೀ ಮಾನ್ವಿ, ಪ್ರೀತಿ ಹೊನ್ನಗುಡಿ ಇದ್ದರು. ಪ್ರೊ. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಚ್. ಶಿವನಗೌಡ್ರ ವಂದಿಸಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ