ದೇಶದ ಗೌರವ ಹೆಚ್ಚಿಸಿದ ಮೋದಿ ಆರೋಗ್ಯ ವೃದ್ಧಿಸಲಿ

KannadaprabhaNewsNetwork |  
Published : Jun 11, 2026, 02:30 AM IST
ಕ್ಯಾಪ್ಷನ10ಕೆಡಿವಿಜಿ43 ಭಾರತ ದೇಶದ ಚುನಾಯಿತ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಬಿಜೆಪಿ ದಾವಣಗೆರೆ ಜಿಲ್ಲಾ ಘಟಕದಿಂದ ನಿಟುವಳ್ಳಿ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಾರತ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನರೇಂದ್ರ ಮೋದಿ ಅವರಿಗೆ ದೇವರು ಹಾಗೂ ಭಾರತ ಮಾತೆ ಇನ್ನು ಹೆಚ್ಚಿನ ದೀರ್ಘಾವಧಿಯ ಆರೋಗ್ಯ, ಆಯಸ್ಸು ಮತ್ತು ಅಧಿಕಾರಕ ಶಕ್ತಿ ನೀಡಲೆಂದು ಪ್ರಾರ್ಥಿಸಿ, ಬಿಜೆಪಿ ಜಿಲ್ಲಾ ಘಟಕ ನಗರದ ನಿಟುವಳ್ಳಿಯಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿತು.

- ನಿಟುವಳ್ಳಿ ಶ್ರೀ ದುರ್ಗಾಂಬಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಎನ್‌.ರಾಜಶೇಖರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನರೇಂದ್ರ ಮೋದಿ ಅವರಿಗೆ ದೇವರು ಹಾಗೂ ಭಾರತ ಮಾತೆ ಇನ್ನು ಹೆಚ್ಚಿನ ದೀರ್ಘಾವಧಿಯ ಆರೋಗ್ಯ, ಆಯಸ್ಸು ಮತ್ತು ಅಧಿಕಾರಕ ಶಕ್ತಿ ನೀಡಲೆಂದು ಪ್ರಾರ್ಥಿಸಿ, ಬಿಜೆಪಿ ಜಿಲ್ಲಾ ಘಟಕ ನಗರದ ನಿಟುವಳ್ಳಿಯಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿತು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ಮಾತನಾಡಿ, ಕೊರೋನಾ ಹಾವಳಿಯ ಕಾಲದಲ್ಲಿ ಹಾಗೂ ಈಗಿನ ಮಧ್ಯಪ್ರಾಜ್ಯ ದೇಶಗಳ ಯುದ್ಧ ಸಮಯದಲ್ಲೂ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಮೋದಿ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನಕ್ಕೆ ತಂದಿದ್ದಾರೆ. ಸಾಮಾಜಿಕ ಭದ್ರತೆ ಅಡಿಯಲ್ಲಿ ದೇಶದ ಜನತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಯ ಆಡಳಿತ ದೇಶಕ್ಕೆ ಇನ್ನೂ ಹೆಚ್ಚಿನ ಕಾಲ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಮಾತನಾಡಿ, ಭಾರತದ ಆರ್ಥಿಕತೆ ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನವನ್ನು ಹೆಚ್ಚಿಸಿದ ನಿಜವಾದ ರಾಜಕಾರಣಿ ನರೇಂದ್ರ ಮೋದಿಜಿ. ಭಾರತದ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಮೋದಿ ಅವರ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ನಾಯಕತ್ವಕ್ಕಾಗಿ ಅಭಿನಂದನೆ ಸಲ್ಲಿಸಲೇಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉತ್ತರ ಮಂಡಲದ ಅಧ್ಯಕ್ಷ ತಾರೇಶ್‌ ನಾಯ್ಕ, ಮಾಜಿ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಬಿಜೆಪಿ ಮುಖಂಡರಾದ ಕೆ.ಎಂ. ಸುರೇಶ್, ಗುತ್ತೂರು ಮಂಜುನಾಥ, ಶಿವರಾಜ್ ಪಾಟೀಲ್, ಪಿ.ಎಸ್.ಜಯಣ್ಣ, ದುರುಗೇಶ್, ರೂಪಾ ದೀಪಕ್, ಮಮತಾ ಗೌಡ, ಪುಷ್ಪಾ ವಾಲಿ, ಸವಿತಾ ರವಿಕುಮಾರ ಇತರೆ ಮುಖಂಡರು ಇದ್ದರು.

- - -

-10ಕೆಡಿವಿಜಿ43: ಭಾರತ ದೇಶದ ಚುನಾಯಿತ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಬಿಜೆಪಿ ದಾವಣಗೆರೆ ಜಿಲ್ಲಾ ಘಟಕದಿಂದ ನಿಟುವಳ್ಳಿ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ
ಡಬಲ್ ಡೆಕ್ಕರ್, ಕನಕಪುರ ರೈಲಿಗೆ ಡಿಕೆಶಿ ಮನವಿ