ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅವರು ಭಾನುವಾರ ಇಲ್ಲಿನ ಮಡಿವಾಳ ನಗರದಲ್ಲಿರುವ ಮಡಿವಾಳ ಮಾಚಿದೇವರ ದೇವಸ್ಥಾನ ಸಮಿತಿ, ದಿ. ಹುಬ್ಬಳ್ಳಿ ಮಡಿವಾಳ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ 9ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಸೊಸಾಯಿಟಿಯ 79ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಡಿವಾಳ ಸಮುದಾಯವು ಕಾಯಕವನ್ನು ನಂಬಿ ಬದುಕುತ್ತಿರುವ, ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ದುಡಿಯುವ ಶ್ರಮಜೀವಿಗಳ ಸಮುದಾಯವಾಗಿದೆ. ಹಿಂದಿನ ಪೀಳಿಗೆಯವರು ಅನುಭವಿಸಿದ ಕಷ್ಟ ಹಾಗೂ ಶ್ರಮ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬಾರದು. ಮಕ್ಕಳು ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಪಾರಂಪರಿಕ ಕಾಯಕಕ್ಕೆ ಮಾತ್ರ ಸೀಮಿತವಾಗದೆ ಹೊಸ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಮಡಿವಾಳ ಮಾಚಿದೇವರು ಕೇವಲ ಬಟ್ಟೆ ತೊಳೆಯುವ ಕಾಯಕ ಮಾಡಿರಲಿಲ್ಲ. ಭಕ್ತರ ಮನಸ್ಸಿನಲ್ಲಿದ್ದ ಕೊಳೆಯನ್ನು ತೊಳೆದು, ಧರ್ಮಕ್ಕೆ ಕುಂದು ಬಂದಾಗ ಗಣಾಚಾರ ಪ್ರವೃತ್ತಿಯಿಂದ ಹೋರಾಡಿದ ಶ್ರೇಷ್ಠ ಶಿವಶರಣರಾಗಿದ್ದರು. ವಚನ ಸಾಹಿತ್ಯ ಹಾಗೂ ಶರಣರ ತತ್ವ ಸಿದ್ಧಾಂತಗಳ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಮಹತ್ವದ್ದಾಗಿದೆ ಎಂದರು.
ಮಡಿವಾಳ ಸಮುದಾಯದ ಸಂಘಟನೆಗಳು ಗ್ರಾಮೀಣ ಭಾಗದಲ್ಲಿರುವ ಸಮುದಾಯದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಬೇಕು. ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಹಳ್ಳಿಗಳಲ್ಲಿರುವ ಮಡಿವಾಳರ ಸಮಸ್ಯೆಗಳನ್ನೂ ಅರಿತುಕೊಂಡು ಸಂಘಟಿತ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ ಪಾಟೀಲ, ಜೆಡಿಎಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಗಣೇಶ ಮಡಿವಾಳರ, ಅಧ್ಯಕ್ಷ ಸಂದೀಪ ಹುಣಚಿ, ಕಾರ್ಯಾಧ್ಯಕ್ಷ ಸತೀಶ ಕೌತಾಳ ಸೇರಿದಂತೆ ಹಲವರಿದ್ದರು.