ದುಡಿಯುವ ವರ್ಗಕ್ಕೆ ತಕ್ಕ ಪ್ರತಿಫಲ, ಮನ್ನಣೆ ಸಿಗಲಿ

KannadaprabhaNewsNetwork |  
Published : Dec 20, 2025, 01:00 AM IST
ಪೋಟೋ, 19ಎಚ್‌ಎಸ್‌ಡಿ4: ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳ   ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ   ಶಿವಶರಣ ಒಕ್ಕಲಿಗ ಮುದ್ದಣ್ಣ  ಜಯಂತಿ ಆಚರಿಸಲಾಯಿತು | Kannada Prabha

ಸಾರಾಂಶ

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆವರು ಸುರಿಸಿ ದುಡಿಯುವ ವರ್ಗಕ್ಕೆ ತಕ್ಕ ಪ್ರತಿಫಲ, ಮನ್ನಣೆ ಸಿಗಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ದುಡಿಯುವ ವರ್ಗಕ್ಕೆ ತಾರತಮ್ಯ, ನಿರ್ಲಕ್ಷ್ಯ, ಕೀಳಾಗಿ ಕಾಣುವ ಪ್ರವೃತ್ತಿ ತೊಲಗದೇ ಹೋದಲ್ಲಿ ಶರಣರು ಕಂಡ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಆಳ್ದರಸನಿಂದ ಆಳಿನವರೆಗೂ, ಗುರುವಿನಿಂದ ಶಿಷ್ಯನವರೆಗೂ ಒಟ್ಟಾರೆಯಾಗಿ ಕಾಯಕದಿಂದಲೇ ತಮ್ಮನ್ನ ಗುರುತಿಸಿಕೊಳ್ಳುವ ಪರಿಪಾಠವಿತ್ತು. ಎಲ್ಲಾ ವರ್ಗದವರು ಕಾಯಕದ ಮೂಲಕ ಸಮಾನತೆಯನ್ನು ಕಂಡುಕೊಂಡಿದ್ದರು ಆದರೆ ಈಗ ಅಂದಿನ ಎಲ್ಲ ವೃತ್ತಿ ಸೂಚಕ ಕಾಯಕ ಶಬ್ದಗಳೆಲ್ಲ ಜಾತಿಯಾಗಿ ಪರಿವರ್ತನೆಗೊಳ್ಳುತ್ತಿರುವುದು ವಿಷಾದನೀಯ ಎಂದರು.

ಲಿಂಗಾಯತ ಎನ್ನುವುದು ಆಚರಣೆ ಪ್ರಧಾನ ಶಬ್ಧ ಜಾತಿ ರಹಿತವಾದದ್ದು ಒಕ್ಕಲುತನ ಲಿಂಗಾಯತ ಅವರ ನಡೆ ನುಡಿಗಳ ಆಚರಣೆಗಳ ಮೇಲೆ ಅವಲಂಭಿತವಾದ ಶಬ್ದಗಳೇ ವಿನಃ ಜಾತಿಗಳಲ್ಲ. ಆದರೆ ಇಂದು ಬೇಸಾಯ ಮಾಡುವ ವೃತ್ತಿಯೇ ಒಂದು ಜಾತಿ ಆಗಿದೆ. 12ನೇ ಶತಮಾನದಲ್ಲಿ ಒಕ್ಕಲಿಗ ಮುದ್ದಣ್ಣ ಕೃಷಿಯನ್ನು ಒಂದು ವೃತ್ತಿಯಾಗಿ ಮಾಡಿಕೊಂಡು ಅನ್ನ ನೀಡುವ ಕಾಯಕದ ಜೊತೆಗೆ ಬೌದ್ಧಿಕ ವಿಚಾರಗಳೊಡಗೂಡಿದ ವಚನಗಳನ್ನು ರಚಿಸಿದ್ದಾರೆ ಎಂದರು.

ಇಂದಿನ ಪೋಷಕರು ಮಕ್ಕಳಿಗೆ ಪ್ರಾಪಂಚಿಕ ಜ್ಞಾನ ಸೋಕದಂತೆ ಕೇವಲ ಪಠ್ಯ, ಶಿಕ್ಷಣ, ಉದ್ಯೋಗ ಹಣಸಂಪಾದನೆ ಇವುಗಳಿಗೆ ಸೀಮಿತಗೊಳಿಸುತ್ತಿದ್ದಾರೆ. ಇಂದಿನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಬೆವರು ಸುರಿಸಿ ದುಡಿಯುವ ಮಾಹಿತಿ ಅದರಲ್ಲಿಲ್ಲ ತಮ್ಮ ಮಕ್ಕಳಿಗೆ ಪಠ್ಯಗಳ ಜೊತೆಗೆ ಸಾಮಾಜಿಕ ಚಿಂತನೆಗಳ ಪರಿಚಯ ಮಾಡಿಕೊಟ್ಟಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.

ಅನ್ನ ನೀಡುವ ರೈತ ಮತ್ತು ಅವರ ಶ್ರಮವನ್ನು ಗೌರವಿಸಬೇಕು . ಓದಿದವರು, ಕಲಿತವರು, ಜ್ಞಾನಿಗಳು, ಪಂಡಿತರು ವ್ಯವಸಾಯವನ್ನು ಮಾಡುವಂತಿಲ್ಲ ಎಂದು ಎಲ್ಲೂ ಹೇಳಿಲ್ಲ. ಬಿಡುವಿನ ಸಮಯದಲ್ಲಿ ಇದ್ದ ಜಾಗದಲ್ಲಿ ಕೃಷಿಯತ್ತ ಗಮನ ಹರಿಸಿದರೆ ಈ ನಾಡು ಸಮೃದ್ಧ ಆರೋಗ್ಯ ಪೂರ್ಣಸಮಾಜವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಕಾಳೇಗೌಡ ಬಸಪ್ಪ ಗುಡಸಿ ಸೇರಿದಂತೆ ಭಕ್ತರು ಸಾರ್ವಜನಿಕರು ಎಸ್ ಜೆ ಎಂ ವಿದ್ಯಾ ಸಂಸ್ಥೆಯ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಳುವಾ ಯೋಗಿಯ ನೋಡಲ್ಲಿ ರೈತ ಗೀತೆ ಹಾಡುತ್ತಾ ಶಿವಶರಣ ಒಕ್ಕಲಿಗ ಮುದ್ದಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ