ರಾಯಲ್‌ ಕಾನ್ಕರ್ಡ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅರ್ಥಪೂರ್ಣ ರಾಜ್ಯೋತ್ಸವ

KannadaprabhaNewsNetwork |  
Published : Nov 27, 2025, 01:02 AM IST
36 | Kannada Prabha

ಸಾರಾಂಶ

ವಿದ್ಯಾರ್ಥಿಗಳು ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಕೊಡವರ ವಾಲಗ ನೃತ್ಯ, ಯಕ್ಷಗಾನ ಪ್ರದರ್ಶಿಸಿದರು. ಬಾ ಬಾರಾ ರಣಧೀರ, ಹಾಡು ಸಂತೋಷಕ್ಕೆ, ಕಲ್ಲಾದರೆ ನಾನು ಬೇಲೂರ ಗುಡಿಯಲ್ಲಿ ಇರುವೆ... ಹಾಡಿಗೆ ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ರಾಯಲ್‌ ಕಾನ್ಕರ್ಡ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಾಡಿನ ಕಲೆ, ಇತಿಹಾಸ, ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಮ್ಮ ನೃತ್ಯ- ಹಾಡಿನ ಮೂಲಕ ಪರಿಚಯಿಸಿದರು. ಜೊತೆಗೆ ಕನ್ನಡದ ನೆಲ-ಜಲ- ಭಾಷೆ- ಸಾಹಿತ್ಯ-ಸಂಸ್ಕೃತಿ-ರಾಜಮಹಾರಾಜರನ್ನು ಪರಿಚಯಿಸುವ ವಸ್ತು ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು.

ನಾಡಗೀತೆ, ಹಚ್ಚೇವು ಕನ್ನಡದ ದೀಪ, ವಿಶ್ವನೂತನ ವಿದ್ಯಾಚೇತನ,, ಹಾಡುಗಳೊಂದಿಗೆ ಆರಂಭವಾದ ಕಾರ್ಯಕ್ರಮ ಓಂಕಾರನಾದ ಹಾಡಿನೊಂದಿಗೆ ಮುಂದುವರಿಯಿತು. ವಿದ್ಯಾರ್ಥಿಗಳು ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಕೊಡವರ ವಾಲಗ ನೃತ್ಯ, ಯಕ್ಷಗಾನ ಪ್ರದರ್ಶಿಸಿದರು. ಬಾ ಬಾರಾ ರಣಧೀರ, ಹಾಡು ಸಂತೋಷಕ್ಕೆ, ಕಲ್ಲಾದರೆ ನಾನು ಬೇಲೂರ ಗುಡಿಯಲ್ಲಿ ಇರುವೆ... ಹಾಡಿಗೆ ಹೆಜ್ಜೆ ಹಾಕಿದರು.

ರಾಣಿ ಅಬ್ಬಕ್ಕ, ಮಯೂರವರ್ಮ, ಸುಧಾ ಮೂರ್ತಿ, ಶ್ರೀಕೃಷ್ಣದೇವರಾಯ, ಒನಕೆ ಓಬವ್ವ, ಪುರಂದರ ದಾಸರು, ಎಂ.ಕೆ. ಇಂದಿರಾ, ಅಕ್ಕಮಹಾದೇವಿ, ಜಿ.ಪಿ. ರಾಜರತ್ನಂ, ಪಂಡರಿಬಾಯಿ, ಜಾವಗಲ್‌ ಶ್ರೀನಾಥ್‌, ಬೆಳವಡಿ ಮಲ್ಲಮ್ಮ, ಗಂಗೂಬಾಯಿ ಹಾನಗಲ್‌, ಡಾ.ರಾಜ್‌ಕುಮಾರ್‌, ಕುವೆಂಪು, ಸರ್‌ ಎಂ. ವಿಶ್ವೇಶ್ವರಯ್ಯ, ಸಂಚಿ ಹೊನ್ನಮ್ಮ , ಆರ್‌.ಕೆ. ನಾರಾಯಣ್‌, ಕಿತ್ತೂರು ಚೆನ್ನಮ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಅನಿಲ್‌ ಕುಂಬ್ಳೆ, ಕೆಳದಿ ಚೆನ್ನಮ್ಮ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಕೆ.ಎಸ್‌. ನಿಸಾರ್‌ ಅಹಮದ್‌, ಸಾಲುಮರದ ತಿಮ್ಮಕ್ಕ, ನಾಡಪ್ರಭು ಕೆಂಪೇಗೌಡ ಅವರ ಛದ್ಮವೇಷಧಾರಿ ಮಕ್ಕಳು ಈ ಎಲ್ಲಾ ಸಾಧಕರ ವ್ಯಕ್ತಿತ್ವವನ್ನು ಅಭಿನಯದ ಮೂಲಕ ಪ್ರದರ್ಶಿಸಿ, ಅಪಾರ ಮೆಚ್ಚುಗೆಗೆ ಪಾತ್ರರಾದರು. ಅದೇ ರೀತಿ ಪುಣಾಣಿಗಳು ಪ್ರದರ್ಶಿಸಿದ ‘ಕನ್ನಡಕ್ಕೆ ಹೋರಾಡು ಕನ್ನಡದ ಕಂದ’... ನೃತ್ಯ ಕೂಡ ಗಮನ ಸೆಳೆಯಿತು.

ಕನ್ನಡನಾಡಿನಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕಾಗಿ ಬಂದಿರುವ ಬಗ್ಗೆ ಪ್ರದರ್ಶಿಸಿದ ತುಣುಕು ಚಪ್ಪಾಳೆಗೆ ಪಾತ್ರವಾಯಿತು.

ಕನ್ನಡ ವಿಭಾಗದ ರಶ್ಮಿ, ಗೀತಾ, ಮಮತಾ, ಕಲಾ ವಿಭಾಗದ ಸೌಮ್ಯಾ ಮತ್ತಿತರು ಅಧ್ಯಾಪಕಿಯರು ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕಲಾ ಪ್ರದರ್ಶನಕ್ಕೆ ಮಾರ್ಗರ್ಶನ ಮಾಡಿದ್ದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲೆ ಜಯ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ರಶ್ಮಿ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ಕಳೆದ ಸಾಲಿನಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದ ಶ್ರೇಯಾ ಭಟ್‌ ಅವರನ್ನು ಅಭಿನಂದಿಸಲಾಯಿತು.

ದಿನದ ಮಹತ್ವ ಕುರಿತು ಲಾಲಿತ್ಯ ಮಾತನಾಡಿದರು. ಅಪರಿಚಿತ ಓದುಗರ ಬಳಗದ ದೀಪು, ಶಾಲೆಯ ಅಧ್ಯಾಪಕರು, ಅಧ್ಯಾಪಕೇತರು,ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ