ರಾಮನಗರ: “ನನಗೆ ನ್ಯಾಯ ಬೇಕು, ಇಲ್ಲವಾದರೆ ನಾನು ವೇಂಜೆನ್ಸ್ (ಬಿಡುಗಡೆ) ಹುಡುಕುತ್ತೇನೆ” ಎಂದು ಹೇಳಿದ್ದೇನೆ. ಈ ಮಾತನ್ನು ಕೆಲ ಮಾಧ್ಯಮದವರು ತಪ್ಪಾಗಿ ಅರ್ಥ ಮಾಡಿಕೊಂಡು ಅದನ್ನು ಸೇಡು ಅಥವಾ ಹಿಂಸಾತ್ಮಕ ಪ್ರತಿಕ್ರಿಯೆಯಂತೆಯೇ ಬಿಂಬಿಸಿದ್ದಾರೆ ಎಂದು ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸ್ಪಷ್ಟನೆ ನೀಡಿದ್ದಾರೆ.
ನನ್ನ ಉದ್ದೇಶ ನ್ಯಾಯವನ್ನು ಕಾನೂನು ಮಾರ್ಗದಲ್ಲಿ ಪಡೆಯುವುದಾಗಿದೆ. ತಪ್ಪಿತಸ್ಥರನ್ನು ಕಾನೂನುಮಾರ್ಗದಲ್ಲಿ ಶಿಕ್ಷೆಗೆ ಒಳಪಡಿಸುವುದೇ ನನ್ನ ಗುರಿ. ಮಾಧ್ಯಮಗಳು ಸಾರ್ವಜನಿಕರಿಗಾಗಲಿ ಅಥವಾ ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆಗೆ ಯಾವುದೇ ಗೊಂದಲವಾಗುವುದು ಬೇಡ. ಸಾರ್ವಜನಿಕರಲ್ಲಿ ಭಯವನ್ನು ಸೃಷ್ಟಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ. ಪೊಲೀಸರು ತಮ್ಮ ಕೆಲಸವನ್ನು ನಿರಾಳವಾಗಿ ಮುನ್ನಡೆಸಲು ಅವರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ರಿಕ್ಕಿ ರೈ ವಿನಂತಿಸಿದ್ದಾರೆ.4ಕೆಆರ್ ಎಂಎನ್ 4.ಜೆಪಿಜಿರಿಕ್ಕಿ ರೈ-----------------------------