ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಿಕ್ಕನಾಯಕನಹಳ್ಳಿ ತಾಲೂಕು ಘಟಕದ ವತಿಯಿಂದ ಪಟ್ಟಣದ ರೋಟರಿ ಕನ್ವೆನ್ಷನ್ ಹಾಲ್ನಲ್ಲಿ, ರೋಟರಿ ಕ್ಲಬ್ ಹಾಗೂ ಸುವರ್ಣಮುಖಿ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಧ್ಯಮಗಳು ಅಧಿಕಾರಿಗಳನ್ನು ಹಾಗೂ ಜವಾಬ್ದಾರಿಯುತ ವ್ಯಕ್ತಿಗಳನ್ನು ಪ್ರಶ್ನಿಸುವ ಮತ್ತು ಅವರ ಜವಾಬ್ದಾರಿಯನ್ನು ನೆನಪಿಸುವ ಪ್ರಬಲ ಸಾಧನವಾಗಿವೆ. ಈ ಮಾಧ್ಯಮದ ಸದ್ಬಳಕೆಯಾಗುವುದು ಅತ್ಯಂತ ಅಗತ್ಯ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಬಿಳಿ ಹಾಳೆಯ ಮೇಲಿಡುವ ಒಂದು ಸಣ್ಣ ಚುಕ್ಕೆಯು ಎಲ್ಲರ ಗಮನ ಸೆಳೆಯುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಸಂಕುಚಿತ ಮನೋಭಾವನೆ ಇರಬಾರದು. ವಿಶಾಲವಾದ ದೃಷ್ಟಿಕೋನ ಹೊಂದಿದ್ದಾಗ ಮಾತ್ರ ಅನೇಕ ಗುಣಾತ್ಮಕ ವಿಚಾರಗಳು ಬೆಳಕಿಗೆ ಬರಲು ಸಾಧ್ಯ. ಸತ್ಯ ಮತ್ತು ವಾಸ್ತವ ಅಂಶಗಳನ್ನು ನೇರವಾಗಿ, ನಿಷ್ಠುರವಾಗಿ ವರದಿ ಮಾಡುವುದು ಕೇವಲ ಶೀರ್ಷಿಕೆ ಅಥವಾ ಮಾತುಗಳಿಗೆ ಸೀಮಿತವಾಗಿರದೆ, ಪ್ರಕಟವಾಗುವ ಪ್ರತಿಯೊಂದು ವರದಿಯಲ್ಲೂ ಎದ್ದು ಕಾಣಬೇಕು. ಅಧಿಕಾರಿಗಳು ಅಥವಾ ಜವಾಬ್ದಾರಿಯುತ ವ್ಯಕ್ತಿಗಳು ಎಲ್ಲೇ ತಪ್ಪು ಮಾಡಿದರೂ ನೇರವಾಗಿ ಎಚ್ಚರಿಸುವ ಕೆಲಸವಾಗಲಿ, ಆದರೆ ಅದು ಯಾವುದೇ ಕಾರಣಕ್ಕೂ ವೈಯಕ್ತಿಕ ತೇಜೋವಧೆಯ ಹಂತಕ್ಕೆ ತಲುಪಬಾರದು ಎಂದರು.ಶ್ರೀ ಸಿದ್ಧಾರ್ಥ ಮಾಧ್ಯಮ ಸಂಸ್ಥೆಯ ನಿರ್ದೇಶಕರಾದ ಡಾ . ಬಿ.ಟಿ.ಮುದ್ದೇಶ್ ಮಾತನಾಡುತ್ತಾ ಇಂದಿನ ತಂತ್ರಜ್ಞಾನ ನಾವು ಕೇಳುವುದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ನೀಡುವ ಮಟ್ಟಕ್ಕೆ ಬೆಳೆದಿದೆ. ತಂತ್ರಜ್ಞಾನ ವರವೂ ಹೌದು, ಶಾಪವೂ ಹೌದು. ಮಾನವನ ಚಿಂತನೆ, ವಿವೇಚನೆ ಮತ್ತು ಸೃಜನಶೀಲತೆಗೆ ಪರ್ಯಾಯವಾಗಿ ಯಾವುದೇ ತಂತ್ರಜ್ಞಾನ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಜಿಲ್ಲಾ ಕಾರ್ಯದರ್ಶಿ ಟಿ ಇ ರಘುರಾಮ್, ರೋಟರಿ ಅಧ್ಯಕ್ಷ ಎಂ.ಬಿ. ನಾಗರಾಜು, ಬಿಇಒ ಕಾಂತರಾಜು, ಸಿ ಎನ್ ಪ್ರಸನ್ನ ಕುಮಾರ್, ಜಿ. ಮಹಾಲಿಂಗಯ್ಯ, ಸಿ ಡಿ ಸುರೇಶ್, ಚೇತನ್ ಪ್ರಸಾದ್ , ಹಿರಿಯ ಸಾಹಿತಿ ಎಂ ವಿ ನಾಗರಾಜು, ಜಯಣ್ಣ, ಮಧು, ತಾಲೂಕು ಸಂಘದ ಎಲ್ಲಾ ಪಧಾಧಿಕಾರಿಗಳು ಉಪಸ್ಥಿತರಿದ್ದರು.