‘ನಾನು ಕೆಪಿಎಸ್ಸಿ, ಬಿಡದಿ, ನೈಸ್‌ ವಿಷಯ ಪ್ರಸ್ತಾಪಿಸಿದಾಗ ಪ್ರಜ್ವಲ್‌ ರೇವಣ್ಣನ ಸೆಲ್‌ನಲ್ಲಿ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್‌ ಇದೆ ಎಂದು ಕತೆ ಶುರು ಮಾಡಿದ್ದಾರೆ. ಆ ಹುಡುಗನ ಹೆಸರು ಇಟ್ಕಂಡು ದೇವೇಗೌಡರ ಕುಟುಂಬದ ಬಾಯಿ ಮುಚ್ಚಿಸಲು ನಿಮ್ಮ ಕೈಯಲ್ಲಿ ಆಗುತ್ತಾ?’

ಹೊಳೆನರಸೀಪುರ: ‘ನಾನು ಕೆಪಿಎಸ್ಸಿ, ಬಿಡದಿ, ನೈಸ್‌ ವಿಷಯ ಪ್ರಸ್ತಾಪಿಸಿದಾಗ ಪ್ರಜ್ವಲ್‌ ರೇವಣ್ಣನ ಸೆಲ್‌ನಲ್ಲಿ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್‌ ಇದೆ ಎಂದು ಕತೆ ಶುರು ಮಾಡಿದ್ದಾರೆ. ಆ ಹುಡುಗನ ಹೆಸರು ಇಟ್ಕಂಡು ದೇವೇಗೌಡರ ಕುಟುಂಬದ ಬಾಯಿ ಮುಚ್ಚಿಸಲು ನಿಮ್ಮ ಕೈಯಲ್ಲಿ ಆಗುತ್ತಾ?’ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

2 ವರ್ಷಗಳಿಂದ ಆತ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ತೀರ್ಪು ಕೊಟ್ಟಿದೆ, ತೀರ್ಪು ಸ್ವೀಕರಿಸಿದ್ದೇವೆ. ಆದರೆ 2 ವರ್ಷ ಇಲ್ಲದೆ ಇದ್ದಿದ್ದು, ಬಿಡದಿ, ಕೆಪಿಎಸ್‌ಸಿ, ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದ ಜೈಲಲ್ಲಿ ಫೋನ್ ಹಾಗೂ ಪೆನ್‌ಡ್ರೈವ್ ಇದೆ, ಅದರಲ್ಲಿ ಅಶ್ಲೀಲ ಚಿತ್ರ ಇದೆ ಎಂದು ಹೊಸದಾಗಿ ಕಥೆ ಶುರು ಮಾಡಿದ್ದಾರೆ ಎಂದರು.

- ಬಿಡದಿ, ಕೆಪಿಎಸ್ಸಿ, ನೈಸ್‌ ವಿಷಯ ಪ್ರಸ್ತಾಪಿಸಿದೆ

- ಅದಕ್ಕೆ ಪ್ರಜ್ವಲ್‌ ಸೆಲ್‌ ಮೇಲೆ ದಾಳಿ: ಆರೋಪ