ಶಿವಾನಂದ ಪಿ.ಮಹಾಬಲಶೆಟ್ಟಿ
ಜಾನುವಾರು ಮಾಲೀಕರು ತಮ್ಮ ಎಮ್ಮೆ, ಹಸುಗಳು ಹಾಲು ಹಿಂಡಿಕೊಂಡು ಬೀದಿಗೆ ಬಿಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಡಾಡಿ ದನಗಳ ಸಂಖ್ಯೆ ಅಧಿಕವಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಹರಸಾಹಸ ಪಡುವಂತಾಗಿದ್ದು, ರಸ್ತೆ ಸಂಚಾರಕ್ಕೇ ಸಂಚಕಾರ ಬಂದಂತಿದೆ.
ಬನಹಟ್ಟಿ ನಗರದ ಗಾಂಧಿ ವೃತ್ತ, ಸೋಮವಾರ ಪೇಟೆ, ಮಂಗಳವಾರ ಪೇಟೆ, ರಬಕವಿ ನಗರದ ಹೊಸಪೇಟೆ ಲೈನ್, ಢಪಳಾಪೂರ ಕಿರಾಣಿ ಅಂಗಡಿ ಬಳಿ, ಶಂಕರಲಿಂಗ ದೇವಸ್ಥಾನ ಸರ್ಕಲ್ನ ಮುಖ್ಯ ರಸ್ತೆಯ ಮೇಲೆ ದನಗಳು ಅಡ್ಡಾದಿಡ್ಡಿಯಾಗಿ ಕೂತು ವಾಹನ ಸವಾರರಿಗೆ ಕಂಟಕ ಮಾಡುತ್ತಿವೆ. ಕೆಲವೊಮ್ಮೆ ವಾಹನಗಳು ದನಗಳ ಕಾಲುಗಳ ಮೇಲೆಯೇ ಹಾದು ಹೋಗಿರುವ ಘಟನೆಗಳೂ ನಡೆದಿವೆ. ಆದರೂ ದನಗಳ ಮಾಲೀಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ದ್ವಿಚಕ್ರ ಸೇರಿದಂತೆ ಉಳಿದ ವಾಹನಗಳ ಸವಾರರಿಗೆ ನಿತ್ಯ ಸಂಚಾರ ಸವಾಲಾಗಿದೆ.ನಗರಸಭೆ ಹಿಂದೆ ಇದಕ್ಕೆ ಕಡಿವಾಣ ಹಾಕುವಲ್ಲಿ ಅಗತ್ಯ ಕ್ರಮ ಜರುಗಿಸಿತ್ತು. ಇದೀಗ ಹೊಸ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಗೊಂಡಿದ್ದು ಬರುವ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಅಧಿಕಾರಿಗಳ ಜೊತೆ ಸಮಾಲೋಚಿಸಿ ಜಾನುವಾರುಗಳ ನಿಯಂತ್ರಣಕ್ಕಾಗಿ ಮಾಲೀಕರಿಗೆ ಕಠಿಣ ದಂಡ ವಿಧಿಸುವ ಮೂಲಕ ಸುಗಮ ಸಂಚಾರಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
ಗೂಳಿ-ಕತ್ತೆಗಳ ಹಾವಳಿ:
ರಸ್ತೆ ಮೇಲಿರುವ ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸಿ ಮಾಲೀಕರಿಗೆ ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ ಕೊಳಕಿ ಒತ್ತಾಯಿಸಿದ್ದಾರೆ.
ಜಗದೀಶ ಈಟಿ, ಪೌರಾಯುಕ್ತರು, ರಬಕವಿ-ಬನಹಟ್ಟಿ.
ರವಿ ದೇಸಾಯಿ, ಯುವ ಉದ್ಯಮಿ, ರಬಕವಿ.