ಶುಶ್ರೂಷಕಿಯರು ಮಾತೃಸ್ವರೂಪಿ: ಪ್ರೊ.ಹಜರತ್‌ಅಲಿ.

KannadaprabhaNewsNetwork |  
Published : May 16, 2024, 12:50 AM IST
ಸುಶ್ರೂಶಕಿಯರು ಮಾತೃರೂಪಿಗಳು : ಪ್ರೊ.ಹಜರತ್‌ಅಲಿ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ): ದಾದಿಯರು ರೋಗಿಗಳ, ವೃದ್ಧರ ಪಾಲಿನ ತಾಯಂದಿರಿದ್ದಂತೆ. ಯಾವುದೇ ಸ್ವಾರ್ಥವಿಲ್ಲದೇ ಪೀಡಿತರಿಗೆ ಸೇವೆ ಸಲ್ಲಿಸುವ ಮೂಲಕ ಶುಶ್ರೂಷಕಿಯರು ವೈದ್ಯಕೀಯ ಕ್ಷೇತ್ರದಲ್ಲಿ ಮೂಲ ಮೆಟ್ಟಿಲಾಗಿದ್ದಾರೆ. ಚಿಕಿತ್ಸಾಪೂರ್ವ, ಚಿಕಿತ್ಸಾ ಸಮಯ ಮತ್ತು ಚಿಕಿತ್ಸಾ ಬಳಿಕ ಶುಶ್ರೂಷಕಿಯರ ಸೇವೆ ಶ್ರೇಷ್ಠ ಎಂದು ಶ್ರೀ ಸಿದ್ದಿ ವಿನಾಯಕ ಕಾಲೇಜ್ ಆಫ್ ನರ್ಸಿಂಗ್‌ನ ಪ್ರೊ.ಹಜರತ್ ಅಲಿ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):

ದಾದಿಯರು ರೋಗಿಗಳ, ವೃದ್ಧರ ಪಾಲಿನ ತಾಯಂದಿರಿದ್ದಂತೆ. ಯಾವುದೇ ಸ್ವಾರ್ಥವಿಲ್ಲದೇ ಪೀಡಿತರಿಗೆ ಸೇವೆ ಸಲ್ಲಿಸುವ ಮೂಲಕ ಶುಶ್ರೂಷಕಿಯರು ವೈದ್ಯಕೀಯ ಕ್ಷೇತ್ರದಲ್ಲಿ ಮೂಲ ಮೆಟ್ಟಿಲಾಗಿದ್ದಾರೆ. ಚಿಕಿತ್ಸಾಪೂರ್ವ, ಚಿಕಿತ್ಸಾ ಸಮಯ ಮತ್ತು ಚಿಕಿತ್ಸಾ ಬಳಿಕ ಶುಶ್ರೂಷಕಿಯರ ಸೇವೆ ಶ್ರೇಷ್ಠ ಎಂದು ಶ್ರೀ ಸಿದ್ದಿ ವಿನಾಯಕ ಕಾಲೇಜ್ ಆಫ್ ನರ್ಸಿಂಗ್‌ನ ಪ್ರೊ.ಹಜರತ್ ಅಲಿ ಹೇಳಿದರು.

ದಾನಿಗೊಂಡ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಅಂಗವಾಗಿ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಆಯೋಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿ, ವೈದ್ಯಕೀಯ ಸೇವೆಗೆ ಸಿದ್ಧವಾಗಿರುವ ಎಲ್ಲರೂ ನಿಷ್ಕಾಮ ಸೇವೆಗೆ ಬದ್ಧರಾಗಬೇಕು. ಸಮಯ ಪಾಲನೆ, ಸೂಕ್ತ ಹೊಣೆಗಾರಿಕೆ ನಿಭಾಯಿಸಲು ಕಂಕಣಬದ್ಧರಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಪಿ.ಬಿ.ಅಪರಾಜ್ ವಿದ್ಯಾರ್ಥಿಗಳಿಗೆ ಶುಶ್ರೂಷಕಿಯರ ಮೌಲ್ಯದ ಬಗ್ಗೆ ಹಾಗೂ ಅವರ ಕಾರ್ಯ ಮಹತ್ವದ ಬಗ್ಗೆ ಮಾತನಾಡಿದರು. ದಾನಿಗೊಂಡ ಸರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಕುಮಾರ ಕಡಿ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ದಾನೇಶ್ವರಿ ಮಟಗಾರ್ ಸ್ವಾಗತಿಸಿದರು. ಪ್ರಶಾಂತ ವಂದಿಸಿದರು. ಶುಶ್ರೂಷಕಿಯರ ದಿನದ ಅಂಗವಾಗಿ ದಾನಿಗೊಂಡ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಸೈನ್ಸ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ