ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಲೋಹಿಯಾ ಪ್ರತಿಷ್ಠಾನ, ಕ್ಷೇಮ ಟ್ರಸ್ಟ್, ಐಕ್ಯೂಎಸಿ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ " ಕುರಿತು ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬದುಕಿನ ದೊಡ್ಡ ಸವಾಲು ಎಂದರೆ ಆರೋಗ್ಯವಾಗಿದೆ. ಸಕಲ ಭಾಗ್ಯಗಳಲ್ಲೂ ಆರೋಗ್ಯವೇ ದೊಡ್ಡ ಭಾಗ್ಯವಾಗಿದೆ. ಯಾಂತ್ರೀಕತೆಯ ನಡುವೆ ಮನುಷ್ಯರೇ ಬೇಡವಾದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅಡುಗೆ ಮಾಡುವವರಿಂದ ಹಿಡಿದು, ಜೋಗುಳ ಹಾಡುವವರು, ಕುಡಿಸುವವರ ತನಕ ಯಂತ್ರಗಳೇ ಬಂದಿವೆ. ಜನ ಜೀವನವೇ ಬದಲಾಗುವ ಈ ಹೊತ್ತಿನಲ್ಲಿ ಮನಸ್ಸುಗಳಿಗೆ ಬೆಲೆಯೇ ಇಲ್ಲವಾಗಿದೆ ಎಂದು ವಿಷಾದಿಸಿದರು.ಬಹುಮುಖ್ಯವಾಗಿ ಯುವಕರಲ್ಲಿ ಆರೋಗ್ಯ ಸಮಸ್ಯೆ ಕಾಡತೊಡಗಿದೆ. 25 ವರ್ಷದ ಕೆಳಗಿನ ಮಕ್ಕಳೇ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಯಂಗ್ ಡಯಾಬಿಟಿಸ್, ಯಂಗ್ ಬಿಪಿ ಕಾಣಿಸಿಕೊಳ್ಳತೊಡಗಿದೆ. ಯುವಕರಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ. ಯುವಕರು ಕೀಳರಿಮೆಯಿಂದ ಹೊರ ಬರಬೇಕಾಗಿದೆ. ಮಾನಸಿ ಆರೋಗ್ಯ ಎಂದರೆ ಭಯ, ಕೋಪ, ಮತ್ಸರ ಮುಂತಾದ ಕೆಟ್ಟ ಗುಣಗಳನ್ನು ದೂರವಿಡಿ. ಮೂಢನಂಬಿಕೆಗಳಿಂದ ಹೊರಬನ್ನಿ. ವೈಜ್ಞಾನಿಕವಾಗಿ ಆಲೋಚಿಸಿ, ಪ್ರೀತಿಯನ್ನು ತೋರಿಸಿ, ನಾವು ಪ್ರಕೃತಿಯ ಸೃಷ್ಟಿ. ಪ್ರಕೃತಿಯ ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದು ಬೇಡ ಎಂದರು.
ಕವಯತ್ರಿ ಸವಿತಾ ನಾಗಭೂಷಣ್ ಮಾತನಾಡಿ, ಮಾನವೀಯತೆಯ ಸ್ಪರ್ಶ ಇಂದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಜಾತಿ, ಧರ್ಮ, ಬಡತನ, ಸಿರಿತನಗಳನ್ನು ಮೀರಿ ಬೆಳೆಯಬೇಕಾಗಿದೆ. ನಮ್ಮ ಆಸಕ್ತಿಗಳು ಸರಿಯಾದ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಆರ್.ಶ್ರೀಧರ್ , ಐಕ್ಯೂಎಸಿ ಸಂಚಾಲಕಿ ಪ್ರೊ. ಕೆ.ಎಸ್.ಸರಳಾ, ಪ್ರಾಧ್ಯಾಪಕರಾದ ಕುಂದನ್ ಬಸವರಾಜ್, ಡಾ. ಗಿರಿಧರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಎ.ಶಿವಮೂರ್ತಿ ಮುಂತಾದವರಿದ್ದರು.
- - - -9ಎಸ್ಎಂಜಿಕೆಪಿ01: