ಕನ್ನಡಪ್ರಭ ವಾರ್ತೆ ಐಗಳಿ
ಸಮೀಪದ ಕೊಕಟನೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.24 ಸುಟ್ಟಟ್ಟಿ ಗ್ರಾಮದ ಪಿಕೆಪಿಎಸ್ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡುತ್ತ ರೈತರು ಒಂದೇ ಬೆಳೆಯನ್ನು ನೆಚ್ಚಿ ಕೃಷಿ ಮಾಡದೇ ದ್ರಾಕ್ಷಿ, ಕಬ್ಬು, ಮೆಕ್ಕೆಜೋಳ, ದಾಳಿಂಬೆ ಸೇರಿದಂತೆ ಸುಧಾರಿತ ಬೆಳೆಗಳನ್ನು ಬೆಳೆಯಬೇಕು. ಅಂದಾಗ ಬರಗಾಲ ಆವರಿಸಿದರೂ ಯಾವುದೇ ನಷ್ಟ ಆಗುವುದಿಲ್ಲ. ಸಾಲ ಪಡೆಯುವ ಪ್ರಶ್ನೆಯೇ ಬರುವುದಿಲ್ಲ. ತಿರುಗಿ ಸರ್ಕಾರಕ್ಕೆ ರೈತರೇ ಸಾಲ ಕೊಡುವಷ್ಟು ಸದೃಢರಾಗುತ್ತಾರೆ ಎಂದು ರೈತರ ಪರವಾಗಿ ಮಾತನಾಡಿದ್ದಾರೆ. ಆದರೆ, ಪೂರ್ಣ ವಿಡಿಯೋದಲ್ಲಿನ ಸಣ್ಣ ವಿಡಿಯೋ ಇಟ್ಟುಕೊಂಡು ಸಚಿವರು ರೈತರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆಂದು ಬಿಂಬಿಸಲು ಹೊರಟಿರುವುದು ಅವರ ತೇಜೋವಧೆಗೆ ಮಾಡಿದ ಸಂಚಾಗಿದೆ ಎಂದರು.
25 ವರ್ಷಗಳ ಕಾಲ ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಒಕ್ಕಲುತನ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡಿದ ಪಾಟೀಲರು ಕೃಷಿಪರ ಆರ್ಥಿಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರ ಭಾಷಣವನ್ನು ತಪ್ಪಾಗಿ ಬಿಂಬಿಸಿ ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುವಲ್ಲಿ ವಿರೋಧ ಪಕ್ಷಗಳು ಯತ್ನಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ರೈತರು ವಿರೋಧ ಪಕ್ಷದವರ ಮಾತಿಗೆ ಕಿವಿಗೊಡದೇ ಸಚಿವರು ರೈತರಿಗಾಗಿ ಮಾಡಿರುವ ಕಾರ್ಯವನ್ನು ಗಮನಿಸಬೇಕು ಎಂದು ಮನವಿ ಮಾಡಿದರು.ಮುಖಂಡ ಅನಿಲ ಚವ್ಹಾಣ ಮಾತನಾಡಿ, ಸಚಿವ ಶಿವಾನಂದ ಪಾಟೀಲರ ಇಡೀ ಕಾರ್ಯಕ್ರಮದ ಭಾಷಣ ಕೇಳಬೇಕು. ಆಗ ಅವರು ರೈತಪರ ಕಾಳಜಿ ತೊರಿರುವುದು ಗೊತ್ತಾಗುತ್ತದೆ. ಮುಂದೆ. ಹಿಂದೆ. ಪೂರ್ಣ ವಿಡಿಯೋ ನೋಡದೇ ಮಧ್ಯದ ವಿಡಿಯೋದಲ್ಲಿನ ಮಾತನ್ನು ಪ್ರಸಾರ ಮಾಡಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಇದು ನಮಗೆ ಸುದ್ಧಿ ಅಘಾತ ತಂದಿದೆ ಎಂದರು.