ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಹನುಮಾನ ಮಂದಿರದ ಮುಂಬಾಗದಲ್ಲಿ ಭವ್ಯ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಲಾಡು ವಿತರಣೆಗೆ ಚಾಲನೆ ನೀಡಿದರು.
ನಂತರ ಹನುಮಾನ ದೇವಸ್ಥಾನ, ರಾಮೇಶ್ವರ ದೇವಸ್ಥಾನ, ರಾಘವೇಂದ್ರ ಮಠ, ರಾಮದಾಸ, ಬಾಲಾಜಿ ಮಂದಿರ, ಅಪ್ಪಾಸಾಬ ವಿಠ್ಠಲ ಮಂದಿರದಲ್ಲಿ ಪೂಜೆ ಸಲ್ಲಿಸಿದರು.ವೃದ್ದಾಶ್ರಮಕ್ಕೆ ಭೆಟ್ಟಿ ನೀಡಿ ಸಿಹಿ ಹಂಚಿದರು. ಹಾಗೂ ಕ್ಷೇತ್ರಾದ್ಯಂತ 1.30ಲಕ್ಷಕೂ ಅಧಿಕ ಲಾಡುಗಳನ್ನು ವಿತರಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಅಜಯ ಕಡಪಟ್ಟಿ, ರಾಕೇಶ ಲಾಡ, ಶಶಿಕಾಂತ ವಿಶ್ವಬ್ರಾಹ್ಮನ, ಮಹಾದೇವ ನ್ಯಾಮಗೌಡ, ಪವನ ಸಾವಂತ, ಪ್ರಭು ಜನವಾಡ, ಶೈಲೇಶ ಆಪ್ಟೆ ಶಂಕರ ಕಾಳೆ, ಗಣೇಶ ಶಿರಗಣ್ಣವರ, ರಾಜು ಕಡಕೋಳ ಇತರರು ಇದ್ದರು.