ರೇಷನ್ ಕಾರ್ಡ್ ನೀಡಿ ಶಾಸಕ ಸ್ಪಂದನೆ

KannadaprabhaNewsNetwork |  
Published : Dec 05, 2025, 02:30 AM IST
ಪಡಿತರ ಚೀಟಿ ವಿತರಣೆ | Kannada Prabha

ಸಾರಾಂಶ

ಶಿರಂಗಾಲ ಗ್ರಾಮದ ಬಡ ಕುಟುಂಬ ಮಹಿಳೆ ಕೆ ಸಿ ಕುಮಾರಿ ಎಂಬವರು ತನ್ನ ಪತಿಯ ತುರ್ತು ಚಿಕಿತ್ಸೆಗೆ ಆಹಾರ ಇಲಾಖೆ ಮೂಲಕ ಪಡಿತರ ಚೀಟಿ ಪಡೆಯಲು ಶಾಸಕರಿಗೆ ಮನವಿ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಅನಾರೋಗ್ಯದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಾಗಿದ್ದ ಪಡಿತರ ಚೀಟಿ ಪಡೆಯಲು ಶಿರಂಗಾಲ ಗ್ರಾಮದ ಮಹಿಳೆಯೊಬ್ಬರು ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದ ಕೇವಲ 24 ಗಂಟೆಗಳ ಅವಧಿಯಲ್ಲಿ ಕುಶಾಲನಗರ ತಾಲೂಕು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೂಲಕ ರೇಷನ್ ಕಾರ್ಡ್ ನೀಡಿದ್ದಾರೆ.ಕುಶಾಲನಗರ ತಾಲೂಕು ಶಿರಂಗಾಲ ಗ್ರಾಮದ ಬಡ ಕುಟುಂಬದ ಮಹಿಳೆ ಕೆ ಸಿ ಕುಮಾರಿ ಎಂಬವರು ತನ್ನ ಪತಿಯ ತುರ್ತು ಚಿಕಿತ್ಸೆಗೆ ಆಹಾರ ಇಲಾಖೆ ಮೂಲಕ ಪಡಿತರ ಚೀಟಿ ಪಡೆಯಲು ಶಾಸಕರಿಗೆ ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಶಾಸಕರು ಕುಶಾಲನಗರ ತಾಲೂಕಿನ ಆಹಾರ ಇಲಾಖೆಯ ನಿರೀಕ್ಷಕರಾದ ಸ್ವಾತಿ ಅವರಿಗೆ ಸೂಚನೆ ನೀಡಿ ಅಗತ್ಯ ಪಡಿತರ ಚೀಟಿಯನ್ನು ಕೊಡಲೇ ಒದಗಿಸುವಂತೆ ತಿಳಿಸಿದ್ದಾರೆ. ಕಳೆದ ಶನಿವಾರ ನೀಡಿದ ಅರ್ಜಿಗೆ ಸೋಮವಾರ ಬೆಳಗ್ಗೆ ಪಡಿತರ ಚೀಟಿ ಸಿದ್ಧವಾಗಿದ್ದು, ಕುಶಾಲನಗರದಲ್ಲಿ ನಡೆದ ಕೆ ಡಿ ಪಿ ಸಭೆಯಲ್ಲಿ ಕುಟುಂಬ ಸದಸ್ಯರಿಗೆ ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಿದರು. ಮಾನವೀಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌