ಶಾಸಕರ ಭರವಸೆ ಧರಣಿ ಸತ್ಯಾಗ್ರಹ ಅಂತ್ಯ

KannadaprabhaNewsNetwork |  
Published : Jul 26, 2026, 03:15 AM IST
ತಾಳಿಕೋಟೆ 3 | Kannada Prabha

ಸಾರಾಂಶ

ತಾಳಿಕೋಟೆ ತಾಲೂಕಿನ ಕೆಸರಟ್ಟಿ ಕ್ರಾಸ್‌ದಿಂದ ಬಿಂಜಲಭಾವಿ ಮಾರ್ಗವಾಗಿ ಕಲಕೇರಿ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ನವೀಕರಣ ಕಾರ್ಯ ಕೈಗೊಳ್ಳುವಂತೆ ರಾಷ್ಟ್ರೀಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕು ಮತ್ತು ಗ್ರಾಮ ಘಟಕದ ನೇತೃತ್ವದಲ್ಲಿ ೩ ದಿನಗಳಿಂದ ಬಿಂಜಲಭಾವಿ ಗ್ರಾಮದ ಹತ್ತಿರ ನಡೆದ ಧರಣಿ ಸತ್ಯಾಗ್ರಹ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಅವರ ಭರವಸೆ ಮೇರೆಗೆ ಅಂತ್ಯ ಕಂಡಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಕೆಸರಟ್ಟಿ ಕ್ರಾಸ್‌ದಿಂದ ಬಿಂಜಲಭಾವಿ ಮಾರ್ಗವಾಗಿ ಕಲಕೇರಿ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ನವೀಕರಣ ಕಾರ್ಯ ಕೈಗೊಳ್ಳುವಂತೆ ರಾಷ್ಟ್ರೀಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕು ಮತ್ತು ಗ್ರಾಮ ಘಟಕದ ನೇತೃತ್ವದಲ್ಲಿ ೩ ದಿನಗಳಿಂದ ಬಿಂಜಲಭಾವಿ ಗ್ರಾಮದ ಹತ್ತಿರ ನಡೆದ ಧರಣಿ ಸತ್ಯಾಗ್ರಹ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಅವರ ಭರವಸೆ ಮೇರೆಗೆ ಅಂತ್ಯ ಕಂಡಿದೆ.

ಶುಕ್ರವಾರ ಧರಣಿ ನಿರತರ ಸ್ಥಳಕ್ಕೆ ಭೇಟಿ ನೀಡಿದ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು, ರಸ್ತೆ ದುರಸ್ತಿಗಾಗಿ ೨೦೨೪ರ ನವೆಂಬರ್ ನಲ್ಲಿ ₹೫ ಕೋಟಿ ಲೋಕೋಪಯೋಗಿ ಇಲಾಖೆಯಡಿ ಹಾಕಲಾಗಿತ್ತು. ಕೆಲವರ ಸ್ವಹಿತಾಸಕ್ತಿಗೆ ಈ ಕೆಲಸ ರದ್ದುಗೊಂಡಿತು. ಬಂದ ಅನುದಾನ ಬೇರೆಡೆ ಹೋಯಿತು. ಈಗ ರಸ್ತೆ ದುರಸ್ತಿಗೆ ಎಲ್ಲರ ಅಪೇಕ್ಷೆಯಂತೆ ಕೂಡಲೇ ತಾತ್ಕಾಲಿಕವಾಗಿ ಗರಸು ಹಾಕಿಸಿ ದರುಸ್ತಿ ಮಾಡಿಕೊಡಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರಸ್ತೆ ಡಾಂಬರೀಕರಣ ಅನುದಾನಕ್ಕಾಗಿ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಆದಷ್ಟು ಬೇಗ ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣವೇ ಡಾಂಬರೀಕರಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ರಾಜುಗೌಡ ಪಾಟೀಲ ಅವರ ಭರವಸೆ ಮೇರೆಗೆ ಧರಣಿ ನಿರತರು ಧರಣಿ ಸತ್ಯಾಗ್ರಹ ಹಿಂಪಡೆದುಕೊಳ್ಳುವುದಾಗಿ ತಿಳಿಸಿದರು.

ತಹಸೀಲ್ದಾರ್‌ ಡಾ.ವಿನಯಾ ಹೂಗಾರ, ಪಿಡಬ್ಲುಡಿ ಅಧಿಕಾರಿ ಅರುಣಕುಮಾರ, ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ರೈತ ಸಂಘದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಣಮಂತ ವಡ್ಡರ, ಜಿಲ್ಲಾ ಉಪಾಧ್ಯಕ್ಷ ಮೈಹಿಬೂಬಾಷಾ ಮನಗೂಳಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ, ತಾಲೂಕು ಅಧ್ಯಕ್ಷ ಅಶೋಕಗೌಡ ಪಾಟೀಲ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಅಸ್ಕಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶರಣು ಕೌದಿ, ಗ್ರಾಮ ಘಟಕದ ಅಧ್ಯಕ್ಷ ವಿಜಯಕುಮಾರ ಉಕ್ಕಲಿ, ಕೆಸರಟ್ಟಿ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ಬಸನಗೌಡ ಬಿರಾದಾರ, ಗುರುನಾಥಗೌಡ ಪಾಟೀಲ, ಬಿಂಜಲಭಾವಿ ಗ್ರಾಮದ ಮುಖಂಡರಾದ ಸಿದ್ದಣ್ಣ ಅಸ್ಕಿ, ಮಲಕನಗೌಡ ಬಿರಾದಾರ, ಸಾಯಬಣ್ಣ ಉಕ್ಕಲಿ, ಬಸಯ್ಯ ಹಿರೇಮಠ, ಶಾಂತಗೌಡ ಬಿರಾದಾರ, ಮಹ್ಮದಲಿ ಮಕಾಂದಾರ, ಚನ್ನಾರೆಡ್ಡಿಗೌಡ ಬಿರಾದಾರ, ಒಳಗೊಂಡು ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ