ಗುತ್ತಿಗೆದಾರರ ಸಮಸ್ಯೆ ಪರಿಹಾರಿಸುವೆ ಶಾಸಕ ತಮ್ಮಯ್ಯ ಭರವಸೆ

KannadaprabhaNewsNetwork |  
Published : Mar 09, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸುವ ಮೂಲಕ ಬಗೆಹರಿಸುತ್ತೇನೆ ಹಾಗೂ ಜಿಲ್ಲಾ ಸಂಘದ ಕಟ್ಟಡಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

- ಮಾ.11ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸುವ ಮೂಲಕ ಬಗೆಹರಿಸುತ್ತೇನೆ ಹಾಗೂ ಜಿಲ್ಲಾ ಸಂಘದ ಕಟ್ಟಡಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

ತಾಲೂಕಿನ ಆಲದಗುಡ್ಡೆ ಸಮೀಪ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಹಿಳಾ ವಿದ್ಯುತ್ ಗುತ್ತಿಗೆದಾರರ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪುರುಷ ಹಾಗೂ ಮಹಿಳಾ ಗುತ್ತಿಗೆದಾರರು ಸಂಘಟನಾತ್ಮಕ ಶಕ್ತಿ ಹೊಂದಿರಬೇಕು. ಆಗ ಸಂಘದ ಚಟುವಟಿಕೆ ಮುನ್ನೆಲೆಗೆ ಬರುವ ಜತೆಗೆ ಸಂಘದ ಬೇಡಿಕೆ ಈಡೇರಿಸಲು ಸಾಧ್ಯ. ಸಂಘ ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರ ಕಲ್ಪಿಸಲಾಗುವುದು ಎಂದರು.

ಆಧುನಿಕತೆ ಬೆಳೆದಂತೆ ವೃತ್ತಿ ಬದಲಾವಣೆಗೊಂಡಿದೆ. ಅಲ್ಲದೇ ವಿಶೇಷವಾಗಿ 400ಕ್ಕೂ ಮಹಿಳಾ ಗುತ್ತಿಗೆದಾರರು ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಶ್ಚರ್ಯ ಎಂದು ತಿಳಿಸಿದರು.

ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಮಾತನಾಡಿ, ಅಸ್ಥಿತ್ವದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿರುವವರಿಗೆ ನಿಯಮ ಸಡಿಲಿಸಿ ಒನ್ ಟೈಮ್‌ ರಿಲಾಕ್ಷೇಷನ್ ಜಾರಿ ಮಾಡಬೇಕು. ಕಳೆದ ವರ್ಷ ಆದೇಶದಿಂದ ಹಿಂದೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಎಲ್ಲಾ ಕಟ್ಟಡ ಗಳಿಗೆ ವಾಸ ದೃಢೀಕರಣ ಪತ್ರದಿಂದ ವಿನಾಯಿತಿ ನೀಡಿ ಶಾಶ್ವತ ವಿದ್ಯುತ್ ಸಂಪರ್ಕ ನೀಡಬೇಕು ಎಂದರು.

ರಾಜ್ಯದ ರೈತರು ನಿರ್ಮಿಸಿರುವ ಕೋಳಿ, ಕುರಿ ಸಾಕಾರಿಕೆ, ಹೈನುಗಾರಿಕೆ ಹಾಗೂ ತೋಟದ ಮನೆಗಳಿಗೆ ಹಾಗೂ ಇತರೆ ಕೃಷಿ ಚಟುವಟಿಕೆಗಳ ವಿದ್ಯುತ್ ಸಂಪರ್ಕಕ್ಕೆ ವಾಸ ದೃಢೀಕರಣ ಪತ್ರದಿಂದ ವಿನಾಯಿತಿ ನೀಡಬೇಕು. ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ತೊಂದರೆಯಾದ ಕೈಗಾರಿಕಾ ವಿದ್ಯುತ್ ಸಂಪರ್ಕಕ್ಕೆ ಓಸಿಯಿಂದ ವಿನಾಯಿ ನೀಡಲು ಆಗ್ರಹಿಸಿ ಮಾ.11ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದೇವೆ ಎಂದರು.

ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರ ಅಧ್ಯಕ್ಷ ಎ.ಎನ್.ಮಹೇಶ್, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾಧ್ಯಕ್ಷ ಆರ್. ಹರೀಶ್ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಕೆಎಸ್‌ಎಲ್‌ಇಸಿಎನ ರಾಜ್ಯ ಗೌರವ ಉಪಾಧ್ಯಕ್ಷ ಹರೀಶ್ ರಾಚಪ್ಪಗೌಡ ಪಾಟೀಲ್, ವೀರಶೆಟ್ಟಿ ಶಿವಬಸಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು, ಜಂಟಿ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿಗಳಾದ ಎಂ.ರಮೇಶ್, ಜಿ.ರಾಮಯ್ಯ, ಮಹಮ್ಮದ್ ಎಜಾಜ್, ಮುಖಂಡರಾದ ಬೆವಿನಗುಡ್ಡ ಯ್ಯ, ಕೆ.ಚಂದ್ರಬಾಬು, ಪಾಂಡು, ಶೈಲಶ್ರೀ, ಮಮತಾ, ಕೆ.ಎಸ್.ವೀಣಾ ಇದ್ದರು.

--ಕೋಟ್‌--ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹೆಣ್ಣನ್ನು ಗಂಡಿನ ಉಪಯೋಗಕ್ಕೆ ಮಾತ್ರ ಸೀಮಿತಗೊಳಿಸಿವೆ. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿನ ವಿಶೇಷ ಸ್ಥಾನಮಾನವಿದೆ. ಸರಸ್ವತಿ, ದುರ್ಗಿ, ಚಾಮುಂಡಿ, ಕಾಳಿ ರೂಪದಲ್ಲಿ ಪೂಜಿಸುವ ಸಂಸ್ಕೃತಿ ಭಾರತದಲ್ಲಿದೆ.

- ಡಾ.ಸಿ.ಟಿ.ರವಿ, ಸದಸ್ಯರು, ವಿಧಾನಪರಿಷತ್‌ ( ಪೋಟೊ)ಫೋಟೋ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಹಿಳಾ ವಿದ್ಯುತ್ ಗುತ್ತಿಗೆದಾರರ ಮಹಿಳಾ ದಿನಾಚರಣೆಯನ್ನು ಶಾಸಕ ಎಚ್‌.ಡಿ.ತಮ್ಮಯ್ಯ ಉದ್ಘಾಟಿಸಿದರು. ಗುತ್ತಿಗೆದಾರರ ಸಂಘದ ರಾಜ್ಯಾ ಧ್ಯಕ್ಷ ಸಿ.ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಹರೀಶ್ ರಾಚಪ್ಪಗೌಡ ಪಾಟೀಲ್, ವೀರಶೆಟ್ಟಿ ಶಿವಬಸಪ್ಪ, ಎಚ್.ವಿ.ಚಂದ್ರಬಾಬು, ಸಿ.ವಿ.ಮಲ್ಲಿಕಾರ್ಜುನ್, ಎಂ.ರಮೇಶ್, ಜಿ.ರಾಮಯ್ಯ, ಪಾಂಡು, ಶೈಲಶ್ರೀ, ಮಮತಾ, ಕೆ.ಎಸ್.ವೀಣಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಣ್ಣನ್ನು ಗೌರವಿಸುವವನೇ ನಿಜವಾದ ಮನುಜ
ಹೆಣ್ಣು ಅಬಲೆಯಲ್ಲಿ ಸಬಲೆ: ಮಾಜಿ ಸಚಿವ ಆಂಜನೇಯ