ಆತ್ಮಬಲದಿಂದ ಆಧುನಿಕತೆ ಚೈತನ್ಯದಾಯಕ: ಸ್ವಾಮಿ ವೀರೇಶಾನಂದ

KannadaprabhaNewsNetwork |  
Published : Aug 22, 2026, 01:15 AM IST
 | Kannada Prabha

ಸಾರಾಂಶ

ಆಧುನೀಕರಣವೆಂದರೆ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಹಾಗೂ ಮನೋನಿಗ್ರಹದ ಮಹತ್ವವನ್ನು ಕಡೆಗಣಿಸಬೇಕೆಂದಿಲ್ಲ. ಆಧುನೀಕರಣವು ಚೈತನ್ಯದಾಯಕವಾಗಬೇಕಾದರೆ ಅದು ಆತ್ಮಬಲದ ಶಕ್ತಿಯನ್ನು ಪಡೆಯುವುದರಿಂದಷ್ಟೇ ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳು ಸೋಲಿನ ಭಯ, ಆಷಾಢಭೂತಿತನ, ಹುಸಿ ಅಹಂಕಾರ, ಸತ್ಯವನ್ನು ನುಡಿಯುವುದರಲ್ಲಿ ಧೈರ‍್ಯದ ಕೊರತೆ ಮತ್ತು ಇತರರಿಂದ ಎದುರಾಗಬಹುದಾದ ಟೀಕೆಯ ಭಯ ಇವುಗಳನ್ನು ಸಮರ್ಪಕವಾಗಿ ಎದುರಿಸಲು ಯೋಗ್ಯವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ತುಮಕೂರು

ಶಿಕ್ಷಕನ ಬದುಕಿನಲ್ಲಿ ಕಲಿಯುವುದು ಮತ್ತು ಬೋಧಿಸುವುದೇ ನಿಜವಾದ ತಪಸ್ಸು. ರಾಷ್ಟ್ರ ನಿರ್ಮಾಣದ ಪ್ರಧಾನ ಶಿಲ್ಪಿ ಶಿಕ್ಷಕನೇ ಆಗಿರುವುದರಿಂದ ರಾಷ್ಟ್ರ ದ ಅತ್ಯುತ್ತಮ ಮನಸ್ಸುಗಳು ಶಿಕ್ಷಕರಾಗಬೇಕೆಂಬ ಆಶಯ ಸರ್ವಪಲ್ಲಿ ರಾಧಾಕೃಷ್ಣನ್ ಅವರದ್ದಾಗಿತ್ತು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು. ಅವರು ಆಶ್ರಮದಲ್ಲಿ ತುಮಕೂರಿನ ವಿದ್ಯಾಶಂಕರ್ ಲರ್ನಿಂಗ್ ಸೆಂಟರ್‌ನ ಸಹಯೋಗದೊಂದಿಗೆ ನೆರವೇರಿದ ‘ವಿದ್ಯಾರ್ಥಿ ದೇವೋಭವ’ ಕಾರ‍್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪೂಜ್ಯರು ಮುಂದುವರಿದು, ಆಧುನೀಕರಣವೆಂದರೆ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಹಾಗೂ ಮನೋನಿಗ್ರಹದ ಮಹತ್ವವನ್ನು ಕಡೆಗಣಿಸಬೇಕೆಂದಿಲ್ಲ. ಆಧುನೀಕರಣವು ಚೈತನ್ಯದಾಯಕವಾಗಬೇಕಾದರೆ ಅದು ಆತ್ಮಬಲದ ಶಕ್ತಿಯನ್ನು ಪಡೆಯುವುದರಿಂದಷ್ಟೇ ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳು ಸೋಲಿನ ಭಯ, ಆಷಾಢಭೂತಿತನ, ಹುಸಿ ಅಹಂಕಾರ, ಸತ್ಯವನ್ನು ನುಡಿಯುವುದರಲ್ಲಿ ಧೈರ‍್ಯದ ಕೊರತೆ ಮತ್ತು ಇತರರಿಂದ ಎದುರಾಗಬಹುದಾದ ಟೀಕೆಯ ಭಯ ಇವುಗಳನ್ನು ಸಮರ್ಪಕವಾಗಿ ಎದುರಿಸಲು ಯೋಗ್ಯವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಇಂದಿನ ವಿದ್ಯಾರ್ಥಿಗಳೇ ರಾಷ್ಟ್ರದ ಭವಿಷ್ಯದ ಸಂಪನ್ಮೂಲ ಎಂದರು.

ಆ್ಯಪಲ್ ಸಂಸ್ಥೆಯ ಹಿರಿಯ ಇಂಜಿನಿಯರ್ ಪ್ರೀತಿರವರು ವಿಶೇಷ ಆಹ್ವಾನಿತರಾಗಿದ್ದರು. ಸ್ವಾಮಿ ಧೀರಾನಂದರು ವಿಶೇಷ ಆಹ್ವಾನಿತರಾಗಿದ್ದರು. ಮೈಸೂರು ಮಾಳವಿ ಮಂಜುನಾಥ್ ಮತ್ತು ಮೈಸೂರು ಸುಮಂತ್ ಮಂಜುನಾಥ್ ರವರಿಂದ ವಯೊಲಿನ್ ವಾದನವು ಅತ್ಯದ್ಭುತವಾಗಿ ಮೂಡಿಬಂದಿತು. ಶಿಕ್ಷಣತಜ್ಞ ವಿದ್ಯಾಶಂಕರ್ ಸ್ವಾಗತಿಸಿದರೆ ವಿವೇಕಾನಂದ ಯುವಕ ಸಂಘದ ಸುನೀಲ್ ಹುಲಿಕಲ್ ವಂದಿಸಿದರು. ಯುವ ಸಮ್ಮೇಳನದಲ್ಲಿ ನಗರದ ವಿವಿಧ ಪ್ರೌಢಶಾಲೆಗಳಿಂದ ಆರುನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಭಿವೃದ್ಧಿಯೇ ಲಯನ್ಸ್ ಧ್ಯೇಯ: ಡಾ.ಕೃಷ್ಣೇಗೌಡ
ಮಂಡ್ಯ: ೬೭ ಆಸ್ತಿ ಮಾಲೀಕರಿಂದ ರಾಜಕಾಲುವೆ ಒತ್ತುವರಿ..!