ಚಿತ್ರದುರ್ಗ: ದೇಶದ ಪ್ರಧಾನ ಮಂತ್ರಿಯಾಗಿ 3ನೇ ಬಾರಿಗೆ ನೇಮಕವಾಗಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆ ಭಾನುವಾರ ಸಂಜೆ ಬಿಜೆಪಿಯಿಂದ ಜೆಸಿಆರ್ ಬಡಾವಣೆ ಗಣಪತಿ ಮತ್ತು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಳೆದ 10 ವರ್ಷ ಮೋದಿಯವರು ಪ್ರಧಾನಮಂತ್ರಿಗಳಾಗುವುದರ ಮೂಲಕ ದೇಶ ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ದಿನಮಾನದಲ್ಲಿ ದೇಶ ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಮೋದಿಯವರ ಪ್ರಮಾಣ ವಚನ ಸಮಯದಲ್ಲಿ ಪ್ರಪಂಚದ ವಿವಿಧ ದೇಶದ ನಾಯಕರು ಭಾಗವಹಿಸುವುದರ ಮೂಲಕ ಮೋದಿಯವರಿಗೆ ಬಲ ನೀಡಿದ್ದಾರೆ ಎಂದರು.
ಈ ವೇಳೆ ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ನಗರಸಭಾ ಸದಸ್ಯರಾದ ಶ್ರೀಮತಿ ರೋಹಿಣಿ, ಹರೀಶ್, ಕೃಷ್ಣಮೂರ್ತಿ, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ನಾಗೇಂದ್ರಪ್ಪ, ಮುರುಗೇಶ್, ರಮೇಶ್, ಸೋಮಣ್ಣ, ಆದರ್ಶ, ಕಲಾ, ವಿರೂಪಾಕ್ಷ, ಗೋಪಿ, ವೆಂಕಟೇಶ್, ಪ್ರದೀಪ್, ವೆಂಕಟೇಶ್ ಸೇರಿ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಇದ್ದರು.ಇದೇ ವೇಳೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.