ಕನ್ನಡಪ್ರಭ ವಾರ್ತೆ ಮೈಸೂರು
ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಸಮಾಜ ಯಾರನ್ನು ಅಲಕ್ಷ್ಯ, ಅಗೌರವದಿಂದ ಕಾಣುವುದೋ ಅವರನ್ನು ದೇವರೆಂದು ಭಾವಿಸಿ ಎಂದಿದ್ದಾರೆ. ಈ ಸಂದೇಶ, ಆದೇಶ ಇವತ್ತಿನ ದಿನಕ್ಕೂ ಮಹತ್ವಪಡೆದಿದೆ. ಏಕೆಂದರೆ ಅವರ ತತ್ತ್ವದಂತೆ ಪ್ರತಿ ಜೀವಿಯಲ್ಲಿಯೂ ನಾವು ದೇವರನ್ನು ಕಾಣಬೇಕು. ಆಶ್ರಮದ ಕಾರ್ಯಕ್ರಮಗಳ ಮೂಲಕ ಚಾರಿತ್ರ್ಯ ನಿರ್ಮಾಣವಾಗಿದೆ. ಒತ್ತಡ ಕಡಿಮೆಗೊಳಿಸಲು ಏನು ಮಾಡಬೇಕು ಎಂಬುದಕ್ಕೆ ಮೈಸೂರು ಆಶ್ರಮ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯಾವ ಆಶ್ರಮ, ಸಂಘಟನೆ ನೈತಿಕತೆ ಬೋಧಿಸುವುದಿಲ್ಲವೋ ಯಾವ ಸಂಸ್ಥೆ ಸಮಾಜದ ಹಿತ ಬಯಸುವುದಿಲ್ಲವೋ, ಆ ಸಂಸ್ಥೆಯಿಂದ ಏನೂ ಉಪಯೋಗವಿಲ್ಲ ಎಂದರು.ಈ ಆಶ್ರಮ ಕುವೆಂಪು ಹೇಳಿದಂತೆ ಸರ್ವ ಜನಾಂಗದ ತೋಟದಂತಿದೆ. ಈ ಸಂದರ್ಭದಲ್ಲಿ ಸ್ವಾಮೀಜಿಗೆ ಎಲ್ಲರ ಪರವಾಗಿ ಅಭಿನಂದಿಸುತ್ತೇನೆ. ವೈಯಕ್ತಿಕವಾಗಿ ಪರಮಹಂಸರು, ವಿವೇಕಾನಂದರು ಭಾವನಾತ್ಮಕ ಸಂಬಂಧ. ನಮ್ಮ ಅಜ್ಜ ಪರಮಹಂಸರ ಸಂದೇಶ ಪ್ರಭುದ್ಧ ಭಾರತವನ್ನು ಬಯಸಿದ್ದರು. ಈ ಆಶ್ರಮ ನಮ್ಮ ತಂದೆ ಮೇಲೆ ಬಹುದೊಡ್ಡ ಪ್ರಭಾವ ಬೀರಿತು. ತತ್ತ್ವ ಸಿದ್ಧಾಂತ, ಚೌಕಟ್ಟಿನ ಬಗ್ಗೆ ಗೌರವ ಹೊಂದಿದ್ದರು. ಪರಮಹಂಸರ ಹೆಸರಿನಲ್ಲಿ ಗ್ರಾಮದಲ್ಲಿ ಶಾಲೆ ಪ್ರಾರಂಭಿಸಿದ್ದಾಗಿ ಅವರು ಹೇಳಿದರು.
ಶ್ರೀರಾಮಕೃಷ್ಣ ಆಶ್ರಮದ ಶತವಾನೋತ್ಸವದಲ್ಲಿ ಪಾಲ್ಗೊಳ್ಳುವುದೇ ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ನೂರು ವರ್ಷಗಳಲ್ಲಿ ಏನು ಸಾಧಿಸಿದೆ, ಎಷ್ಟು ಶ್ರಮ ವಹಿಸಿದೆ. ಸೇವಾಯಜ್ಞವೇ ಇಲ್ಲಿನ ಪ್ರಮುಖ ಅಂಶ. ಈ ಆಶ್ರಮ ವಿವೇಕಾನಂದರ ಆಶಯ ಅನುಷ್ಠಾನಗೊಳಿಸಿದೆ. ವೈಯಕ್ತಿಕ ಅಭಿಪ್ರಾಯದಲ್ಲಿ ಕುವೆಂಪು ಅವರು ಇಷ್ಟು ಎತ್ತರಕ್ಕೆ ಏರಬೇಕಾದರೆ ಆಶ್ರಮದ ಪ್ರಭಾವ, ಅನುಭವ, ಭಾಷೆ ಪ್ರಬುದ್ಧಗೊಳಿಸಿದೆ. ಕುವೆಂಪು ಅವರನ್ನು ರಾಷ್ಟ್ರಕವಿ ಮಾಡುವಲ್ಲಿ ಆಶ್ರಮದ ಕೊಡುಗೆ ಮಹತ್ತರವಾದುದು. ವಿವೇಕಾನಂದರು ಬಡವ ದೇವೋಭವ, ರೋಗಿ, ಪಾಪಿ ದೇವೋಭವ ಎಂದಿರುವುದಾಗಿ ಹೇಳಿದರು.
ಬಳಿಕ ಶಿಕ್ಷಣ, ಆರೋಗ್ಯ, ಸಮಾಜ ಸೇವೆ, ಆಧ್ಯಾತ್ಮಿಕ, ಪರ್ಸನಾಲಿಟಿ, ಇಮೇಜ್ ಬಿಲ್ಡಿಂಗ್ ವಿವಿಧ ಸೇವೆ. ಈಗ ಎರಡು ಪ್ರಮುಖ ಕ್ಷೇತ್ರಗಳಾಗಿ ಒಂದು ಮಠ ಹಾಗೂ ಮಿಷನ್ ಆಗಿ. ಆಧ್ಯಾತ್ಮ ಮತ್ತು ಧಾರ್ಮಿಕ ಹಾಗೂ ಸಮಾಜ ಸೇವೆಯಾಗಿದೆ ಎಂದು ಹೇಳಿದರು.
ವಿವೇಕಾನಂದರು ಹಾಗೂ ಪರಮಹಂಸರು ಶ್ರೇಷ್ಠ ಸಂತರು. 1985ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ವಿಧಾನಸಭೆಯಲ್ಲಿ ಇದೇ ಮಾತನಾಡಿದ್ದೆ. ಈ ಸಂಸ್ಥೆ ಇನ್ನೂ ಹೆಚ್ಚಿನ ಸೇವೆ ನೀಡಲು ಎಲ್ಲರ ಸಹಕಾರ ಅಗತ್ಯ. ನಮ್ಮ ಮಕ್ಕಳು ಏನೇ ಆಗಲಿ ಉತ್ತಮ ಪ್ರಜೆಗಳಾಗಬೇಕು. ಸಾಂಸ್ಕೃತಿಕ, ನೈತಿಕ ನೆಲೆಗಟ್ಟಿನಲ್ಲಿ ಬೆಳೆಯಬೇಕು ಎಂದರು.
1890ರಲ್ಲಿ ವಿವೇಕಾನಂದರು ಪರಿಚಾರಕರಾಗಿ ಮೈಸೂರಿಗೆ ಬಂದು ಕೆಲ ದಿನಗಳ ಕಾಲ ತಂಗಿದ್ದ ಪವಿತ್ರ ತಾಣ, ಚಾಮುಂಡೇಶ್ವರಿ ಕೃಪೆ, ದಿವ್ಯ ತ್ರಯರ ಕೃಪೆ, ಹಿತೈಷಿಗಳ ಸಹಕಾರದಿಂದ ಸಿಕ್ಕಿದೆ. ಹತ್ತು ವರ್ಷಗಳ ಸಾತ್ವಿಕ ಹೋರಾಟ, ಪ್ರಯತ್ನದಿಂದ ದಕ್ಕಿದ ದಿವ್ಯ ತಾಣದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮಾಡಲು ಸಾದ್ಯವಾಗಿದೆ ಎಂದು ಹೇಳಿದರು.
ಊಟಿ ಆಶ್ರಮದ ಅಧ್ಯಕ್ಷಸ್ವಾಮಿ ರಾಘವೇಶಾನಂದಜಿ, ಮೈಸೂರು ಆಶ್ರಮದ ಸೇವಾ ಕಾರ್ಯ ವಿವರಿಸಿದರು. ಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಗೌರವಾಧ್ಯಕ್ಷ ಸ್ವಾಮಿ ಗೌತವಾನಂದಜಿ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಕರ್ನಾಟಕ ಅಂಚೆ ವೃತ್ತ ಮುಖ್ಯ ಅಂಚೆ ಅಧೀಕ್ಷಕ ಕೆ. ಪ್ರಕಾಶ್ ಇದ್ದರು.