ಕನ್ನಡಪ್ರಭ ವಾರ್ತೆ ಮೈಸೂರು
ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬೆಳೆ ಸಮೀಕ್ಷೆ ಅನುಷ್ಠಾನ ಸಮಿತಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ದ್ವಿದಳಧಾನ್ಯಗಳಲ್ಲಿ ಆತ್ಮ ನಿರ್ಭರತೆ ಅಭಿಯಾನ ಹಾಗೂ ಎಣ್ಣೆ ಕಾಳು ಅಭಿಯಾನ ಸಮಿತಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪೂರ್ವ ಮುಂಗಾರು ಬೆಳೆ ಸಮೀಕ್ಷೆಯನ್ನು ಮುಂಬರುವ 30 ದಿನಗಳ ಒಳಗಾಗಿ ಕಡ್ಡಾಯವಾಗಿ ಮುಗಿಸಬೇಕಿದೆ. ಜಿಲ್ಲೆಯಲ್ಲಿ ಒಟ್ಟು 9,96,708 ಪ್ಲಾಟ್ ಗಳಿದ್ದು, ಸಮೀಕ್ಷೆ ನಡೆಸಬೇಕಿದೆ. ಜಿಲ್ಲೆಯ ಒಟ್ಟು 1,301 ಗ್ರಾಮಗಳಲ್ಲಿ ಈ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ 1009 ಪಿ.ಆರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.ಪ್ರತಿ ಬಾರಿ ಸಮೀಕ್ಷೆಯು ಶೇ. 94 ರಿಂದ ಶೇ. 96 ರಷ್ಟು ಮಾತ್ರ ಪ್ರಗತಿ ಕಾಣುತ್ತಿದ್ದು, ಕೆಲವೊಂದು ಭಾಗಗಳು ಕೈಬಿಟ್ಟು ಹೋಗುತ್ತಿವೆ. ಆದರೆ ಈ ಬಾರಿ ಶೇ. 1ರಷ್ಟು ಸಮೀಕ್ಷೆ ಬಾಕಿ ಉಳಿದರೂ ಸುಮಾರು 9,000 ರೈತರು ಯೋಜನೆಯಿಂದ ವಂಚಿತರಾಗುತ್ತಾರೆ. ಬರಗಾಲ ಘೋಷಣೆಯಾಗಿ ರೈತರಿಗೆ ಪರಿಹಾರ ನೀಡಬೇಕಾದ ವೇಳೆ ಬೆಳೆ ಸಮೀಕ್ಷೆಯ ಆಧಾರದ ಮೇಲೆಯೇ ಪರಿಹಾರ ವಿತರಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಒಬ್ಬ ರೈತರು ಕೂಡ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದರು.
ರಾಜ್ಯದಲ್ಲಿ ಪ್ರೂಟ್ ಐಡಿ ಇರುವಂತೆ ಸೆಂಟ್ರಲ್ ಪ್ರೂಟ್ ಐಡಿಯನ್ನು ಕ್ರಿಯೇಟ್ ಮಾಡಬೇಕಿದ್ದು, 50194 ಸೆಂಟ್ರಲ್ ಪ್ರೂಟ್ ಐಡಿ ಬಾಕಿ ಇದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನ ನೀಡಲು ಸೆಂಟ್ರಲ್ ಪ್ರೂಟ್ ಐಡಿ ಅವಶ್ಯವಿದೆ. ಆದ್ದರಿಂದ ಇದನ್ನು ಆದ್ಯತೆಯ ಮೇಲೆ ಮಾಡಬೇಕು. ರಾಜ್ಯದ ಪ್ರೂಟ್ ಐಡಿಯಲ್ಲಿ ಜಿಲ್ಲೆಯಲ್ಲಿ 3,31,342, ಫ್ರೂಟ್ಸ್ ಐಡಿಗೆ ಆಪ್ ಅಡಿಯಲ್ಲಿ ರೈತರ ಕೆಲವು ಪ್ಲಾಟ್ ಗಳು ಮಾತ್ರ ನೊಂದಣಿಯಾಗಿದ್ದು, ಉಳಿದಿರುವ ಪ್ಲಾಟ್ ಗಳನ್ನು ಫ್ರೂಟ್ಸ್ ಐಡಿಯಲ್ಲಿ ಸೇರ್ಪಡೆ ಮಾಡುವಂತೆ ಸೂಚಿಸಿದರು.
ಈಗಾಗಲೇ ಕೆಲವು ದ್ವಿದಳ ಧಾನ್ಯಗಳ ವಿಮೆ ನೋಂದಣಿಗೆ ಅಂತಿಮ ದಿನ ಹತ್ತಿರವಿರುವುದರಿಂದ ಗ್ರಾಮ ಮಟ್ಟದಲ್ಲಿ ಆಟೋ ಪ್ರಚಾರ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.