ಮೂಡುಬಿದಿರೆ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾ ಇದರ 550ನೇ ವರ್ಷಾಚರಣೆಯ ಸಾರ್ಧ ಪಂಚ ಶತಮಾನೋತ್ಸವದ ಅಂಗವಾಗಿ ರಾಷ್ಟ್ರವ್ಯಾಪಿಯಾಗಿ ಬದರಿಯಿಂದ ಆರಂಭಿಸಿ ಶಾಖಾ ಮಠ ಸಹಿತ ಜಪ ಕೇಂದ್ರಗಳಿಗೆ ಸಾಗಿ ಬರುತ್ತಿರುವ ಶ್ರೀ ರಾಮ ದಿಗ್ವಿಜಯ ರಥಯಾತ್ರೆ ತನ್ನ ಯಾತ್ರೆಯ 25ನೇ ದಿನ ಬುಧವಾರ ಮೂಡುಬಿದಿರೆಗೆ ಆಗಮಿಸಿತು.ಮಂಗಳೂರಿನ ಮಂಗಲರಾಮ ಜಪಕೇಂದ್ರದಿಂದ ಬಂದ ರಥವನ್ನು ಮೂಡುವೇಣುಪುರದ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ವಿದ್ಯಾನಿಧಿ ಜಪ ಕೇಂದ್ರದ ವತಿಯಿಂದ ಆಡಳಿತ ಮಂಡಳಿಯವರು ಭಜಕರು ಸ್ವಾಗತಿಸಿದರು.
ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಹಾಗೂ ಮೊಕ್ತೇಸರರು, ವಿದ್ಯಾನಿಧಿ ಜಪಕೇಂದ್ರದ ಪ್ರಮುಖರು, ಪೊನ್ನೆಚಾರಿ ದೇವಳದ ಉಪ ಕೇಂದ್ರದ ಎಂ.ಪಿ. ಅಶೋಕ್ ಕಾಮತ್ ವೇಣೂರು ಉಪ ಕೇಂದ್ರದ ಭಾಸ್ಕರ್ ಪೈ, ಕೆಸರುಗದ್ದೆ ಉಪ ಜಪ ಕೇಂದ್ರದ ಬಿ. ವಿಠಲ ರಾಯ ಕಾಮತ್ ಹಾಗೂ ಭಾರೀ ಸಂಖ್ಯೆಯಲ್ಲಿ ಭಜಕರು ಉಪಸ್ಥಿತರಿದ್ದರು. ಮೂಡುಬಿದಿರೆ ವಿಧ್ಯಾನಿಧಿ ಜಪಕೇಂದ್ರದಿಂದ ಅಪರಾಹ್ನ ಮಿತ್ತಬೈಲು ಶ್ರೀ ರಾಮ ಮಂದಿರದ ಸತ್ಯ ವಿಕ್ರಮ ಜಪಕೇಂದ್ರಕ್ಕೆ ರಥವನ್ನು ಬೀಳ್ಕೊಡಲಾಯಿತು.