ಗಣೇಶ್ ಕಾಮತ್
ಎಲ್ಲರನ್ನೂ ಒಳಗೊಳ್ಳುವುದು ಮತ್ತು ಒಂದಾಗಿಸುವುದು ನಮ್ಮ ಕರ್ನಾಟಕದ ಸಂಸ್ಕೃತಿ. ಭಾಷೆಯ ಸೊಗಡು, ಸಾಂಸ್ಕೃತಿಕ ವೈವಿಧ್ಯ, ಕನ್ನಡಿಗರ ಪ್ರೀತಿ, ವಿಶ್ವಾಸ. ಹಾಗಾಗಿ ಕರ್ನಾಟಕವೇ ಆಕರ್ಷಣೀಯ. ಕನ್ನಡಿಗರಾಗಿ ನಮ್ಮ ಭಾಗ್ಯ ಎಂದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್ ಕುಮಾರ್ ಹೇಳಿದರು.
ಶನಿವಾರ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- ೨೦೨೬’ ನ್ನು ವೈಭವವನ್ನು ಉದ್ಘಾಟಿಸಿ ಮಾತನಾಡಿದರು.ಸಮಗ್ರ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಎಲ್ಲರ ವೈವಿಧ್ಯತೆಯನ್ನೂ ಗೌರವಿಸುವ , ಬಂಧುತ್ವ, ಧಾರಾಳತನದ ಮನಸ್ಸು ಇಲ್ಲಿ ಕಂಡಿದೆ. ಕಾಲೇಜುಗಳ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಟ್ರೆಡಿಶನಲ್ ಡೇ ಎನ್ನುವ ವಿಶಿಷ್ಠ ಕಾರ್ಯಕ್ರಮದಲ್ಲಿ ಇದೇ ಮೊದಲು ಪಾಲ್ಗೊಂಡು ಖುಷಿಯಾಗಿದೆ. ಬಹಳ ಹಿಂದೆ ಸ್ಮೈಲ್ ಚಿತ್ರದ ಶೂಟಿಂಗ್ ಗೆ ಬಂದ ಬಳಿಕ ಎರಡನೇ ಬಾರಿ ಮೂಡುಬಿದಿರೆಗೆ ಬರುತ್ತಿದ್ದೇನೆ ಎಂದ ಅವರು, ನಾಲ್ಕು ದಶಕಗಳ ಚಿತ್ರರಂಗದ ಬದುಕಿನಲ್ಲಿ ಅದೇ ಪ್ರೀತಿ ತೋರಿಸುತ್ತಿರುವುದಕ್ಕಾಗಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಡ್ಯಾನ್ಸ್ ಕರ್ನಾಟಕ ಫಿನಾಲೆ ಕುರಿತು ಉಲ್ಲೇಖಿಸಿದ ಅವರು, ಆಳ್ವಾಸ್ ವಿದ್ಯಾರ್ಥಿನಿ ಸುಜನ್ಯ ಅವರ ಸಾಧನೆ ಶ್ಲಾಘಿಸಿದರು.
ಕುಣಿದು ಕುಪ್ಪಳಿಸಿದ ಶಿವಣ್ಣ..!
ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಚಿತ್ರರಂಗದ ಪ್ರಮುಖರಾದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭಕ್ಕೂ ಮೊದಲು ಸಮಗ್ರ ಭಾರತೀಯ ಸಂಸ್ಕೃತಿಯ ಹಾಗೂ ವಿಶೇಷವಾಗಿ ತುಳುನಾಡಿನ ಸಂಸ್ಕೃತಿಯ ವೈಭವ ಪರಿಚಯಿಸುವ ಸಾಂಸ್ಕೃತಿಕ ಮೆರವಣಿಗೆ ಸಭಾಂಗಣದಲ್ಲಿ ರಂಜಿಸಿತು. ಕರಾವಳಿ ಕರ್ನಾಟಕ ಸಹಿತ ಉತ್ತರ ಹಾಗೂ ದಕ್ಷಿಣ ಭಾರತದ ಆಹಾರ ಮೇಳ ಗಮನ ಸೆಳೆಯಿತು.