ಬಡವರ ಕಣ್ಣೀರು ಒರೆಸುವ ಮಾತೃಹೃದಯಿ ಕಾಂಗ್ರೆಸ್‌ ಪಕ್ಷ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Mar 30, 2024, 12:52 AM IST
ಚಿತ್ರ 29ಬಿಡಿಆರ್‌3ಬೀದರ್‌ ಲೋಕಸಭಾ ಚುನಾವಣೆ ನಿಮಿತ್ತ ನಗರದ ಕುಂಬಾರವಾಡಾದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. | Kannada Prabha

ಸಾರಾಂಶ

ಬಡವರ, ಕೂಲಿ ಕಾರ್ಮಿಕರ, ರೈತರ, ಯುವಕರ ಹೀಗೆ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಲು ಕಾಂಗ್ರೆಸ್‌ ಸಂಕಲ್ಪ ತೊಟ್ಟಿದೆ ಸಚಿವರ ಅಭಿಮತ

ಕನ್ನಡಪ್ರಭ ವಾರ್ತೆ ಬೀದರ್‌ಹತ್ತು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಜನ ಸಾಮಾನ್ಯರ ಅಭ್ಯುದಯಕ್ಕೆ ಏನೇನು ಮಾಡಿದೆ ಎಂದು ಪ್ರಶ್ನಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬಡವರ ಕಣ್ಣೀರು ಒರೆಸುವ ಮಾತೃಹೃದಯ ಕಾಂಗ್ರೆಸ್‌ ಪಕ್ಷಕ್ಕಿದೆ ಎಂದು ಹೇಳಿದರು.

ಅವರು ಲೋಕಸಭಾ ಚುನಾವಣೆ ನಿಮಿತ್ತ ನಗರದ ಕುಂಬಾರವಾಡಾದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಡವರ, ಕೂಲಿ ಕಾರ್ಮಿಕರ, ರೈತರ, ಯುವಕರ ಹೀಗೆ ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸಲು ಕಾಂಗ್ರೆಸ್‌ ಸಂಕಲ್ಪ ತೊಟ್ಟಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಬಡವರಿಗಾಗಿ, ಬಡ ಮಹಿಳೆಯರಿಗಾಗಿ, ವಿದ್ಯಾವಂತ ಯುವಕರಿಗಾಗಿ ಯಾಕೆ ಕಾರ್ಯಕ್ರಮ ರೂಪಿಸಲಿಲ್ಲ ಎಂದು ಪ್ರಶ್ನಿಸಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ನೀಡಿದ್ದ ಐದೂ ಭರವಸೆಗಳನ್ನು 10 ತಿಂಗಳ ಅವಧಿಯಲ್ಲಿಯೇ ಜಾರಿಗೊಳಿಸಲಾಗಿದೆ. ಬಡತನ ರೇಖೆ ಕೆಳಗಿನ ಜನರನ್ನು ಆರ್ಥಿಕವಾಗಿ ಸಶಕ್ತಗೊಳಿಸುವುದು ಗ್ಯಾರಂಟಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕೋವಿಡ್ ಕಾಲದಲ್ಲಿ ಬಿಜೆಪಿ ಸಂಸದ ಭಗವಂತ ಖೂಬಾ ಮೌನದ ಮೊರೆ ಹೋಗಿದ್ದರು. ಆದರೆ, ಸಾಗರ ಖಂಡ್ರೆ ಜನರ ಕಷ್ಟ ಕಡಿಮೆ ಮಾಡಲು ಶ್ರಮಿಸಿದ್ದರು. ಆಹಾರದ ಕಿಟ್‌ ವಿತರಿಸಿದ್ದರು. ಜನರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಔಷಧೋಪಾಚಾರದ ವ್ಯವಸ್ಥೆ ಮಾಡಿದ್ದರು. ಜನರ ಮಧ್ಯೆ ಇದ್ದು ಕೆಲಸ ಮಾಡುವ ಸಾಗರ ಖಂಡ್ರೆ ಬೇಕೋ, ಜನ ಕಣ್ಣೀರು ಹಾಕುತ್ತಿದ್ದಾಗ ಮೌನದ ಮೊರೆ ಹೋಗುವ ಭಗವಂತ ಖೂಬಾ ಬೇಕೋ ಎನ್ನುವುದನ್ನು ನೀವೇ ತೀರ್ಮಾನಿಸಿ ಎಂದು ಕರೆ ನೀಡಿದರು.

ಪೌರಾಡಳಿತ ಸಚಿವ ರಹೀಮ್‌ ಖಾನ್, ಬುಡಾ ಅದ್ಯಕ್ಷ ಬಸವರಾಜ ಜಾಬಶೆಟ್ಟಿ, ಬಡಾವಣೆಯ ಪ್ರಮುಖರಾದ ವಿಜಯಕುಮಾರ ಪಾಟೀಲ್‌, ಮಡಿವಾಳಪ್ಪ ಮಂಗಲಗಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪಕ್ಷದ ಪದಾಧಿಕಾರಿಗಳು, ಬಡಾವಣೆಯ ಹಿರಿಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ