ಹಿಂದೂ ಪರಂಪರೆ ಉಳವಿಗೆ ಮಾತೃ ಶಕ್ತಿ ಕೊಡುಗೆ ಅಪಾರ: ಸತ್ಯನಾರಾಯಣ

KannadaprabhaNewsNetwork |  
Published : Sep 05, 2024, 12:38 AM IST
೩ಕೆಎನ್‌ಕೆ-೨                                      ವಿಶ್ವ ಹಿಂದೂ ಪರಿಷತ್‌ಗೆ ೬೦ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕನಕಗಿರಿಯಲ್ಲಿ ನಡೆದ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕರ‍್ಯಕಾರಣಿ ಸದಸ್ಯ ಸತ್ಯನಾರಾಯಣ ಮಾತನಾಡಿದರು.  | Kannada Prabha

ಸಾರಾಂಶ

ಹಿಂದೂ ಸಂಸ್ಕೃತಿ, ಪರಂಪರೆ ಉಳಿವಿಗೆ ಮಾತೃ ಶಕ್ತಿ ಕೊಡುಗೆ ಅಪಾರವಾಗಿದೆ.

ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಕಾರ್ಯಕಾರಿಣಿ ಸದಸ್ಯ

ಕನ್ನಡಪ್ರಭ ವಾರ್ತೆ ಕನಕಗಿರಿ

ಹಿಂದೂ ಸಂಸ್ಕೃತಿ, ಪರಂಪರೆ ಉಳಿವಿಗೆ ಮಾತೃ ಶಕ್ತಿ ಕೊಡುಗೆ ಅಪಾರ ಎಂದು ಆರ್‌ಎಸ್‌ಎಸ್‌ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಹೇಳಿದರು.

ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದ ಯಾತ್ರಿನಿವಾಸದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿಂದೂ ಪರಿಷತ್‌ಗೆ ೬೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಸಮಾಜ ಮಾತೃಶಕ್ತಿಯಿಂದಲೇ ಸಂರಕ್ಷಣೆಯಾಗಿದೆ. ಈಗಲೂ ಧರ್ಮ, ಸಂಸ್ಕೃತಿ, ಪರಂಪರೆ ನಮ್ಮ ತಾಯಂದಿರಿಂದ ಬೆಳಗುತ್ತಿದೆ. ಧರ್ಮದ ಉಳವಿಗೆ ಮಾತೃ ತನ್ನ ಮಕ್ಕಳನ್ನು ಜಾಗೃತಗೊಳಿಸುವ ಕೆಲಸ ಮಾಡುವ ಅನಿವಾರ್ಯವಿದೆ ಎಂದರು.

ಅಲ್ಲದೇ ವಿಶ್ವ ಹಿಂದೂ ಪರಿಷತ್‌ಗೆ ೬೦ ವರ್ಷ ಪೂರೈಸಿದ್ದು, ದೇಶಾದ್ಯಂತಹ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ಹಿಂದೂ ಧರ್ಮ, ಸಂಸ್ಕೃತಿ, ಸನಾತನವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂತಹ ಸಂದರ್ಭದಲ್ಲಿ ವಿಎಚ್‌ಪಿ ಸಂಘಟನೆಗೆ ಯುವಕರು ಇನ್ನಷ್ಟು ಶಕ್ತಿ ತುಂಬುವ ಮೂಲಕ ಹಿಂದುತ್ವದ ಸೇವೆಗೈಯಲು ಕೈಜೋಡಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್‌ಎಸ್‌ಎಸ್ ಮುಖಂಡ ಹನುಮಂತರೆಡ್ಡಿ ಮಹಲಿನಮನಿ ಮಾತನಾಡಿ, ಹಿಂದೂ ಧರ್ಮದ ಉಳವಿಗೆ ಹೋರಾಟ ಅನಿವಾರ್ಯ. ಹಿಂದುತ್ವ ಹತ್ತಿಕ್ಕುವ ಹುನ್ನಾರ ಕೆಲ ರಾಜಕೀಯ ಪಕ್ಷಗಳಿಂದ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಹಿಂದೂಗಳು ತಕ್ಕಪಾಠ ಕಲಿಸುತ್ತಾರೆ. ವಿಎಚ್‌ಪಿ ಯುವಕರಿಗೆ ಕ್ಷಾತ್ರ ತೇಜಸ್ಸು ನೀಡುತ್ತಿದ್ದು, ದೇಶ, ಧರ್ಮದ ಸಂರಕ್ಷಣೆಗೆ ಸಂಕಲ್ಪ ತೊಡುವ ಕಾರ್ಯಕ್ಕೆ ಯುವಕರು ಸಕ್ರೀಯೆವಾಗಿ ಭಾಗವಹಿಸುವಂತೆ ತಿಳಿಸಿದರು.ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಯ ಅಯ್ಯನಗೌಡ ಅಳ್ಳಳ್ಳಿ, ಮುಖಂಡರಾದ ವಿಠ್ಠಲ ನಾವಡೆ, ವೆಂಕಟೇಶ ಬಂಡ್ಲಿ, ಸಿಂಧು ಬಲ್ಲಾಳ, ಶ್ರೀನಿವಾಸ ಅಂಬಿಗ, ಸಂಪತ್ ಹೋಟೆಲ್, ಹನುಮೇಶ ಡಿಶ್, ರಾಮು, ಪೃಥ್ವಿ ಮ್ಯಾಗೇರಿ, ಕಿರಣಕುಮಾರ ಗಂಗಾಮತ ಸೇರಿದಂತೆ ಇತರರು ಇದ್ದರು.

ಪ್ರತಿ ಮನೆ-ಮನೆಯಲ್ಲಿ ವಿಶ್ವ ಹಿಂದೂ ಪರಿಷತ್ತಿಗೆ ಕಾರ್ಯಕರ್ತನಾಗುವ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಬೇಕು. ಧರ್ಮ, ದೇಶದ ಉಳಿವಿಗೆ ವಿಎಚ್‌ಪಿಯಂತಹ ಸಂಘಟನೆಗಳ ಅಗತ್ಯವಿದೆ. ಸಂಘಟನೆಯಿಂದ ಇನ್ನಷ್ಟು ಧರ್ಮ ಕಾರ್ಯಗಳು ನಡೆಯಲಿದೆ ಎಂದು

ಹಾಲಪ್ಪಯ್ಯನಮಠದ ಅರ್ಚಕ ಸೋಮಶೇಖರಯ್ಯಸ್ವಾಮಿ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ