ಮಗುವಿನ ಅರಿವಿನ ಬೆಳವಣಿಗೆಗೆ ಮಾತೃಭಾಷೆ ಪೂರಕ: ಡಾ.ಮೈಮುದಾ ಬೇಗಂ

KannadaprabhaNewsNetwork |  
Published : Feb 06, 2026, 02:45 AM IST
ಬಳ್ಳಾರಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಕಾರ್ಯಕ್ರಮಕ್ಕೆ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೈಮುದಾ ಬೇಗಂ  ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಮಗುವಿನ ಅರಿವಿನ ಬೆಳವಣಿಗೆ ಆಗುವುದೇ ಮಾತೃಭಾಷೆಯಿಂದ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ.

ಬಳ್ಳಾರಿ:

ಮಾತೃ ಭಾಷೆಯ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ತಾಯಂದಿರ ಪಾತ್ರ ಮಹತ್ವದ್ದಾಗಿದೆ ಎಂದು ಮಹಮ್ಮದೀಯ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೈಮುದಾ ಬೇಗಂ ನುಡಿದರು.

ಅಖಂಡ ಬಳ್ಳಾರಿ ಜಿಲ್ಲಾ ಕಸಾಪ ವತಿಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಮತ್ತು ವಡ್ಡಿನಶೆಟ್ರ ಸಿದ್ದರಾಮಯ್ಯ ಮತ್ತು ಶ್ರೀಮತಿ ಮಹಾಂತಮ್ಮ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾತೃಭಾಷೆಯು ಬರೀ ಒಂದು ಭಾಷೆಯಷ್ಟೇ ಆಗಿರದೆ ಪ್ರತಿಯೊಂದು ವ್ಯಕ್ತಿಯ ಸಾಂಸ್ಕೃತಿಕ ಸಾಮಾಜಿಕ ವ್ಯಕ್ತಿತ್ವದೊಂದಿಗೆ ಬೆರೆತು ಹೋಗಿರುತ್ತದೆ. ಮಗುವಿನ ಅರಿವಿನ ಬೆಳವಣಿಗೆ ಆಗುವುದೇ ಮಾತೃಭಾಷೆಯಿಂದ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ವಿಮರ್ಶಾತ್ಮಕ ಚಿಂತನೆಗಳು ಹಾಗೂ ಕೌಶಲ್ಯಗಳು ಬೆಳೆಯಲು ಸಹ ಹೆಚ್ಚು ಸಹಕಾರಿಯಾಗಿದೆ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ತಾಯಂದಿರು ಮಕ್ಕಳಿಗೆ ಮಾತೃ ಭಾಷೆಯಲ್ಲಿ ಸಂವಹನ ಮಾಡುವ ಮೂಲಕ ಭಾಷೆಯ ಬೆಳವಣಿಗೆಯ ಹೊಣೆ ಹೊತ್ತುಕೊಳ್ಳಬೇಕು ಎಂದರು.

ಮೇಧಾ ಪದವಿ ಕಾಲೇಜಿನ ಉಪನ್ಯಾಸಕಿ ಡಾ.‌ ವೈ.‌ಸುಮಾ ಅವರು ಮಾತೃ ಭಾಷೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು.ಪ್ರತಿ ಮಗುವಿನ ಸೃಜನಶೀಲತೆ ರೂಪುಗೊಳ್ಳುವುದೇ ಮಾತೃಭಾಷೆಯಿಂದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಭಾವನೆಗಳು ಹಾಗೂ ಆಲೋಚನೆಗಳು ಸ್ಪಷ್ಟವಾಗಿ ವ್ಯಕ್ತಪಡಿಸಲು ತಾಯಿಭಾಷೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಲೇಖಾ ಬಿ., ಹಾಗೂ ದತ್ತಿದಾನಿ ಡಾ. ವಿ.ಎಸ್. ಪ್ರಭಯ್ಯ ಅವರು ಮಾತನಾಡಿದರು.

ಅಲ್ಲಂ ಸುಮಂಗಳಮ್ಮ ಪದವಿ ಮಹಾ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಚ್ ಸುರೇಶ್, ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಸನ್ಮಾರ್ಗ ಗೆಳೆಯರ ಬಳಗದ ಮುಖ್ಯಸ್ಥ ಕಪ್ಪಗಲ್ಲು ಬಿ. ಚಂದ್ರಶೇಖರ ಆಚಾರ್, ಮೆಹತಾಬ್, ಎಚ್. ಕಾಶೀನಾಥ್, ಮಂಜುನಾಥ ರೆಡ್ಡಿ, ರಾಘವೇಂದ್ರ, ಯು.ಶ್ರೀನಿವಾಸಮೂರ್ತಿ ಮತ್ತಿತರರಿದ್ದರು. ವೀರಶೈವ ಕಾಲೇಜಿನ ಅಧ್ಯಾಪಕಿ ಡಾ. ಭ್ರಮರಾಂಭ ಯಾಟಿ ಅವರನ್ನು ಸನ್ಮಾನಿಸಲಾಯಿತು. ಕೋಶಾಧ್ಯಕ್ಷ ಬಸವರಾಜ ಗದಗಿನ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜ್ಯೋತಿ, ಚಾಂದ್ ಪಾಷಾ ಹಾಗೂ ಡಾ.‌ ಎ.ಎನ್. ಸಿದ್ಧೇಶ್ವರಿ‌ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌