ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಮಹಾಸ್ವಾಮಿಗಳುಕನ್ನಡಪ್ರಭ ವಾರ್ತೆ ಯಲ್ಲಾಪುರ
ಪಟ್ಟಣದ ಕಾಳಮ್ಮನಗರದಲ್ಲಿ ನೂತನ ಹವ್ಯಕ ಭವನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ, ಗೋಪೂಜೆ, ಹವ್ಯಕ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ಹವ್ಯ-ಕವ್ಯದ ಮಹತ್ವವನ್ನು ಅರಿತು ಹವ್ಯಕರು ಹವ್ಯಕರಾಗಿಯೇ ಉಳಿಯುವ ಅಗತ್ಯವಿದೆ. ಅದಕ್ಕೆ ನಿರಂತರವಾದ ಅನುಷ್ಠಾನ, ಧರ್ಮಾಚರಣೆ ಮಾಡಬೇಕು. ಹವ್ಯಕರು ತಮ್ಮ ಸಂಸ್ಕಾರವನ್ನು ಉಳಿಸಿಕೊಂಡಾಗ ಮಾತ್ರ ಉತ್ತಮ ಸಮಾಜ, ರಾಷ್ಟ್ರ ಒಳಿತಿಗೆ ಕಾರಣವಾಗುತ್ತದೆ. ಹವ್ಯಕರ ಬುದ್ಧಿವಂತಿಕೆಯನ್ನು ಕೇವಲ ಟೀಕೆ, ಟಿಪ್ಪಣೆಯಲ್ಲಿ ಕಳೆಯದೇ ಎಲ್ಲರೂ ಕೈಜೋಡಿಸಬೇಕು.ಹಳ್ಳಿಯಲ್ಲಿ ಮಾತ್ರ ಸರಿಯಾದ ಸಂಸ್ಕಾರದ ನೆಲೆ ಸಾಧ್ಯ. ಹವ್ಯಕರು ತಮ್ಮ ಕೃಷಿ ಭೂಮಿಯನ್ನು ಯಾರಿಗೋ ಮಾರಾಟ ಮಾಡಿ ನಗರದತ್ತ ವಾಲುವುದು ಸಲ್ಲ. ಅನಗತ್ಯವಾಗಿ ಕೃಷಿಯ ನೆಲೆಯನ್ನು ಕಳೆದುಕೊಳ್ಳಬಾರದು. ಇಂದು ಹವ್ಯಕರು ನಮ್ಮ ಪರಂಪರೆ, ಮೌಲ್ಯದಿಂದ ದೂರವಾಗುತ್ತಿದ್ದಾರೆ. ಬಹುತೇಕ ಹವ್ಯಕರು ದೇವ, ಋಷಿ, ಪಿತೃ ತರ್ಪಣ ನೀಡುವುದನ್ನು ಬಿಟ್ಟಿದ್ದಾರೆ. ಅಲ್ಲದೇ, ಕಲ್ಯಾಣ ಮಂಟಪದಲ್ಲಿ ನಡೆಯುವ ವಿವಾಹ, ಉಪನಯನ, ಅಶಾಸ್ತ್ರೀಯವಾಗಿ ನಡೆಯುತ್ತಿದೆ. ಅದು ಇಲ್ಲಿಂದಲೇ ಶಾಸ್ತ್ರೋಕ್ತವಾಗಿ ನಡೆಸುವಂತೆ ಸಂಕಲ್ಪ ಮಾಡಿ. ಬ್ರಾಹ್ಮಣರಿರುವುದು ದೇಶಕ್ಕಾಗಿ, ಅದನ್ನು ಅರ್ಥ ಮಾಡಿಕೊಂಡು ಸಂಸ್ಕಾರವಂತರಾಗಿ ಮುನ್ನಡೆಯಬೇಕು ಎಂದರು.
ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಎಲ್ಲರೂ ಒಂದಾಗಿ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದರು.
ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿ, ವಿದ್ವಾನ್ ತಿಮ್ಮಣ್ಣ ಭಟ್ಟ ಬಾಲೀಗದ್ದೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವೇ.ಮೂ. ಮಂಜುನಾಥ ಭಟ್ಟ ಮತ್ತು ನಾರಾಯಣ ಭಟ್ಟರ ನೇತೃತ್ವದಲ್ಲಿ ೭೦ಕ್ಕೂ ಹೆಚ್ಚು ಪುರೋಹಿತರು ವಿವಿಧ ಧಾರ್ಮಿಕ ಕಾರ್ಯಕ್ರಮ, ಹೋಮ-ಹವನಾದಿ, ಜಪತಪ ನಡೆಸಿದರು. ಮಾತೆಯರು ಭಗವದ್ಗೀತೆ, ರಾಮತಾರಕ ಜಪ, ಶಾಂಕರ ಸ್ತೋತ್ರ ಮೊದಲಾದವುಗಳು ಪಾರಾಯಣ ನಡೆಸಿಕೊಟ್ಟರು. ಈ ಸಮಾವೇಶದಲ್ಲಿ ೫೦೦೦ಕ್ಕೂ ಹೆಚ್ಚಿನ ಹವ್ಯಕರು ಭಾಗವಹಿಸಿದ್ದರು.