ಮೂಲ್ಕಿ ತಾಲೂಕಿನ ಕೊಲ್ಲೂರು ಪದವು ಎಂಬಲ್ಲಿ ಕೊರಗ ಜನಾಂಗಕ್ಕೆ ಜಾಗ ಗುರುತಿಸಲಾಗಿದ್ದು, ಸುಮಾರು 8 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 21 ಮಂದಿ ಫಲಾನುಭವಿಗಳಿಗೆ ಕೂಡಲೇ ಕಲ್ಲಮುಂಡ್ಕೂರಿನಲ್ಲಿ ಜಾಗ ಗುರುತಿಸಿ ಹಕ್ಕುಪತ್ರ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಮಾಜದ ಅಶಕ್ತ, ಬಡ, ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೂಲ್ಕಿ ತಾಲೂಕು ವ್ಯಾಪ್ತಿಯ ಕೊರಗ ಜನಾಂಗದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಮೂಲ್ಕಿ ತಾಲೂಕಿನ ಕೊಲ್ಲೂರು ಪದವು ಎಂಬಲ್ಲಿ ಕೊರಗ ಜನಾಂಗಕ್ಕೆ ಜಾಗ ಗುರುತಿಸಲಾಗಿದ್ದು, ಸುಮಾರು 8 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 21 ಮಂದಿ ಫಲಾನುಭವಿಗಳಿಗೆ ಕೂಡಲೇ ಕಲ್ಲಮುಂಡ್ಕೂರಿನಲ್ಲಿ ಜಾಗ ಗುರುತಿಸಿ ಹಕ್ಕುಪತ್ರ ನೀಡಲಾಗುವುದು. ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವುದೇ ಮೂಲ ಉದ್ದೇಶವಾಗಿದ್ದು ಕೂಡಲೇ ಅವರಿಗೆ ಸೂರು ಕಲ್ಪಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರಗ ಅಭಿವೃದ್ಧಿ ಸಂಘ ಒಕ್ಕೂಟದ ಕರ್ನಾಟಕ ಕೇರಳ ವಿಭಾಗದ ಅಧ್ಯಕ್ಷೆ ಸುಶೀಲಾ ಮಾತನಾಡಿ, ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಸುನಿಲ್ ಆಳ್ವ, ಮೂಲ್ಕಿ ತಹಸೀಲ್ದಾರ್ ಶ್ರೀಧರ್ ಎಸ್., ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಅಧಿಕಾರಿ ಮೋಹನ್, ಗ್ರಾಮ ಲೆಕ್ಕಿಗ ಸುಜಿತ್, ಐಟಿಡಿಪಿ ಯೋಜನೆ ಸಮನ್ವಯ ಅಧಿಕಾರಿ ಬಸವರಾಜ, ಸಹಾಯಕ ನಿರ್ದೇಶಕ ಸುರೇಶ್, ತನಿಖಾಧಿಕಾರಿ ನಿಂಗರಾಜು, ಕೊರಗ ಅಭಿವೃದ್ಧಿ ಸಂಘದ ಕೋ ಆರ್ಡಿನೇಟರ್ ಕೆ. ಪುತ್ರನ್, ಮೂಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.