ಮಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನೇರ ಸಂಚಾರ : 12 ಗಂಟೆಗಳಲ್ಲಿ ಗಮ್ಯ ತಲುಪಲು ಸಾಧ್ಯ!

KannadaprabhaNewsNetwork |  
Published : Mar 28, 2025, 12:35 AM ISTUpdated : Mar 28, 2025, 03:59 AM IST
ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು | Kannada Prabha

ಸಾರಾಂಶ

ಪ್ರಸ್ತುತ ಮುಂಬೈ-ಗೋವಾ ಮತ್ತು ಮಂಗಳೂರು-ಗೋವಾ ಮಾರ್ಗಗಳನ್ನು ಸಂಯೋಜಿಸಿ ಮುಂಬೈನಿಂದ ಮಂಗಳೂರಿಗೆ ನೇರವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಏರ್ಪಡಿಸುವ ಬಗ್ಗೆ ಭಾರತೀಯ ರೈಲ್ವೆ ಚಿಂತನೆ ನಡೆಸುತ್ತಿದೆ. 

 ಮಂಗಳೂರು :  ಪ್ರಸ್ತುತ ಮುಂಬೈ-ಗೋವಾ ಮತ್ತು ಮಂಗಳೂರು-ಗೋವಾ ಮಾರ್ಗಗಳನ್ನು ಸಂಯೋಜಿಸಿ ಮುಂಬೈನಿಂದ ಮಂಗಳೂರಿಗೆ ನೇರವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಏರ್ಪಡಿಸುವ ಬಗ್ಗೆ ಭಾರತೀಯ ರೈಲ್ವೆ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಎರಡೂ ರೈಲುಗಳು ಸರಾಸರಿ 70 ಪ್ರತಿ ಶತದಷ್ಟು ಪ್ರಯಾಣಿಕರೊಂದಿಗೆ ಕಾರ್ಯನಿರ್ವಹಿಸುತ್ತಿವೆ. 

ಹೊಸ ಸೇವೆಯು ದಕ್ಷತೆಯನ್ನು ಸುಧಾರಿಸುವ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಪ್ರಯಾಣಿಕರು ಮುಂಬೈನಿಂದ ಮಂಗಳೂರಿಗೆ ಸುಮಾರು 12 ಗಂಟೆಗಳಲ್ಲಿ ತಲುಪಬಹುದು.ಮಂಗಳೂರು-ಗೋವಾ ವಂದೇ ಭಾರತ್ ಮಾರ್ಗ ಅತಿ ಕಡಿಮೆ ಜನದಟ್ಟಣೆ ಹೊಂದಿರುವ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರಸಕ್ತ ಪ್ರಯಾಣಿಕರ ಸಂಖ್ಯೆ ಶೇಕಡಾ 40 ಕ್ಕಿಂತ ಕಡಿಮೆ ಇದೆ. ಈ ಕೊರತೆ ನೀಗಿಸಲು ಆರಂಭದಲ್ಲಿ ಕೇರಳದ ಕೋಝಿಕ್ಕೋಡ್‌ಗೆ ವಂದೇ ಭಾರತ್‌ ರೈಲು ಸಂಚಾರ ವಿಸ್ತರಿಸುವ ಪ್ರಸ್ತಾಪವನ್ನು ಮಾಡಿತ್ತು. ಆಗ ಕರ್ನಾಟಕದ ರಾಜಕೀಯ ನಾಯಕರ ವಿರೋಧದಿಂದಾಗಿ ಈ ಯೋಜನೆಯನ್ನು ಕೈಬಿಡಲಾಯಿತು.  

ಪ್ರಸ್ತುತ ಮಂಗಳೂರು-ಗೋವಾ ವಂದೇ ಭಾರತ್ ತನ್ನ ಪ್ರಯಾಣವನ್ನು ಸುಮಾರು ನಾಲ್ಕೂವರೆ ಗಂಟೆಗಳಲ್ಲಿ ಪೂರ್ಣಗೊಳಿಸುತ್ತಿದೆ.ಆರಂಭದಲ್ಲಿ ಮುಂಬೈ-ಗೋವಾ ವಂದೇ ಭಾರತ್ ಸುಮಾರು ಶೇಕಡಾ 90 ರಷ್ಟು ಹೆಚ್ಚಿನ ಪ್ರಯಾಣಿಕರ ದಟ್ಟಣೆ ದರವನ್ನು ಹೊಂದಿತ್ತು. ಆದರೆ ನಂತರ ಇದು ಸರಿಸುಮಾರು ಶೇಕಡಾ 70 ಕ್ಕೆ ಇಳಿಕೆಯಾಗಿದೆ. ಮುಂಬೈ-ಗೋವಾ ಮತ್ತು ಮಂಗಳೂರು-ಗೋವಾ ವಂದೇ ಭಾರತ್‌ ಸಂಚಾರವನ್ನು ಮುಂಬೈ-ಮಂಗಳೂರು ಮಾರ್ಗವಾಗಿ ವಿಲೀನಗೊಳಿಸುವುದರಿಂದ ಪೂರ್ಣ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎನ್ನುವುದು ರೈಲ್ವೆ ಇಲಾಖೆಯ ಲೆಕ್ಕಾಚಾರ.

ಹಾಲಿ ಮುಂಬೈ-ಗೋವಾ ವಂದೇ ಭಾರತ್ ರೈಲು ಮುಂಬೈನಿಂದ ಬೆಳಗ್ಗೆ 5.25 ಕ್ಕೆ ಹೊರಟು ಮಧ್ಯಾಹ್ನ 1.10 ಕ್ಕೆ ಗೋವಾ ತಲುಪುತ್ತದೆ. ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ಅದು ಗೋವಾದಿಂದ ಮಂಗಳೂರಿಗೆ ಮುಂದುವರಿಯಲಿದೆ. ಸಂಜೆ 6.00 ಗಂಟೆಗೆ ಮಂಗಳೂರು ತಲುಪಲಿದೆ. ಅದೇ ರೀತಿ, ಮಂಗಳೂರು-ಗೋವಾ ವಂದೇ ಭಾರತ್ ರೈಲು ಬೆಳಗ್ಗೆ 8.30 ಕ್ಕೆ ಮಂಗಳೂರಿಂದ ಹೊರಟು ಮಧ್ಯಾಹ್ನ 1.10 ಕ್ಕೆ ಗೋವಾ ತಲುಪುತ್ತದೆ. ರೈಲು ಮುಂಬೈಗೆ ಮುಂದುವರಿದರೆ, ರಾತ್ರಿ 9.00 ಗಂಟೆಗೆ ಮುಂಬೈ ತಲುಪುವ ನಿರೀಕ್ಷೆ ಇದೆ.

ಆದಾಗ್ಯೂ ಈ ಸಮಯದಲ್ಲಿ ಮುಂಬೈನ ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳ ದಟ್ಟಣೆಯ ಸವಾಲನ್ನು ಒಡ್ಡಬಹುದು.

ಹಲವಾರು ದೂರದ ರೈಲುಗಳು ರಾತ್ರಿ 9.00 ಗಂಟೆಯ ಸುಮಾರಿಗೆ ಮುಂಬೈಗೆ ಆಗಮಿಸುವುದರಿಂದ, ಮುಂಬೈ-ಮಂಗಳೂರು ವಂದೇ ಭಾರತ್ ವೇಳಾಪಟ್ಟಿಯಲ್ಲಿ ಹೊಂದಾಣಿಕೆಗಳು ಅಗತ್ಯವಾಗಬಹುದು ಎಂದು ಕೇಂದ್ರ ರೈಲ್ವೆ ಅಭಿಪ್ರಾಯಪಟ್ಟಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ
ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ