ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಸಾಧನೆ ಮಾದರಿ: ಅಂದಾನಪ್ಪ ವಿಭೂತಿ

KannadaprabhaNewsNetwork |  
Published : May 05, 2026, 02:30 AM IST
ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿಯವರ 86ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ಗುರುವಂದನೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಬಸವಣ್ಮನವರು ೧೨ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಸಾಮಾಜಿಕ ಸುಧಾರಕ ಮತ್ತು ಶಿವ ಕೇಂದ್ರೀಕೃತ ಭಕ್ತ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು.

ಮುಂಡರಗಿ: ಡಾ. ಅನ್ನದಾನೀಶ್ವರ ಸ್ವಾಮೀಜಿಯವರು ಆಡಂಬರ, ಬಿಗುವು- ಬಿನ್ನಾಣವಿಲ್ಲದ ಜೀವನ ಇತರರಿಗೆ ಮಾದರಿಯಾಗಿದೆ. ನಯಾಪೈಸೆ ಕೊಡಬೇಕಾದರೂ, ಇತರರಿಂದ ಬರಬೇಕಾದರೂ ಅದನ್ನು ಲೆಕ್ಕ ಇಡುವ ಮತ್ತು ಕೇಳುವ ಪ್ರವೃತ್ತಿಯನ್ನು ಅವರಿಂದ ಕಲಿಯಬೇಕು ಎಂದು ಪತ್ರಕರ್ತ ಅಂದಾನಪ್ಪ ವಿಭೂತಿ ತಿಳಿಸಿದರು.

ಪಟ್ಟಣದ ಅನ್ನದಾನೀಶ್ವರ ಮಠದ ಶಿಲಾಮಂಟಪದಲ್ಲಿ ಸೋಮವಾರ ಜರುಗಿದ 893ನೇ ಬಸವ ಜಯಂತಿ, ಡಾ. ಅನ್ನದಾನೀಶ್ವರ ಸ್ವಾಮೀಜಿಯವರ 86ನೇ ಜನ್ಮದಿನೋತ್ಸವದ ಸಂಭ್ರಮಾಚರಣೆ ಹಾಗೂ 1946ನೇ ಶಿವಾನುಭವ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಜೀವನ ಹಾಗೂ ಸಾಹಿತ್ಯ ಕುರಿತು ಮಾತನಾಡಿದರು.

ಕರ್ನಾಟಕದ ಮಠಮಾನ್ಯಗಳಲ್ಲಿಯೇ ಆಚಾರ- ವಿಚಾರ ಶುದ್ಧವಾಗಿದ್ದು, ತ್ರಿಕಾಲ ಪೂಜಾನಿಷ್ಠರಾಗಿ, ಸಾಹಿತಿಗಳಾಗಿ, ಉತ್ತಮ ಆಡಳಿತಗಾರರಾಗಿ, ತಮ್ಮ ಮಠದ ಇತಿಹಾಸವನ್ನು ಅರಿತವರಾಗಿ ಭಕ್ತರ ಮನದಲ್ಲಿ ಉಳಿದುಕೊಂಡವರೆಂದರೆ ಅದು ಅನ್ನದಾನೀಶ್ವರ ಸ್ವಾಮೀಜಿಯವರು. ಅವರ ಜೀವನ ಇತರರಿಗೆ ಅನುಕರಣೀಯ ಎಂದರು.

ಬರದ ನಾಡಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಶಾಲಾ- ಕಾಲೇಜುಗಳನ್ನು ಪ್ರಾರಂಭಿಸಿ ಲಕ್ಷಾಂತರ ಬಡ ಮಕ್ಕಳಿಗೆ ದಾರಿದೀಪವಾಗಿದ್ದಾರೆ. ಅವರು 170ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಶ್ರೀಗಳ ಕೃತಿಗಳ ಮೇಲೆ 4 ಜನರು ಪಿಎಚ್‌ಡಿ ಮತ್ತು 4 ಜನರು ಎಂಪಿಲ್ ಪದವಿ ಪಡೆದಿದ್ದಾರೆ ಎಂದರು.

ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಬಸವಣ್ಮನವರು ೧೨ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಸಾಮಾಜಿಕ ಸುಧಾರಕ ಮತ್ತು ಶಿವ ಕೇಂದ್ರೀಕೃತ ಭಕ್ತ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಆಚರಿಸುವುದರ ಮೂಲಕ ಬಸವಣ್ಣ ಮಾದರಿಯಾದರು ಎಂದರು.

ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಚನ್ನಮಲ್ಲ ಸ್ವಾಮೀಜಿ, ಇಮ್ಮಡಿ ನಿಜಗುಣ ಸ್ವಾಮೀಜಿ, ಅಭಿನವ ಚೆನ್ನಬಸವ ಸ್ವಾಮೀಜಿ, ಡಾ. ಮಹಾದೇವ ಸ್ವಾಮೀಜಿ, ಶಾಂತಲಿಂಗೇಶ್ವರ ಸ್ವಾಮೀಜಿ, ಹೊಳಲಿನ ಚೆನ್ನಬಸವ ದೇವರು ನೇತೃತ್ವ ವಹಿಸಿ ಪೂಜ್ಯರಿಗೆ ಪುಷ್ಪವೃಷ್ಟಿಯೊಂದಿಗೆ ಗುರುವಂದನೆ ಸಲ್ಲಿಸಿದರು. ಹೂವಿನಶಿಗ್ಲಿಯ ಚೆನ್ನವೀರ ಸ್ವಾಮೀಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಇಒ ಗಂಗಾಧರ ಅಣ್ಣಿಗೇರಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಜಾಫರ ಬಚ್ಚೇರಿ, ಮನೋಹರ, ಹನುಮರಡ್ಡಿ ಇಟಗಿ ಅವರಿಗೆ ಗುರುರಕ್ಷೆ ಜರಗಿತು. ಸನ್ಮಾನಿತರ ಪರವಾಗಿ ಬಿಇಒ ಗಂಗಾಧರ ಅಣ್ಣಿಗೇರಿ ಮಾತನಾಡಿದರು. ಶ್ರೀಗಳ 86ನೇ ಜನ್ಮದಿನೋತ್ಸವದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಗದಗ ಬಸವೇಶ್ವರ ರಕ್ತ ಭಂಡಾರದ ಸಹಯೋಗದಲ್ಲಿ ರಕ್ತದಾನ ಶಿಬಿರ, ಶ್ರೀ ಜ.ಅ.ಅಕ್ಕನ ಬಳಗದ ತಾಯಂದಿಂರಿಂದ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಸಿ ನೆಡುವ ಕಾರ್ಯಕ್ರಮಗಳು ಜರುಗಿದವು.

ಬಸವರಾಜ ಸಿದ್ದಣ್ಣವರ ಮತ್ತು ಶ್ರೀ.ಜ.ಅ. ಅಕ್ಕನ ಬಳಗದವರಿಂದ ಸಂಗೀತ ಸೇವೆ ಜರುಗಿತು. ಖುಷಿ ಮುರಡಿ ಭರತನಾಟ್ಯ ಪ್ರದರ್ಶಿಸಿದರು. ಗದಗಯ್ಯ ಗುರುಸ್ವಾಮಿಮಠ ಕಾರ್ಯಕ್ರಮದ ಭಕ್ತಿಸೇವೆ ವಹಿಸಿಕೊಂಡಿದ್ದರು. ಎಸ್.ಆರ್. ರಿತ್ತಿ ಮತ್ತು ಎಸ್.ಎಸ್. ಮಠದ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ, ಮಂಗಳಸೂತ್ರ ತೆಗಿಸುವುದು ನಿಲ್ಲಲಿ
ಫಸಲ್ ಬಿಮಾ ಯೋಜನೆಯಲ್ಲಿ ಭಾರೀ ಅಕ್ರಮ: ಆರೋಪ