ಹರಿಹರ ನಗರ ಸ್ವಚ್ಛತೆಗೆ ಚುರುಕು ಮುಟ್ಟಿಸಿದ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ

KannadaprabhaNewsNetwork |  
Published : Jul 17, 2024, 12:53 AM IST
ಹರಿಹರದಲ್ಲಿ ಬೆಳ್ಳಂ ಬೆಳಿಗ್ಗೆ ವಿವಿಧ ವಾರ್ಡಗಳಿಗೆ ಬೇಟಿ ಪರಿಶೀಲನೆ ಸ್ವಚ್ಛತೆಗೆ  ಮುಂದಾದ ಆಯುಕ್ತ ಸುಬ್ರಮಣ್ಯ ಶೆಟ್ಟಿ ಹಾಗೂ ಸಿಬ್ಬಂದಿ. | Kannada Prabha

ಸಾರಾಂಶ

ಹರಿಹರ ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ನಗರಸಭೆ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರ ತಂಡದೊಂದಿಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತಾ ವ್ಯವಸ್ಥೆ ಪರಿಶೀಲಿಸಿದರು.

- ನಗರಸಭೆ ವಾರ್ಡ್‌ಗಳಲ್ಲಿ ಪರಿಸರ ಸ್ವಚ್ಛತಾ ಕಾರ್ಯ

- - - ಕನ್ನಡ ಪ್ರಭ ವಾರ್ತೆ ಹರಿಹರ

ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ನಗರಸಭೆ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರ ತಂಡದೊಂದಿಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತಾ ವ್ಯವಸ್ಥೆ ಪರಿಶೀಲಿಸಿದರು.

ವಿದ್ಯಾನಗರದ ಚರಂಡಿ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿದ್ದ ಕಳೆಗಿಡಗಳು, ಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ವಸ್ತುಗಳನ್ನು ಸ್ವಚ್ಛತೆಗೊಳಿಸಲು ಕ್ರಮ ಕೈಗೊಂಡರು.

ಈ ಸಂದರ್ಭ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಡೆಂಘೀ, ಚಿಕೂನ್‌ ಗುನ್ಯಾ ಸೇರಿದಂತೆ ಹಲವಾರು ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಜನರು ಭಯಗೊಂಡಿದ್ದಾರೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆ ಕಾರ್ಯಕ್ಕೆ ಮೊದಲು ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.

೩೧ ವಾರ್ಡ್‌ಗಳ ನಿವಾಸಿಗಳು ತಮ್ಮ ಮನೆಗಳ ಒಳಾಂಗಣ, ಹೊರಾಂಗಣ, ಅಕ್ಕಪಕ್ಕ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ಮಳೆನೀರು, ಚರಂಡಿ ನೀರು ಎಲ್ಲಿಐ ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ಪರದೆ ಹಾಕಿಕೊಂಡು, ಡೆಂಘೀಜ್ವರ ಬಾಧಿಸದಂತೆ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಇನ್ನು ಮುಂದೆ ಪ್ರತಿದಿನವೂ ಮುಂಜಾನೆ ವಾರ್ಡ್‌ಗಳಿಗೆ ಭೇಟಿ ನೀಡುವುದು, ಸ್ವಚ್ಛತೆ ಕಾರ್ಯವನ್ನು ಮಾಡಿಸುವುದು ನನ್ನ ಮೊದಲ ಗುರಿಯಾಗಿದೆ. ನಾಗರೀಕರು ನಗರವನ್ನು ಸುಂದರ ಮತ್ತು ಉತ್ತಮ ಪರಿಸರ ನಿರ್ಮಾಣ ಮಾಡುವುದಕ್ಕೆ ನಗರಸಭಾ ಅಧಿಕಾರಿಗಳು ಪೌರಕಾರ್ಮಿಕರೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.

ಇಂದು ವಿದ್ಯಾನಗರ, ಇಂದಿರಾ ನಗರ ಮತ್ತು ಭಾಗೀರಥಿ ಹಬ್ಬ ಹಿನ್ನೆಲೆ ಮೆಟ್ಟಲು ಹೊಳೆ ರಸ್ತೆಗೆ ತೆರಳಿ ಮೆಟ್ಟಲುಗಳನ್ನು ಸ್ವಚ್ಛಗೊಳಿಸಲಾಗಿದೆ. ತಾಯಂದಿರಿಗೆ ನದಿಪೂಜೆ ಮಾಡುವುದಕ್ಕೆ ಅನುಕೂಲತೆ ಕಲ್ಪಿಸಿದ್ದೇವೆ ಎಂದರು.

ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್ ನಾಯ್ಕ್. ಅಮ್ರಿನ್. ಹೆಲ್ತ್ ಟ್ರೇನರ್ ಸೌಜನ್ಯ. ಪೌರಕಾರ್ಮಿಕರಾದ ಸದಾಶಿವ, ಸೋಮನಾಥ್, ರಾಜಪ್ಪ, ಮಲ್ಲಿಕಾರ್ಜುನ, ಡಿ ಹನುಮಂತಪ್ಪ, ಸ್ಥಳೀಯ ನಿವಾಸಿಗಳಾದ ಚಂದ್ರಕಾಂತ್, ಶಶಿಕುಮಾರ್, ಇತರರು ಇದ್ದರು.

- - - -೧೬ ಎಚ್‌ಆರ್‌ಆರ್ ೫:

ಹರಿಹರದಲ್ಲಿ ಬೆಳ್ಳಂಬೆಳಗ್ಗೆ ನಗರದಲ್ಲಿ ನಗರಸಭೆ ವಿವಿಧ ವಾರ್ಡ್‌ಗಳಿಗೆ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಭೇಟಿ ನೀಡಿ, ಸಿಬ್ಬಂದಿ ಮುಖೇನ ಪರಿಸರ ಸ್ವಚ್ಛತೆ ಕಾರ್ಯಗಳನ್ನು ನಡೆಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ