ಪಾಲಿಕೆಯಿಂದ ಪೌರ ಕಾರ್ಮಿಕರ ದಿನಾಚರಣೆ

KannadaprabhaNewsNetwork |  
Published : Sep 24, 2025, 01:00 AM IST
ಪೋಟೊ: 23ಎಸ್‌ಎಂಜಿಕೆಪಿ07ಶಿವಮೊಗ್ಗಮಹಾನಗರ ಪಾಲಿಕೆ ಮತ್ತು ಪಾಲಿಕೆಯ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2025ರ ಅಂಗವಾಗಿ ಮಂಗಳವಾರ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಕುವೆಂಪು ರಂಗಮಂದಿರದವರೆಗೆ ನಡೆದ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಪಾಲ್ಗೊಂಡಿದ್ದು ಹೀಗೆ... | Kannada Prabha

ಸಾರಾಂಶ

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ಮತ್ತು ಪಾಲಿಕೆಯ ನೌಕರರ ಸಂಘದಿಂದ ಮಂಗಳವಾರ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಕುವೆಂಪು ರಂಗಮಂದಿರದವರೆಗೆ ಪಾಲಿಕೆಯ ನೌಕರರು ವಿವಿಧ ವೇಷಭೂಷಣಗಳೊಂದಿಗೆ ಮತ್ತು ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.

ಶಿವಮೊಗ್ಗ: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ಮತ್ತು ಪಾಲಿಕೆಯ ನೌಕರರ ಸಂಘದಿಂದ ಮಂಗಳವಾರ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಕುವೆಂಪು ರಂಗಮಂದಿರದವರೆಗೆ ಪಾಲಿಕೆಯ ನೌಕರರು ವಿವಿಧ ವೇಷಭೂಷಣಗಳೊಂದಿಗೆ ಮತ್ತು ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಆಯುಕ್ತ ಮಾಯಣ್ಣಗೌಡ ಕೂಡ ಕುಣಿದು ಕುಪ್ಪಳಿಸಿ ಪೌರ ಕಾರ್ಮಿಕರ ಜೊತೆ ಸಂಭ್ರಮ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಗೋವಿಂದ, ಉಪಾಧ್ಯಕ್ಷ ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಖಜಾಂಚಿ ಮಂಜಣ್ಣ ಹಾಗೂ ಪೌರಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಪೌರ ಕಾರ್ಮಿಕರು ಭಾಗವಹಿಸಿದ್ದರು.ಪೌರಕಾರ್ಮಿಕರಿಗೆ ಸನ್ಮಾನ: ನವರಾತ್ರಿ ಹಬ್ಬವು ಭಕ್ತಿ ಮತ್ತು ಸಂಭ್ರಮ ತೋರಿದ ಸಂದರ್ಭದಲ್ಲಿ, ಇಂಡಿಯಾ ಸ್ವೀಟ್ ಹೌಸ್ ಶಿವಮೊಗ್ಗದ ಪೌರಕಾರ್ಮಿಕರನ್ನು ಗೌರವಿಸುವ ವಿಶೇಷ ಹೆಜ್ಜೆ ಇಟ್ಟಿತು.

ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ 1,000 ಪೌರಕಾರ್ಮಿಕರಿಗೆ ಸಿಹಿ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಜೊತೆಗೆ, ತೀವ್ರ ಬಿಸಿಲಿನಿಂದ ರಕ್ಷಣೆಗಾಗಿ ಪ್ರತಿಯೊಬ್ಬರಿಗೂ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ಯಾಪ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಪಾಲಿಕೆ ಆಯುಕ್ತರಾದ ಮಾಯಣ ಗೌಡ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಮಾಯಣ್ಣಗೌಡ, ಪೌರಕಾರ್ಮಿಕರು ನಿರಂತರ ಶ್ರಮಿಸಿ, ಕಾಣದಂತೆಯೇ ನಮ್ಮ ನಗರವನ್ನು ಸ್ವಚ್ಛ ಮತ್ತು ವಾಸ ಯೋಗ್ಯವಾಗಿರಿಸುತ್ತಾರೆ. ನವರಾತ್ರಿಯಂತಹ ಹಬ್ಬಗಳಲ್ಲಿ ಅವರ ಸೇವೆಯನ್ನು ಬೆಳಕಿಗೆ ತಂದು, ಗೌರವದಿಂದ ಅವರ ಕೆಲಸವನ್ನು ಆಚರಿಸುವುದು ನಮ್ಮ ಹೊಣೆಗಾರಿಕೆ ಎಂದರು. ಇಂಡಿಯಾ ಸ್ವೀಟ್ ಹೌಸ್ ಸಂಸ್ಥಾಪಕರಾದ ಶ್ವೇತಾ ಮಾತನಾಡಿ, ನಮ್ಮ ಉಪಕ್ರಮವು ಒಳಗೊಳ್ಳುವಿಕೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ನವರಾತ್ರಿಯಲ್ಲೂ ನಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವವರನ್ನು ನೆನಪಿಸುವುದಾಗಿದೆ ಎಂದು ತಿಳಿಸಿದರು.

ವಿಶ್ವನಾಥ್ ಮಾತನಾಡಿ, ವ್ಯವಹಾರ, ಸಮುದಾಯ ಮತ್ತು ನಾಗರಿಕ ಸಂಸ್ಥೆಗಳನ್ನು ಸೇತುವೆ ಮಾಡುವ ಮೂಲಕ, ನಾವು ಕೇವಲ ಸಿಹಿಯನ್ನು ಮಾತ್ರವಲ್ಲ, ಮೌಲ್ಯಗಳನ್ನೂ ಹಂಚಿಕೊಳ್ಳುತ್ತಿದ್ದೇವೆ ಎಂದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ