ಶಿವಮೊಗ್ಗ: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ಮತ್ತು ಪಾಲಿಕೆಯ ನೌಕರರ ಸಂಘದಿಂದ ಮಂಗಳವಾರ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಕುವೆಂಪು ರಂಗಮಂದಿರದವರೆಗೆ ಪಾಲಿಕೆಯ ನೌಕರರು ವಿವಿಧ ವೇಷಭೂಷಣಗಳೊಂದಿಗೆ ಮತ್ತು ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಆಯುಕ್ತ ಮಾಯಣ್ಣಗೌಡ ಕೂಡ ಕುಣಿದು ಕುಪ್ಪಳಿಸಿ ಪೌರ ಕಾರ್ಮಿಕರ ಜೊತೆ ಸಂಭ್ರಮ ಹಂಚಿಕೊಂಡರು.
ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ 1,000 ಪೌರಕಾರ್ಮಿಕರಿಗೆ ಸಿಹಿ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಜೊತೆಗೆ, ತೀವ್ರ ಬಿಸಿಲಿನಿಂದ ರಕ್ಷಣೆಗಾಗಿ ಪ್ರತಿಯೊಬ್ಬರಿಗೂ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ಯಾಪ್ಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಪಾಲಿಕೆ ಆಯುಕ್ತರಾದ ಮಾಯಣ ಗೌಡ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಮಾಯಣ್ಣಗೌಡ, ಪೌರಕಾರ್ಮಿಕರು ನಿರಂತರ ಶ್ರಮಿಸಿ, ಕಾಣದಂತೆಯೇ ನಮ್ಮ ನಗರವನ್ನು ಸ್ವಚ್ಛ ಮತ್ತು ವಾಸ ಯೋಗ್ಯವಾಗಿರಿಸುತ್ತಾರೆ. ನವರಾತ್ರಿಯಂತಹ ಹಬ್ಬಗಳಲ್ಲಿ ಅವರ ಸೇವೆಯನ್ನು ಬೆಳಕಿಗೆ ತಂದು, ಗೌರವದಿಂದ ಅವರ ಕೆಲಸವನ್ನು ಆಚರಿಸುವುದು ನಮ್ಮ ಹೊಣೆಗಾರಿಕೆ ಎಂದರು. ಇಂಡಿಯಾ ಸ್ವೀಟ್ ಹೌಸ್ ಸಂಸ್ಥಾಪಕರಾದ ಶ್ವೇತಾ ಮಾತನಾಡಿ, ನಮ್ಮ ಉಪಕ್ರಮವು ಒಳಗೊಳ್ಳುವಿಕೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ನವರಾತ್ರಿಯಲ್ಲೂ ನಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವವರನ್ನು ನೆನಪಿಸುವುದಾಗಿದೆ ಎಂದು ತಿಳಿಸಿದರು.
ವಿಶ್ವನಾಥ್ ಮಾತನಾಡಿ, ವ್ಯವಹಾರ, ಸಮುದಾಯ ಮತ್ತು ನಾಗರಿಕ ಸಂಸ್ಥೆಗಳನ್ನು ಸೇತುವೆ ಮಾಡುವ ಮೂಲಕ, ನಾವು ಕೇವಲ ಸಿಹಿಯನ್ನು ಮಾತ್ರವಲ್ಲ, ಮೌಲ್ಯಗಳನ್ನೂ ಹಂಚಿಕೊಳ್ಳುತ್ತಿದ್ದೇವೆ ಎಂದರು.