ಸಂಗೀತ ಕ್ಷೇತ್ರದ ದಿಗ್ಗಜ ಪುಟ್ಟರಾಜ ಗವಾಯಿ

KannadaprabhaNewsNetwork |  
Published : Sep 04, 2025, 01:01 AM IST
3ಕೆಕೆಆರ್2: ಕುಕನೂರಿನಲ್ಲಿ ಜರುಗಿದ ಪುಟ್ಟರಾಜ ಗವಾಯಿಗಳ 15ನೇ ಪುಣ್ಯಾ ಸ್ಮರಣೆ ಕಾರ್ಯಕ್ರಮವನ್ನು ವಕೀಲ ಬಸವರಾಜ  ಜಂಗ್ಲಿ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶ ಹಾಗೂ ವಿದೇಶದಲ್ಲಿ ಪುಟ್ಟರಾಜ ಗವಾಯಿಗಳವರ ಶಿಷ್ಯರು ಹಾಗೂ ಭಕ್ತರು ಇದ್ದಾರೆ. ಅವರು ಕಲಿಸಿದ ಸಂಗೀತದಿಂದ ನಾಡಿನಾದ್ಯಂತ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಾ ಗುರು-ಶಿಷ್ಯರ ಪರಂಪರೆ ಮುಂದುವರಿಸಿಕೊಂಡು ನಡೆದಿದ್ದಾರೆ.

ಕುಕನೂರು:

ಸಂಗೀತ ಕ್ಷೇತ್ರದ ದಿಗ್ಗಜ ಪುಟ್ಟರಾಜ ಗವಾಯಿಗಳು ಅಂಧ, ಅನಾಥ ಮಕ್ಕಳಿಗೆ ಸಂಗೀತ ಕಲೆ ನೀಡಿ ಅವರ ಬದುಕಿಗೆ ದಾರಿದೀಪವಾದರು. ಪ್ರತಿಯೊಬ್ಬ ಕಲಾವಿದನ ಹೃದಯ ಮಂದಿರದಲ್ಲಿ ಶಾಶ್ವತವಾಗಿ ಅವರು ನೆಲೆಸಿದ್ದಾರೆ ಎಂದು ವಕೀಲ ಬಸವರಾಜ ಜಂಗ್ಲಿ ಹೇಳಿದರು.

ಪಟ್ಟಣದ 8ನೇ ವಾರ್ಡಿನ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀಪಂಚಾಕ್ಷರಿ ಸಂಗೀತ, ಸಾಹಿತ್ಯ, ಕ್ರೀಡೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶ್ರೀಪಂಚಾಕ್ಷರಿ ಸಂಗೀತ ಪಾಠಶಾಲೆ, ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ 15ನೇ ಪುಣ್ಯಸ್ಮರಣೆ ನಿಮಿತ್ತ ಜರುಗಿದ ಸಂಗೀತ ಕಾರ್ಯಕ್ರಮ ಹಾಗೂ ಚುಟುಕು ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ದೇಶ ಹಾಗೂ ವಿದೇಶದಲ್ಲಿ ಪುಟ್ಟರಾಜ ಗವಾಯಿಗಳವರ ಶಿಷ್ಯರು ಹಾಗೂ ಭಕ್ತರು ಇದ್ದಾರೆ. ಅವರು ಕಲಿಸಿದ ಸಂಗೀತದಿಂದ ನಾಡಿನಾದ್ಯಂತ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಾ ಗುರು-ಶಿಷ್ಯರ ಪರಂಪರೆ ಮುಂದುವರಿಸಿಕೊಂಡು ನಡೆದಿದ್ದಾರೆ. ಕನ್ನಡ ನಾಡಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಶರಣಪ್ಪ ಕೊಪ್ಪದ ಮಾತನಾಡಿ, ಪುಟ್ಟರಾಜ ಗವಾಯಿಗಳವರು ನಡೆದು ಬಂದ ದಾರಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಹಾಗೂ ತಬಲಾ ಕಲಾವಿದ ಖಾದಿರಸಾಬ್ ಸಿದ್ನೆಕೊಪ್ಪ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಚುಟುಕು ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಿಂದ ಕವಿಗೋಷ್ಠಿ ನಡೆಯಿತು.

ಈ ವೇಳೆ ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಪತ್ರಕರ್ತ ಕನಕರಾಯ ಭಜಂತ್ರಿ, ಲಕ್ಷ್ಮಣ ಕಾಳಿ, ರವಿಕುಮಾರ ಹಿರೇಮನಿ, ಶಾವಮ್ಮ ಭಜಂತ್ರಿ, ಕಲಾವಿದ ಬಸವರಾಜ ಭಜಂತ್ರಿ, ಚಂದ್ರಶೇಖರ ಭಜಂತ್ರಿ, ಮಲ್ಲಪ್ಪ ವಡ್ಡಟ್ಟಿ, ಸುಮಂತ್ ಭಜಂತ್ರಿ, ಶಂಕ್ರಪ್ಪ ಬಡಿಗ್ಯಾರ್, ಪದ್ಮಾವತಿ ಭಜಂತ್ರಿ, ಶೋಭಾ ವಡ್ಡಟ್ಟಿ, ಜಾನಕಿ ಕಿತ್ತೂರ, ಭೂಮಿಕಾ ಭಜಂತ್ರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ