- ರಾಜ್ಯಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಆರ್.ಎಂ.ಕೇಶವಮೂರ್ತಿ ಅಭಿಮತ
ಕನ್ನಡಪ್ರಭ ವಾರ್ತೆ ಹರಿಹರ
ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಮತ್ತು ಹೊಂದಾಣಿಕೆಯ ಗುಣವು ಸುಖೀ ದಾಂಪತ್ಯಕ್ಕೆ ಮೂಲಾಧಾರ ಎಂದು ಜೀವ ವಿಮಾ ನಿಗಮದ ಪ್ರಾದೇಶಿಕ ಮಾರುಕಟ್ಟೆ ಪ್ರಬಂಧಕ ಆರ್.ಎಂ. ಕೇಶವಮೂರ್ತಿ ಹೇಳಿದರು.ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಎಲ್ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾವೇಶದ ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಮಾತನಾಡಿ, ಶ್ರೀರಾಮನು ಆದರ್ಶ ಪುರುಷ, ಏಕಪತ್ನಿವ್ರತಸ್ಥ ಹಾಗೂ ಧರ್ಮನಿಷ್ಠ ರಾಜನಾಗಿದ್ದು, ಅವರ ಮಹೋನ್ನತ ಜೀವನ ಚರಿತ್ರೆಯನ್ನು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಪರಿಚಯಿಸಿದವರು ವಾಲ್ಮೀಕಿ ಮಹರ್ಷಿಗಳು ಎಂದು ಹೇಳಿದರು.
ಬೆಳಗಾವಿಯ ಎಲ್ಐಸಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಕೆ ರಾಜ್ಯಾಧ್ಯಕ್ಷ ಬಿ.ಟಿ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಎಲ್ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ಗೌರವ ಅಧ್ಯಕ್ಷ ಡಿ.ಕೆ.ರಾಮಚಂದ್ರಪ್ಪ, ಕಾರ್ಯದರ್ಶಿ ನಂದೀಶ್ ಬ್ಯಾಡಗಿ, ಖಜಾಂಚಿ ಮಹೇಶ್, ದಾವಣಗೆರೆಯ ಸಿ.ರವಿ, ಹೊಸಪೇಟೆಯ ಚಂದ್ರಾಮಪ್ಪ ದೊರೆ ಹಾಗೂ ವಿವಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
(ಕೋಟ್) ರಾಮಾಯಣ ಕೇವಲ ಒಂದು ಕಥೆಯಲ್ಲ. ಅದು ಮಾನವ ಜೀವನಕ್ಕೆ ದಾರಿದೀಪವಾಗಿರುವ ಮೌಲ್ಯಗಳ ಗ್ರಂಥವಾಗಿದೆ. ಶ್ರೀರಾಮನು ತಂದೆ- ತಾಯಿಯ ಆಜ್ಞೆ ಪಾಲನೆ, ಸತ್ಯನಿಷ್ಠೆ, ಧರ್ಮಪಾಲನೆ ಹಾಗೂ ಏಕಪತ್ನಿವ್ರತದ ಮೂಲಕ ಆದರ್ಶ ಜೀವನ ನಡೆಸಿದ ಮಹಾಪುರುಷ. ರಾಮನ ಜೀವನ ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದೆ.
- - -
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಎಲ್ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ವತಿಯಿಂದ ರಾಜ್ಯಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಪ್ರಸನ್ನಾನಂದ ಶ್ರೀ ಭಾಗವಹಿಸಿದ್ದರು.