ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರು ಅವರ ನುಡಿ ನಮನ ಅಂಗವಾಗಿ ಸಮೀಪದ ಯರಗೋಳ ಗ್ರಾಮದ ಸರ್ಕಾರಿ ಸಾಮಾನ್ಯ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೀಮಾಶಂಕರ್ ಮಮ್ಮದರ ಮಾತನಾಡಿ, ಕಂದಕೂರ ಮನೆತನದ ದಿ. ನಾಗನಗೌಡ ಕಂದಕೂರು ಅವರು ಕಾರ್ಯಕರ್ತರ ಸಂಕಷ್ಟಗಳಿಗೆ ಬೆನ್ನೆಲುಬಾಗಿದ್ದರು. ತಮ್ಮ ಜೀವನದಲ್ಲಿ ಪಕ್ಷ ನಿಷ್ಠೆ, ಜಾತ್ಯತೀತ ತತ್ವ, ಸಮಾನತೆ, ಮಾನವೀಯತೆ, ಕಾಳಜಿ ಅಳವಡಿಸಿಕೊಂಡಿದ್ದರು ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅಲ್ಲಿಪೂರ ಅವರು ದಿ. ನಾಗನಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಲಾರ್ಪಣೆ ಮಾಡಿ, ಮೌನಚರಣೆ ಸಲ್ಲಿಸಿದರು.
ಮುಖಂಡರಾದ ಮಾರ್ಕಂಡಪ್ಪ ಮಾನೆಗಾರ್, ಚಂದ್ರಪ್ಪ ಇದ್ದಲಿ, ಹಣಮಂತ ತಳವಾರ್, ಶೇಖ್ ಮುಜಾಹಿದ್ದೀನ್, ಮೈಬೂಬ್ ಪಾಷಾ, ಅಶೋಕ್ ತೇಜು, ದೇವಪ್ಪ ಬಾನರ್, ಪುಂಡಲೀಕ, ನಾಗರಾಜ್ ವಿಶ್ವಕರ್ಮ, ಶಿವಕುಮಾರ್ ಬೆಂಕಿ, ಶಿವಕುಮಾರ್ ಮಾಕಲ್, ಮಂಜುನಾಥ ಸ್ವಾಮಿ, ಮಹೇಶ್ ದಿಬ್ಬಾ ಇದ್ದರು.