ನಾಗನಗೌಡರು ನಂಬಿದವರ ಕೈಬಿಟ್ಟಿರಲಿಲ್ಲ: ವಿಜಯಕುಮಾರ್

KannadaprabhaNewsNetwork |  
Published : Feb 05, 2024, 01:48 AM IST
ಯಾದಗಿರಿ ಸಮೀಪದ ಯರಗೋಳ ಗ್ರಾಮದಲ್ಲಿ ಭಾನುವಾರ ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರು ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ದಿ. ಮಾಜಿ ಶಾಸಕರಾದ ನಾಗನಗೌಡ ಕಂದುಕೂರು ಅವರು ತಮ್ಮ ಸುಧೀರ್ಘ ಕಾಲದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನ ಸಮನಾಗಿ ಕಂಡವರು.

ಕನ್ನಡಪ್ರಭ ವಾರ್ತೆ ಯಾದಗಿರಿ

ದಿ. ಮಾಜಿ ಶಾಸಕರಾದ ನಾಗನಗೌಡ ಕಂದುಕೂರು ಅವರು ತಮ್ಮ ಸುಧೀರ್ಘ ಕಾಲದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನ ಸಮನಾಗಿ ಕಂಡವರು. ನಂಬಿದ ಕಾರ್ಯಕರ್ತರ ಎಂದೂ ಕೈ ಬಿಟ್ಟವರಲ್ಲ ಎಂದು ಯರಗೋಳದ ವಿಜಯಕುಮಾರ ದಿಬ್ಬಾ ಹೇಳಿದರು.

ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರು ಅವರ ನುಡಿ ನಮನ ಅಂಗವಾಗಿ ಸಮೀಪದ ಯರಗೋಳ ಗ್ರಾಮದ ಸರ್ಕಾರಿ ಸಾಮಾನ್ಯ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೀಮಾಶಂಕರ್ ಮಮ್ಮದರ ಮಾತನಾಡಿ, ಕಂದಕೂರ ಮನೆತನದ ದಿ. ನಾಗನಗೌಡ ಕಂದಕೂರು ಅವರು ಕಾರ್ಯಕರ್ತರ ಸಂಕಷ್ಟಗಳಿಗೆ ಬೆನ್ನೆಲುಬಾಗಿದ್ದರು. ತಮ್ಮ ಜೀವನದಲ್ಲಿ ಪಕ್ಷ ನಿಷ್ಠೆ, ಜಾತ್ಯತೀತ ತತ್ವ, ಸಮಾನತೆ, ಮಾನವೀಯತೆ, ಕಾಳಜಿ ಅಳವಡಿಸಿಕೊಂಡಿದ್ದರು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅಲ್ಲಿಪೂರ ಅವರು ದಿ. ನಾಗನಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಲಾರ್ಪಣೆ ಮಾಡಿ, ಮೌನಚರಣೆ ಸಲ್ಲಿಸಿದರು.

ಮುಖಂಡರಾದ ಮಾರ್ಕಂಡಪ್ಪ ಮಾನೆಗಾರ್, ಚಂದ್ರಪ್ಪ ಇದ್ದಲಿ, ಹಣಮಂತ ತಳವಾರ್, ಶೇಖ್ ಮುಜಾಹಿದ್ದೀನ್‌, ಮೈಬೂಬ್‌ ಪಾಷಾ, ಅಶೋಕ್ ತೇಜು, ದೇವಪ್ಪ ಬಾನರ್, ಪುಂಡಲೀಕ, ನಾಗರಾಜ್ ವಿಶ್ವಕರ್ಮ, ಶಿವಕುಮಾರ್ ಬೆಂಕಿ, ಶಿವಕುಮಾರ್ ಮಾಕಲ್, ಮಂಜುನಾಥ ಸ್ವಾಮಿ, ಮಹೇಶ್ ದಿಬ್ಬಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ
ಮಾಗಡಿಯಲ್ಲಿ ಪತ್ರಕರ್ತರ ಭವನಕ್ಕೆ ಭೂಮಿಪೂಜೆ