ಕನ್ನಡಪ್ರಭವಾರ್ತೆ ಔರಾದ್
ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯುವಜನ ದೇಶದ ಭವಿಷ್ಯ ಬೆಳಗಿಸುವ ಚಿಂತನೆಯೊಂದಿಗೆ ಮತದಾನಕ್ಕೆ ಅಣಿಯಾಗಬೇಕು ಎಂದರು.
ಪ್ರೌಢಶಾಲಾ ಶಿಕ್ಷಕ ಜಗನ್ನಾಥ ದೇಶಮುಖ ವಿಶೇಷ ಉಪನ್ಯಾಸ ನೀಡಿ, ಭವ್ಯ ಭಾರತದ ಇತಿಹಾಸ ಪರಂಪರೆ ಪ್ರಪಂಚದ ಗಮನ ಸೆಳೆಯುವಂತೆ ಮಾಡುವಂತಹ ನಾಯಕನ ಆಯ್ಕೆ ನಮ್ಮ ಕೈಯಲ್ಲಿದೆ. ಧನಾತ್ಮಕ ಚಿಂತನೆ, ಅಭಿವೃದ್ಧಿಯ ದೂರದೃಷ್ಟಿ, ಪರೋಪಕಾರದ ನಿಲುವು ಯುವಕರದ್ದಾಗಬೇಕು ಎಂದರು.ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಯುಸುಫಮಿಯ್ಯ, ದೈಹಿಕ ಶಿಕ್ಷಣಾಧಿಕಾರಿ ಜೋಯಲ್ ಜೈರಾಜ್, ಪಿಎಸ್ಐ ರೇಣುಕಾ ಭಾಲೇಕರ್, ವಕೀಲರಾದ ವಿಜಯ ಜಾಧವ, ಬಾಲಾಜಿ ಉಪಾಸೆ, ಸಂಗಮೇಶ ಮರಖಲೆ ಸೇರಿ ಇನ್ನಿತರರಿದ್ದರು.