ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ಜ. 31ರಂದು ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ 13 ಮಂದಿಯೂ ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಪಟ್ಟಣದ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ವರಿಷ್ಠರ ಆಯ್ಕೆಯನ್ನು ನಿಗದಿ ಪಡಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್. ಬಸಂತ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಮಹದೇವಯ್ಯ ಹೊರತು ಪಡಿಸಿ ಬೇರಾರು ಸ್ಪರ್ಧಿಸದ ಹಿನ್ನೆಲೆ ಅವರು ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯ ಎಂ.ಎನ್. ಸೋಮಶೇಖರ್ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಎಚ್.ಎಸ್. ಲೋಕೇಶ್, ಕೆ.ಎನ್. ರಮೇಶರಾವ್ ಕದಂ, ಅಶೋಕ ಕುಮಾರ್, ಸಿ.ಪಿ.ಎಸ್.ಲೋಕೇಶ್, ಎಚ್.ಟಿ. ಗೋಪಾಲೇಗೌಡ, ಜೆ. ವೆಂಕಟೇಶ್, ಡಾ.ಎಂ.ಪಿ. ಸುಮತಿ, ವೀಣಾ ಕುಮಾರ್, ಮರಿಲಿಂಗಾಚಾರ್, ಚೇತನ, ಎಲ್. ರಂಗನಾಥ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ. ಸುರೇಶ್, ವ್ಯವಸ್ಥಾಪಕ ಎಂ.ಪಿ. ಸುಹಾಸ್ ಗೌಡ ಇದ್ದರು.ಒಂದು ಸಾವಿರ ಕೋಟಿಗೆ ಬೆಳೆಸಲು ಶ್ರಮಿಸುತ್ತೇನೆ
ಬ್ಯಾಂಕಿನ ನೂತನ ಅಧ್ಯಕ್ಷ ಕೆ.ಎನ್. ಬಸಂತ್ ಮಾತನಾಡಿ, ನಮ್ಮ ಬ್ಯಾಂಕ್ ಅನ್ನು ಪ್ರಗತಿ ಪತದತ್ತ ಕೊಂಡೊಯ್ಯುವ ಮೂಲಕ ಪ್ರಸ್ತುತ ಇರುವ 820 ಕೋಟಿ ವ್ಯವಹಾರವನ್ನು ಒಂದು ಸಾವಿರ ಕೋಟಿಗೆ ಬೆಳೆಸಲು ಶ್ರಮಿಸುತ್ತೇನೆ. ಸಂಪೂರ್ಣ ಸಾಲ ವಸೂಲಾತಿ ಮಾಡುವ ಮೂಲಕ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ನನ್ನ ಮೇಲಿಟ್ಟಿರುವ ನಂಬಿಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಬ್ಯಾಂಕ್ನ್ನು ಬೇರೆ ಬೇರೆ ತಾಲೂಕುಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ, ಅಲ್ಲದೆ ಎಟಿಎಂ ಗಳನ್ನು ಹೆಚ್ಚಿಸುವುದು ಸ್ವಂತ ಆಪ್ ಅಭಿವೃದ್ಧಿ ಪಡಿಸಿ ಗ್ರಾಹಕ ಸ್ನೇಹಿಯಾಗುವುದು, ಸಣ್ಣ ಪುಟ್ಟ ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಬ್ಯಾಂಕಿನ ದ್ಯೇಯೋದ್ದೇಶಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ನೂತನ ಆಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಅಭಿನಂದಿಸಿದರು.
ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಕಸಾಪ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್, ಪುರಸಭಾ ಮಾಜಿ ಅಧ್ಯಕ್ಷ ತಮ್ಮನಾಯಕ, ಸುಬ್ರಹ್ಮಣ್ಯ, ಮಾಜಿ ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಕೆ.ಎಲ್. ಜಗದೀಶ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಅಲ್ಪ ಕಾಲೇಜು ಕಾರ್ಯದರ್ಶಿ ವೈ.ಎಸ್. ಸುಬ್ರಮಣ್ಯ, ಮುಖಂಡರಾದ ದಿಡ್ಡಹಳ್ಳಿ ಬಸವರಾಜ್, ಮೇಲೂರು ನಾರಾಯಣ್, ಜಯಂತ್, ಕೇಶವ್, ಮಹದೇವ್, ಮಂಜು, ಚಂದ್ರಶೇಖರ್ ಇದ್ದರು.