ಚಂದ್ರಘಂಟಾ ದೇವಿ ಆರಾಧನೆ । ಬೂದು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಮಹಿಳೆಯರು
ಭಾರತೀಯ ಸಂಸ್ಕೃತಿಯಲ್ಲಿ ನವರಾತ್ರಿ ಹಬ್ಬವು ತನ್ನದೇ ಸ್ಥಾನವನ್ನು ಹೊಂದಿದೆ. ನವ ದುರ್ಗೆಯರ ಆರಾಧನೆಯ ಆಚರಣೆ ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುವುದರೊಂದಿಗೆ ನವ ಜೀವನಕ್ಕೆ ಚೈತನ್ಯ ನೀಡುವ ದಿನಗಳಾಗಿವೆ ಎಂದು ವಿದ್ಯಾನಗರ ಮಹಿಳಾ ಸಂಘದ ಗೌರವಾಧ್ಯಕ್ಷೆಯಾದ ಇಂದ್ರಮ್ಮ ಸತೀಶ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾನಗರದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ವಿಷ್ಣು ಪಂಚಾಯತನ ಶ್ರೀಕ್ಷೇತ್ರದಲ್ಲಿ ನವರಾತ್ರಿ ಮೂರನೇ ದಿನವಾದ ಶನಿವಾರ ಚಂದ್ರಘಂಟಾ ದೇವಿ ಆಚರಣೆ ಸಂದರ್ಭದಲ್ಲಿ ಬೂದು ಬಣ್ಣದ ಸೀರೆಯೊಂದಿಗೆ ಭಾಗವಹಿಸಿದ್ದ ವಿದ್ಯಾನಗರ ನವ ಸಹಾಯ ಸಂಘದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು..ನವರಾತ್ರಿ ಹಬ್ಬದ ಒಂಭತ್ತು ದಿನಗಳು ಸಹ ಒಂದೊಂದು ಇತಿಹಾಸದೊಂದಿಗೆ ಧಾರ್ಮಿಕ ಮತ್ತು ವೈಜ್ಞಾನಿಕ ಸಂದೇಶಗಳನ್ನು ನೀಡುತ್ತವೆ. ಈ ದಿನಗಳಲ್ಲಿ ಮಹಿಳೆಯರು ಸಡಗರ ಸಂಭ್ರಮದಿಂದ ನವದುರ್ಗೆಯರಿಗೆ ಪ್ರಿಯವಾದ ಬಣ್ಣಗಳ ಉಡುಗೆಗಳನ್ನು ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ದುರ್ಗೆ ಅವತಾರವು ಲೋಕ ಕಲ್ಯಾಣಾರ್ಥವಾಗಿ ಅವತರಿಸಿದ ಶಕ್ತಿ ದೇವತೆ ಕೂಡ ಆಗಿದೆ. ಇಂತಹ ದಿನಗಳಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಸ್ಥಳೀಯ ದೇವಸ್ಥನಗಳಿಗೆ ಕರೆದುಕೊಂಡು ಹೋಗಿ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಡಬೇಕು. ಮನೆಯಲ್ಲಿ ಮೊಬೈಲ್ ಹೊರತುಪಡಿಸಿ ಹೊರಗೊಂದು ಸುಂದರ ಪ್ರಪಂಚ ಮತ್ತು ವಿಚಾರಗಳಿವೆ ಎಂದು ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ನಮ್ಮ ಸನಾತನ ಸಂಸ್ಕೃತಿ ಸಂಸ್ಕಾರ ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾನಗರ ಮಹಿಳೆ ಸ್ವ ಸಹಾಯ ಸಂಘದ ರಾಧಮ್ಮ, ಗೀತಾ ಶಿವಕುಮಾರ್, ವಿದ್ಯಾ ಪುರುಷೋತ್ತಮ್, ರೂಪ ಪರಮೇಶ್, ಮಂಜುಳಾ ರಾಜು, ಅನಿತಾ, ಮಣಿ, ನಂದಿನಿ, ಹೇಮಲತಾ, ಅನ್ನಪೂರ್ಣ, ವಕೀಲೆ ದೇವಿ ಹಾಗೂ ನಗರದ ವಿವಿಧೆಡೆಯಿಂದ ಆಗಮಿಸಿದ ಮಹಿಳೆಯರು ಇದ್ದರು.