ಚಿಕ್ಕಮಗಳೂರು: ಪ್ರಕರಣ ಒಂದರ ಸಂಬಂಧ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಚಿಕ್ಕಮಗಳೂರು ನ್ಯಾಯಲಯಕ್ಕೆ ಬುಧವಾರ ಹಾಜರು ಪಡಿಸಲಾಯಿತು.
ಜುಲೈ 21ಕ್ಕೆ ಪ್ರಕರಣದ ವಿಚಾರಣೆಯನ್ನು ಜೆಎಂಎಫ್ ಸಿ ನ್ಯಾಯಾಲಯ ಮುಂದೂಡಿದೆ. ಕೇರಳದಲ್ಲಿ ಶರಣಾಗತಿಯಾಗಿದ್ದ ಬಿ. ಜಿ. ಕೃಷ್ಣಮೂರ್ತಿ, ಸಾಕೇತ್ ರಾಜನ್ ನಂತರ ರಾಜ್ಯದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನಕ್ಸಲ್ ನಾಯಕತ್ವ ವಹಿಸಿದ್ದರು.
ಕಳೆದ ವರ್ಷ ಕೇರಳದಲ್ಲಿ ಶರಣಾಗತಿಯಾಗಿದ್ದ ಮೊಸ್ಟ್ ವಾಂಟೆಡ್ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಮೇಲೆ ನಕ್ಸಲ್ ಚಟುವಟಿಕೆ ಸಂಬಂಧ 66 ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಿ.ಜಿ. ಕೃಷ್ಣಮೂರ್ತಿ ವಿರುದ್ದ ಪ್ರಕರಣ ಇದ್ದು, ದಶಕದ ಹಿಂದೆ ಕೇರಳದತ್ತ ಬಿ.ಜಿ. ಕೃಷ್ಣಮೂರ್ತಿ ಹಾಗೂ ಇತರೇ ನಕ್ಸಲರು ಮುಖ ಮಾಡಿದ್ದರು. 25 ಕೆಸಿಕೆಎಂ 4ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು.