ಗಂಗಾವತಿ:ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ, ಕಾಲಮಿತಿಯೊಳಗೆ ಕೊಳಗೇರಿ ಪ್ರದೇಶ ಘೋಷಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಪರಿಶೀಲನೆ: ಕೊಳಗೇರಿ ಪ್ರದೇಶದಲ್ಲಿ ಇತ್ತೀಚಿಗೆ ವಿತರಿಸಲಾದ ಹಕ್ಕುಪತ್ರಗಳ ಮನೆಗಳ ಕಾಲನಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿದರು. ಜೈಭೀಮನಗರ, ನೀಲಕಂಠೇಶ್ವರ, ಅಮರಭಗತ್ ಸಿಂಗ್ ನಗರ ಸೇರಿ ವಿವಿಧೆಡೆ ತೆರಳಿ ಜನರಿಂದ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ನಗರಸಭೆ ಮಾಜಿ ಸದಸ್ಯ ಎಫ್. ರಾಘವೇಂದ್ರ, ಕೊಳಗೇರಿ ಅಭಿವೃದ್ಧಿ ಮಂಡಳಿ ಇಇ ಪ್ರವೀಣ, ಎಇಇ ಮಂಜುನಾಥ, ಮುಖಂಡರಾದ ಅಜಯಕುಮಾರ, ದೊಡ್ಡಭೋಜಪ್ಪ ಇತರರಿದ್ದರು.
ಕಲಿತ ಶಾಲೆಗೆ ಭೇಟಿ, ಅಭಿವೃದ್ಧಿ ಪಣ: ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ನಗರದ ಹಿರೇಜಂತಕಲ್ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಕಲಿತ ಶಾಲೆ ಅಭಿಮಾನದಿಂದ ಶಾಲೆಗೆ ಭೇಟಿ ನೀಡಿ, ಅಭಿವೃದ್ಧಿ ಕುರಿತು ಎಸ್ಡಿಎಂಸಿ ಮತ್ತು ಶಿಕ್ಷಕರೊಂದಿಗೆ ಸಭೆ ನಡೆಸಿದರು. ಶಾಲಾಭಿವೃದ್ಧಿಗೆ ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ಸಿಂಗ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಒಂದು ಕೋಟಿ ರು. ಅನುದಾನ ಮಂಜೂರು ಮಾಡಿಸಿದರು. ಅದರಂತೆ ಸಿಎಂ ನಿಧಿಯಿಂದ ₹2 ಕೋಟಿ ಅನುದಾನ ಮಂಜೂರಿಗೆ ಭರವಸೆ ನೀಡಿದರು. ಶಾಲೆಯ 75ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಣೆ ಕುರಿತು ಚರ್ಚಿಸಲಾಯಿತು. ತರಗತಿ ಕೊಠಡಿಗೆ ತೆರಳಿ ಮಕ್ಕಳ ಕಲಿಕಾಗುಣಮಟ್ಟ ಪರಿಶೀಲಿಸಿದರು. ನಗರಸಭೆ ಮಾಜಿ ಸದಸ್ಯರಾದ ಹುಲಿಗೆಮ್ಮ ಕಿರಿಕಿರಿ, ಹುಸೇನಪ್ಪ ಹಂಚಿನಾಳ್, ಎಸ್ಡಿಎಂಸಿ ಅಧ್ಯಕ್ಷ ಜಡಿಯಪ್ಪ, ಮುಖಂಡರಾದ ರಮೇಶ ಮಾಗಿ, ಹುಸೇನಪ್ಪ, ಪರಶುರಾಮ ಕಿರಿಕಿರಿ, ಮುಖ್ಯಶಿಕ್ಷಕ ತಿಪ್ಪವ್ವ ಉಳ್ಳಟ್ಟಿ ಇತರರಿದ್ದರು.